ಪ್ರೇಕ್ಷಕರನ್ನು ಸೆಳೆಯುತ್ತಿರುವ ಯಕ್ಷಗಾನ “ಕಾಲಮಿತಿ’ ಪ್ರಯೋಗ

ಪಾವಂಜೆ ಮೇಳವಂತೂ ಕಾಲಮಿತಿ ಪ್ರದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿಯೇ ಮುನ್ನಡೆಯುತ್ತಿದೆ.

Team Udayavani, Mar 12, 2022, 11:10 AM IST

ಪ್ರೇಕ್ಷಕರನ್ನು ಸೆಳೆಯುತ್ತಿರುವ ಯಕ್ಷಗಾನ “ಕಾಲಮಿತಿ’ ಪ್ರಯೋಗ

ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ವೀಕ್ಷಿಸಲು ಮಧ್ಯರಾತ್ರಿಯ ಬಳಿಕ ಜನರೇ ಇರುವುದಿಲ್ಲ ಎಂಬ ಕೊರಗು ಇಂದು ನಿನ್ನೆಯದಲ್ಲ. ಕಳೆದೆರಡು ದಶಕಗಳಿಂದ ಹಲವು ಕಾರಣಗಳಿಂದಾಗಿ ರಾತ್ರಿ ನಿದ್ದೆಗೆಡಲು ಬಯಸದ ಮಂದಿ ಇಳಿ ಹೊತ್ತಿನ ಬಳಿಕ ಮನೆ ಕಡೆ ತೆರಳುತ್ತಿರುವುದು ಜನಜನಿತವಾದ ವಿಚಾರವಾಗಿದೆ.

ದಾಖಲೆಯ ಪ್ರದರ್ಶನ ಕಾಣುವ “ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟದಲ್ಲಂತೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದರೂ ಮಹಿಷಾ ಸುರನ ವಧೆಯ ಬಳಿಕ ನಮಗೆ ಕಾಣ ಸಿಗುವುದು ಬೆರಳೆಣಿಕೆಯ ಮಂದಿಯಷ್ಟೆ. ಎಷ್ಟೇ ಶ್ರೇಷ್ಠ ಪ್ರದರ್ಶನ ನೀಡಿದರೂ ನೋಡುವ ಕಣ್ಣುಗಳಿಲ್ಲದಿದ್ದರೆ, ಮೆಚ್ಚಿ ಉತ್ತೇಜಿಸುವ ಕಲಾಭಿಮಾನಿಗಳಿಲ್ಲದಿದ್ದರೆ ಎಂತಹ ಕಲಾವಿದನಿಗೂ ನಿರಾಸೆ ಮೂಡುವುದು ಸಹಜ.

ಇಂತಹ ಕಾಲಘಟ್ಟದಲ್ಲಿ ರಾತ್ರಿಯಿಡೀ ನಡೆಯು ತ್ತಿದ್ದ ಯಕ್ಷಗಾನ ಬಯಲಾಟಕ್ಕೆ ಇತಿಶ್ರೀ ಹಾಡಿ ಕಾಲಮಿತಿ ಪ್ರಯೋಗಕ್ಕೆ ನಾಂದಿ ಹಾಡಿದ ಶ್ರೇಯಸ್ಸು ಸಲ್ಲಬೇಕಾದದ್ದು ಹೊಸನಗರ ಮೇಳ (ಈಗಿನ ಹನುಮಗಿರಿ ಮೇಳ)ಕ್ಕೆ. ಆ ಬಳಿಕ ಶ್ರೀ ಧರ್ಮಸ್ಥಳ ಮೇಳವೂ ಇದನ್ನು ಅನುಸರಿಸಿತು. ಕಳೆದ ವರ್ಷ ನೂತನವಾಗಿ ತಿರುಗಾಟ ಆರಂಭಿಸಿದ ಪಾವಂಜೆ ಮೇಳವಂತೂ ಕಾಲಮಿತಿ ಪ್ರದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿಯೇ ಮುನ್ನಡೆಯುತ್ತಿದೆ.

ಕೊರೊನಾ ಬಳಿಕ ಯಕ್ಷಗಾನ ರಂಗದಲ್ಲಿ ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾತ್ರಿಯಿಡೀ ಪ್ರದರ್ಶನ ನೀಡುತ್ತಿದ್ದ ಎಲ್ಲ ಮೇಳಗಳೂ ಕಾಲ ಮಿತಿಗೆ ಇಳಿದು ಹೊಸ ಸಂಚಲನವನ್ನುಂಟು ಮಾಡಿವೆ. ವಾರದ ಎಲ್ಲ ದಿನಗಳಲ್ಲೂ ಬಹುತೇಕ ಮೇಳಗಳ ಯಕ್ಷಗಾನ ಪ್ರದರ್ಶನ ಕಿಕ್ಕಿರಿದ ಜನ ಸಂದಣಿಯಿಂದ ವಿಜೃಂಭಿಸುತ್ತಿದೆ. ವಿಶೇಷವಾಗಿ ಅತ್ಯಧಿಕ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಯಕ್ಷಗಾನದ ಹೊಸ ಪ್ರೇಕ್ಷಕರಾಗಿ ಈ ಬಾರಿ ಕಂಡು ಬಂದದ್ದು ಇಲ್ಲಿ ಉಲ್ಲೇಖನೀಯ.

ಕಾಲಮಿತಿಯ ಪ್ರದರ್ಶನ ಮಾತ್ರ ಯಕ್ಷಗಾನ ವನ್ನು ಉಳಿಸಿ, ಬೆಳೆಸಬಲ್ಲುದು ಎಂಬುದು ಈಗ ಸಾಬೀತಾಗಿದೆ. ಎಲ್ಲ ಮೇಳಗಳ ಯಜಮಾನರು, ಬಯಲಾಟದ ಸಂಘಟಕರು ಹಾಗೂ ಕಲಾಭಿ ಮಾನಿಗಳು “ಕಾಲಮಿತಿ’ ಮನಃಸ್ಥಿತಿಗೆ ಹೊಂದಿ ಕೊಳ್ಳುವುದು ಇಂದಿನ ಅನಿವಾರ್ಯತೆ.

-ಸತೀಶ್‌ ಶೆಟ್ಟಿ ಕೊಡಿಯಾಲಬೈಲ್‌, ಮಂಗಳೂರು

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.