ಬಾಯಲ್ಲಿ ನೀರೂರಿಸೋ ಕಣಿಲೆ ದೋಸೆ, ಕಣಿಲೆ ಪತ್ರೊಡೆ ಮಾಡೋ ವಿಧಾನ ಗೊತ್ತಾ!
ಶ್ರೀರಾಮ್ ನಾಯಕ್, Oct 17, 2019, 7:46 PM IST
ಬಿದಿರು ಕಣಿಲೆಯಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಇದು ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ. ಕಣಿಲೆಯ ಮೇಲ್ಭಾಗದ ಕಂದು ಪದರವನ್ನು ತೆಗೆದು ಒಳಗಿನ ಬಿಳಿಯ ಮೃದು ಭಾಗವನ್ನು ಕತ್ತರಿಸಿ. ನಂತರ ಚಿಕ್ಕ ಚಿಕ್ಕ ತುಂಡು ಮಾಡಿ 15 ರಿಂದ 20 ದಿನ ಉಪ್ಪು ನೀರಿನಲ್ಲಿ ನೆನೆಹಾಕಿ. ಅನಂತರ ಅಡುಗೆ ಮಾಡುವ ಮೊದಲು 2 ರಿಂದ 3ಸಲ ನೀರಿನಲ್ಲಿ ತೊಳೆದು ಅಡುಗೆಗೆ ಉಪಯೋಗಿಸಬಹುದು.
ನಿಮಗೂ ಕಣಿಲೆ ಸಿಕ್ಕರೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ರುಚಿ ನೋಡಬಹುದು. ಕಣಿಲೆಯಿಂದ ಪತ್ರೊಡೆ, ದೋಸೆ, ಪಲ್ಯ, ಗಸಿ, ಪಕೋಡ ಅಲ್ಲದೇ ಉಪ್ಪಿನಕಾಯಿ ಹೀಗೆ ಬಹಳಷ್ಟು ರೀತಿಯ ತಿಂಡಿ ತಿನಿಸುಗಳನ್ನು ಮಾಡಬಹುದಾಗಿದೆ. ಹಾಗಿದ್ದರೆ ಕಣಿಲೆ ಪತ್ರೊಡೆ ಮತ್ತು ಕಣಿಲೆ ದೋಸೆ ತಯಾರಿಸುವ ವಿಧಾನವನ್ನು ನಾವಿಂದು ತಿಳಿದುಕೊಳ್ಳೋಣ…
ಕಣಿಲೆ ಪತ್ರೊಡೆ
ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ 1 ಕಪ್, ಎಳೆತು ಕಣಿಲೆ ಚೂರು 1 ಕಪ್, ಒಣಮೆಣಸು 7ರಿಂದ 8, ಕೊತ್ತಂಬರಿ 1 ಚಮಚ, ಹುಣಸೆ ಹುಳಿ ಸ್ವಲ್ಪ, ಅರಿಸಿನ ಪುಡಿ 1 ಚಮಚ, ಜೀರಿಗೆ 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
2ರಿಂದ 3 ಗಂಟೆ ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಒಣಮೆಣಸು, ಕೊತ್ತಂಬರಿ, ಜೀರಿಗೆ, ಅರಸಿನ ಪುಡಿ, ಹುಣಸೆ ಹುಳಿ, ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿ. ನಂತರ ಸಣ್ಣಗೆ ಚೂರು ಮಾಡಿದ ಕಣಿಲೆಯನ್ನು ಮಿಶ್ರಣ ಮಾಡಿ. ಬಾಡಿಸಿದ ಬಾಳೆ ಎಲೆಯಲ್ಲಿ ಒMದು ಸೌಟು ಹಿಟ್ಟು ಹರಡಿ ಮಡಚಿ ಉಗಿಯಲ್ಲಿ ಅರ್ಧ ಗಂಟೆ ಬೇಯಿಸಿ. ನಂತರ ತೆಗೆದ ಮೇಲೆ ತೆಂಗಿನೆಣ್ಣೆ ಹಾಕಿ ತಿನ್ನಿರಿ. ಬಿಸಿ ಬಿಸಿಯಾದ ಕಣಿಲೆ ಪತ್ರೊಡೆ ಸವಿಯಲು ಸಿದ್ಧವಾಗಿದೆ.
ಕಣಿಲೆ ದೋಸೆ
ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ 1 ಕಪ್, ಒಣಮೆಣಸು 5ರಿಂದ 6, ಎಳೆತು ಕಣಿಲೆ ಚೂರು ಅರ್ಧ ಕಪ್,ತೆಂಗಿನ ತುರಿ 1ಕಪ್, ಎಣ್ಣೆ 2 ಚಮಚ, ಹುಣಸೆ ಹುಳಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ಬೆಳ್ತಿಗೆ ಅಕ್ಕಿಯನ್ನು 2ರಿಂದ 3 ಗಂಟೆ ನೀರಲ್ಲಿ ನೆನೆಸಿ ನಂತರ ನೀರು ಬಸಿದು ಒಣಮೆಣಸು, ಹುಣಸೆ ಹುಳಿ,ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿರಿ. ನಂತರ ಕಣಿಲೆ ಚೂರು, ಉಪ್ಪು ಸೇರಿಸಿ ಮತ್ತೂಮ್ಮೆ ರುಬ್ಬಿರಿ.ತವಾ ಒಲೆಯ ಮೇಲಿಟ್ಟು ಕಾದ ಮೇಲೆ ಎಣ್ಣೆ ಹಾಕಿ ಒಂದೊಂದೇ ತೆಳ್ಳಗಿನ ದೋಸೆ ಹೊಯ್ಯಿರಿ.ಈ ದೋಸೆಯನ್ನು ಊಟದ ಜೊತೆ ತಿನ್ನಬಹುಐದು. ರುಚಿಕರವಾದ ಕಣಿಲೆ ದೋಸೆ ರೆಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ