ನಮ್ಮೇರಿಕ ಅಂತಾರಾಷ್ಟ್ರೀಯ  ಕನ್ನಡ ನಾಟಕೋತ್ಸವಕ್ಕೆ  ತೆರೆ


Team Udayavani, May 17, 2021, 1:30 PM IST

Open International Kannada Drama Festival

ನ್ಯೂಯಾರ್ಕ್‌

ನಮ್ಮೇರಿಕ ಸಂಸ್ಥೆಯು ಮೊದಲ ಬಾರಿಗೆ ಆಯೋಜಿಸಿದ್ದ ಅಂತಾ ರಾಷ್ಟ್ರೀಯ ಆನ್‌ಲೈನ್‌ ಕನ್ನಡ ನಾಟ ಕೋತ್ಸವದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮೇ 3ರಂದು ವರ್ಚುವಲ್‌ನಲ್ಲಿ ನಡೆಯಿತು.

ತೀರ್ಪುಗಾರರಾದ ಚಂಪಾ ಶೆಟ್ಟಿ ಮಾತನಾಡಿ, ನಾಟಕೋತ್ಸವದಿಂದಾಗಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೊಂದು ದೊಡ್ಡ ರಿಲೀಫ್ ಮತ್ತು ಭಾಗವಹಿಸಿದವರಿಗೆ ಬಹುದೊಡ್ಡ ಬಹುಮಾನ. ನಾಟಕೋತ್ಸವದಲ್ಲಿ ಎಲ್ಲರ ಪ್ರಾಮಾಣಿಕ ಪ್ರಯತ್ನ ಎದ್ದು ಕಾಣುತ್ತಿತ್ತು ಎಂದರು.

ತೀರ್ಪುಗಾರರಾದ ಡಾ| ಎಂ.ಎಸ್‌. ವಿದ್ಯಾ ಮಾತನಾಡಿ, ನಾಟಕ ಎನ್ನು ವುದು ಸಂಪೂರ್ಣ ಕಲೆ. ಅದರಲ್ಲಿ ಪ್ರತಿ ಯೊಬ್ಬರೂ ಭಾಗವಹಿಸಲು ಇಷ್ಟ ಪಡು ತ್ತಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತುಂಬಾ ಖುಷಿ ಕೊಟ್ಟಿತು. ನಾಟಕದ ಆಯ್ಕೆ, ನಿರ್ದೇಶನ, ಅಭಿನಯ, ಕೆಮರಾ ಎಲ್ಲವೂ ಅದ್ಭುತವಾಗಿತ್ತು. ಟೀಕೆ ಮಾಡು

ವುದು ಸುಲಭ. ಆದರೆ ಆ ಹಿಂದಿರುವ ಕಷ್ಟ ಯಾರಿಗೂ ಗೊತ್ತಾಗುವುದಿಲ್ಲ. ಪ್ರತಿಯೊಬ್ಬರೂ ಪ್ರಯತ್ನ ಪಟ್ಟಿದ್ದಾರೆ. ತಂಡಗಳು ರಂಗ ಶಿಬಿರಗಳನ್ನು ಮಾಡಬೇಕು. ಪ್ರಸ್ತುತ ಸಂದರ್ಭಕ್ಕೆ ತಕ್ಕಂತ ಸಮಸ್ಯೆಗಳನ್ನು ತೆಗೆದುಕೊಂಡು ರಂಗಶಿಬಿರಗಳ ಮೂಲಕ ತರಬೇತಿ ಮಾಡಿದರೆ ಅದರಲ್ಲಿ ಹೆಚ್ಚು ಯಶಸ್ಸು ದೊರೆಯುವುದು ಎಂದರು.

ತೀರ್ಪುಗಾರರಾದ ಚೈತನ್ಯ ಮಾತನಾಡಿ, ರಂಗಭೂಮಿಯನ್ನು ವರ್ಚು ವಲ್‌ ಮಾಡುವುದು ಕಷ್ಟ. ಆದರೆ ಈಗಿನ ಸ್ಥಿತಿಯಲ್ಲಿ ಅದು ಅನಿವಾರ್ಯ. ಆನ್‌ಲೈನ್‌ ನಾಟಕ ಮಾಡುವುದು ಒಂದು ಪ್ರಕಾರವಾಗುತ್ತಿದೆ.

ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವುದು ಹೇಗೆ ಎಂಬುದನ್ನು ಯೋಚಿಸಬೇಕಿದೆ ಎಂದು ತಿಳಿಸಿದರು.  ತೀರ್ಪುಗಾರರಾದ ಶ್ರೀನಿವಾಸ್‌ ಪ್ರಭು ಮಾತನಾಡಿ, ರಂಗ ಸಂಭ್ರಮ ಕೊನೆಯ ಹಂತಕ್ಕೆ ಬಂದಿದೆ. ಬಹಳ ಒಳ್ಳೆಯ ಪ್ರಯತ್ನ. ಯಾರೂ ವೃತ್ತಿಪರ ನಟರು, ತಂತ್ರಜ್ಞರಲ್ಲ. ಆದರೂ ಯಶಸ್ವಿಯಾಗಿ ನಡೆಸಿದ್ದಾರೆ ಅದಕ್ಕೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು ಎಂದು ತಿಳಿಸಿದರು.

ನಾಟಕ ಸಮೂಹ ಮಾಧ್ಯಮ. ಹೀಗಾಗಿ ಇದಕ್ಕೊಂದು ಪ್ರೇಕ್ಷಕ ವೃಂದವಿರುತ್ತದೆ. ಅದ್ದರಿಂದ ಜವಾಬ್ದಾರಿಗಳು ಹೆಚ್ಚಾಗಿರುತ್ತದೆ. ಅದನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ತಿಳಿಸಿ ನಾಟಕ ಕಲಾವಿದರಿಗೆ ಕೆಲವೊಂದು ಕಿವಿ ಮಾತುಗಳನ್ನು ಹೇಳಿದರು.

ತೀರ್ಪುಗಾರರಾದ ಸುನೇತ್ರ ಪಂಡಿತ್‌ ಮಾತನಾಡಿ, ತಂತ್ರಜ್ಞಾನದ ಮೂಲಕ ಇಷ್ಟೆಲ್ಲ ಮಾಡಬಹುದು ಎಂಬುದನ್ನು ನಮ್ಮೇರಿಕ ತೋರಿಸಿಕೊಟ್ಟಿದೆ ಎಂದ ಅವರು, ನಾಟಕೋತ್ಸವದಲ್ಲಿ  ಪ್ರದರ್ಶನಗೊಂಡು 11 ನಾಟಕಗಳ ಕುರಿತು ಸಂಪೂರ್ಣ ವಿಶ್ಲೇಷಣೆ ನೀಡಿದರು.

ಕಾರ್ಯಕ್ರಮ ಪ್ರಾಯೋಜಿಸಿದ ಮೋಹನ್‌ ಕೃಷ್ಣ ರಾವ್‌ ಮಾತನಾಡಿ, ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು ಎಂದು ತಿಳಿಸಿದರು.  ಅವನೀಧರ್‌, ಇಂದುಶ್ರೀ ರವೀಂದ್ರ, ನಾಗತಿಹಳ್ಳಿ ಚಂದ್ರಶೇಖರ್‌ ಅವರು ವಿಜೇತರ ವಿವರವನ್ನು ಘೋಷಿಸಿದರು.  ಬಳಿಕ ಪ್ರಶಸ್ತಿ ವಿಜೇತರು, ಅಂತಿಮ ಸುತ್ತಿಗೆ ಆಯ್ಕೆಯಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಲ್ಲೀಶ್‌ ಶಾಸಿŒ, ಕಾರ್ಯಕ್ರಮ ಸಂಘಟಕರಾದ ಸ್ವಾತಿ, ಸೋಮಶೇಖರ್‌ ಮತ್ತಿತರರು ಕಾರ್ಯಕ್ರಮ ನಡೆದು ಬಂದ ಹಾದಿಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ನಿರೂಪಿಸಿದ ನಮ್ಮೇರಿಕ ಸಂಸ್ಥೆಯ ಸ್ಥಾಪಕಾಧ್ಯಕ್ಷ ಆನಂದ್‌ ರಾವ್‌,  ಪ್ರಪಂಚದ ವಿವಿಧ ಭಾಗಗಳಿಂದ ಬಂದಿದ್ದ 10 ತಂಡಗಳು ನಾಟಕೋತ್ಸವದಲ್ಲಿ ಭಾಗವಹಿಸಿದ್ದು, 11 ನಾಟಕಗಳು ಪ್ರದರ್ಶನಗೊಂಡಿದ್ದವು. ನಾಟಕಗಳ ಸಂಭ್ರಮದಲ್ಲಿ ಯುಗಾದಿಯನ್ನು ಆಚರಿಸಿದೆವು ಎಂದರು.  ನಮ್ಮೇರಿಕದಿಂದ ಮಕ್ಕಳು ಮತ್ತು ದೊಡ್ಡವರಿಗೆ ನಾಟಕದ ಶಿಬಿರಗಳನ್ನು ಆಯೋಜಿಸಲಾಗುತ್ತದೆ.  ಆದರೆ ರಿಹರ್ಸಲ್‌ಗೆ ಜನ ಸೇರಿಸುವುದು ಕಷ್ಟವಾಗು

ತ್ತದೆ. ಆದರೆ ವರ್ಚುವಲ್‌ ವೇದಿಕೆಯಿಂದಾಗಿ ಆ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಿದೆ ಎಂದ ಅವರು ನಾಟಕಗಳಿಗೆ ಹೇಗೆ ತೀರ್ಪು ನೀಡಲಾಯಿತು ಎಂಬುದನ್ನು ವಿವರಿಸಿದರು.  ಬಳಿಕ ಸಿಯಾಟಲ್‌ ಸಹ್ಯಾದ್ರಿ ಕನ್ನಡ ಕೂಟದಿಂದ ಬೀಚಿ ಅವರ ವಶೀಕರಣ ನಾಟಕ ಪ್ರದರ್ಶನ ನಡೆಯಿತು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.