ಕಲ್ಲು ಬಂಡೆಯೇ “ಗುಡ್ಡಟ್ಟು ಗಣಪನ” ಆವಾಸಸ್ಥಾನ


Team Udayavani, Jun 8, 2018, 1:06 PM IST

guddattu-main.jpg

ದೇವಾಲಯಗಳ ತವರೂರೆಂದೇ ಕರೆಯಬಹುದಾದ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪುರಾತನ ದೇವಾಲಯಗಳಿವೆ ಅವುಗಳ ಪೈಕಿ ಪ್ರಾಕೃತಿಕ ಮಾತ್ರವಲ್ಲದೆ ಧಾರ್ಮಿಕವಾಗಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿರುವ ದೇವಾಲಯ ಗುಡ್ಡಟ್ಟು ಗಣಪತಿ.

ಯಾವುದೇ ಕಾರ್ಯ ನಿರ್ವಿಘ್ನವಾಗಿ ನೆರವೇರಲು ಮೊದಲು ಗಣಪತಿಯನ್ನು ಸ್ತುತಿಸಬೇಕು ಎಂಬುದು ನಂಬಿಕೆ ಇಂತಹ ಅದ್ಭುತವಾದ ಗಣಪ ಉಡುಪಿ ಜಿಲ್ಲೆಯ ಬಾರಕೂರಿನ ಗುಡ್ಡಟ್ಟುವಿನಲ್ಲಿ ನೆಲೆನಿಂತಿರುವುದು ವಿಶೇಷ.

ಕಲ್ಲು ಬಂಡೆಗಳ ಮದ್ಯೆ ಗುಹೆಗಳ ಒಳಗೆ ಮೂಡಿ ಬಂದವನೇ ವಿಘ್ನ ನಿವಾರಕ ಈ ವಿನಾಯಕ ಹಲವಾರು ಅಂತಸ್ತಿನ ಬಂಡೆಗಳ ಒಳಗೆ ವಿರಾಜಮಾನನಾಗಿ ನೆಲೆನಿಂತಿರುವಂತಹ ಗಣಪನೇ ಗುಡ್ಡಟ್ಟು ಗಣಪ..

ಬಂಡೆಯ ಗುಹೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾಧ್ಯ ದೇವ .

ಸುತ್ತಲೂ ದಟ್ಟ ಕಾಡು ಹಚ್ಚ ಹಸಿರು ಗದ್ದೆಯ ನಡುವೆ ವಿಶಾಲವಾದ ಬಂಡೆಯೊಳಗೆ ನೆಲೆನಿಂತಿರುವ ಗಣಪನಿಗೆ ಬಂಡೆಯೇ ಆವಾಸಸ್ಥಾನ..

ಯಾವುದೇ ಒಂದು ವಿಗ್ರಹ ಅಥವಾ ಕಲ್ಲನ್ನು ದೇವರು ಎಂದು ಪೂಜಿಸಬೇಕಾದರೆ ಅದಕ್ಕೆ ಒಂದು ವಿಶೇಷವಾದ ಶಕ್ತಿ ಇರಲೇಬೇಕು, ಇಂತಹ ಮೂರ್ತಿಗಳಿಗೆ ಭಕ್ತರು ನೀಡುವ ಸಂಸ್ಕಾರ ಮತ್ತು ನಂಬಿಕೆ ಭಕ್ತರಿಗೆ ಒಳಿತಾಗಿ ಪರಿಣಮಿಸಿರುವುದೇ ಕಾರಣ, ಹಾಗಾಗಿಯೇ ತನ್ನನ್ನ ಬೇಡಿ ಬಂದವರ ಇಷ್ಟಾರ್ಥಗಳನ್ನ ಪೂರೈಸುತ್ತಾ ಭಕ್ತರ ಸೇವೆಯನ್ನು ಸ್ವೀಕರಿಸುತ್ತಾ ಗುಹಾಂತರ ಬಾವಿಯ ನೀರಿನಲ್ಲಿ ಗಣಪ ನೆಲೆನಿಂತಿದ್ದಾನೆ.

ಪುರಾಣ ಮತ್ತು ಐತಿಹ್ಯಗಳಲ್ಲಿ ಸಾಮಾನ್ಯವಾಗಿ ಈಶ್ವರ ಮಹಾ ಕೋಪಿಷ್ಠ ವ್ಯಕ್ತಿ ಎಂಬುದು ಉಲ್ಲೇಖ ಅಂತೆಯೇ ಈಶ್ವರನ ಕೋಪವನ್ನು ಕಡಿಮೆಮಾಡುವ ಸಲುವಾಗಿ ಈಶ್ವರನನ್ನ ಸದಾಕಾಲ ನೀರು ಅಥವಾ ತಂಪಾದ ಪ್ರದೇಶಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ ಆದರೆ ಗುಡ್ಡಟ್ಟು ಪ್ರದೇಶದಲ್ಲಿ ಗಣಪತಿ ಸದಾಕಾಲ ನೀರಿನಲ್ಲಿರುವುದು ಇಲ್ಲಿನ ವೈಶಿಷ್ಟ್ಯ ತೆ. 

ಸ್ಥಳ ಪುರಾಣ: ತ್ರಿಪುರಾಸುರ ಸಂಹಾರ ಕಾಲದಲ್ಲಿ ಈಶ್ವರ ಒಂದು ದಿನ ಗಣಪತಿಯನ್ನು ಪ್ರಾರ್ಥನೆ ಮಾಡದೆ ಯುದ್ಧಕ್ಕೆ ಹೋಗಿದ್ದರಿಂದ ಆ ಯುದ್ಧದಲ್ಲಿ ಈಶ್ವರನಿಗೆ ಹಿನ್ನಡೆಯಾಗುತ್ತದೆ ಇದನ್ನು ಅರಿತ ಈಶ್ವರ ಕೋಪದಿಂದ ಗಣಪತಿಯ ಮೇಲೆ ಅಸ್ತ್ರ ಪ್ರಯೋಗ ಮಾಡುತ್ತಾನೆ ಆದರೆ ಆ ಅಸ್ತ್ರ ಗಣಪತಿಯನ್ನು ಅನಾಮತ್ತಾಗಿ ಇಟ್ಟುಕೊಂಡು ಇಲ್ಲಿರುವ ಮಧುಸಾಗರಕ್ಕೆ ಎಸೆಯುತ್ತದೆ, ಮಧುಸಾಗರಕ್ಕೆ ಬಿದ್ದಂತಹ ಗಣಪತಿ ತನಗೆ ಇಷ್ಟವಾದ ಮಧು (ಜೇನು) ತುಪ್ಪವನ್ನು ಯಥೇಚ್ಛವಾಗಿ ಸ್ವೀಕಾರ ಮಾಡಿದ್ದರಿಂದ ದೇಹದ ಉಷ್ಣತೆ ಹೆಚ್ಚಾಗಿ ಬಿಸಿ ತಾಳಲಾರದೆ ಇಲ್ಲಿಯ ತಣ್ಣೀರಿನಲ್ಲಿ ಕುಳಿತಿದ್ದಾನೆ ಎಂಬುದು ಪುರಾಣದಿಂದ ತಿಳಿದುಬರುತ್ತದೆ.

ಇತಿಹಾಸ: ಗರ್ಭ ಗುಡಿಯು ಸಾದಾರಣ 800 ವರ್ಷಗಳ ಹಳೆಯದು ಎಂದು ಇಲ್ಲಿಗೆ ಭೇಟಿ ನೀಡಿದ ಪುರಾತತ್ವ ಸಂಶೋಧಕರಾದ ಗುರುರಾಜ ಭಟ್ಟ್ ಇವರ ಅಭಿಪ್ರಾಯವಾಗಿದೆ.1997 ರಲ್ಲಿ ನೂತನ ಗರ್ಭಗುಡಿ, ತೀರ್ಥ ಮಂಟಪ, ಹೆಬ್ಬಾಗಿಲು ರಚನೆಯಾಗಿದೆ.

ನಿಸರ್ಗ ಪ್ರಿಯರಿಗಂತೂ ಈ ಕ್ಷೇತ್ರ ರಮಣೀಯ ರಾಜ್ಯಾದ್ಯಾಂತ ಪ್ರವಾಸಿಗರು ಹುಡುಕಿಕೊಂಡು ಬರುವ ಧಾರ್ಮಿಕ ಪ್ರೇಕ್ಷಣಿಯ ಸ್ಥಳವಿದು .

ಗಣಪನು ಭಕ್ತರೊಬ್ಬರ ಭಕ್ತಿಗೆ ಮೆಚ್ಚಿ ಬಂಡೆಯ ಕೆಳಭಾಗದಲ್ಲಿ ಮೂಡಿ ಬಂದಿದಾ. ಅವನಿಗೆ ಹೆಚ್ಚು ಸೆಕೆ ತಾಗಬಾರದೆಂದು ಸದಾ ನೀರು ತುಂಬಿರುತ್ತಾರೆ .ಸದಾಕಾಲ ನೀರಿನಲ್ಲಿ ಗಣಪತಿನಿರುವುದೇ ಇಲ್ಲಿಯ ವೈಶಿಷ್ಟ್ಯತೆ .

ಆಯರ್‌ ಕೊಡ

ಗುಡ್ಡಟ್ಟು ಗಣಪ ಈಶ್ವರನಿಂದ ಸ್ಥಾಪನೆಯಾದ ದೇವಾಲಯವೆಂದು ಕರೆಸಿಕೊಂಡಿದೆ ಈ ದೇವಾಲಯದಲ್ಲಿ ಹಲವಾರು ಬಗೆಯ ಸೇವೆಗಳನ್ನು ಮಾಡಲಾಗುತ್ತದೆ ಅದರಲ್ಲಿ ಆಯರ್‌ ಕೊಡ ಸೇವೆ ಬಹಳ ಶ್ರೇಷ್ಠವಾದ ಸೇವೆಯಾಗಿದೆ.

ಆಯರ್ ಕೊಡ ಸೇವೆ ಒಂದು ಶುದ್ಧ ವೈದಿಕ ಸೇವೆಯಾಗಿದೆ ಸೇವೆಯ ಪ್ರಾರಂಭದಲ್ಲಿ ಆ ಮಡುವಿನಲ್ಲಿರುವ ನೀರನ್ನು ತಾಮ್ರದ ಕೈ ಬಟ್ಟಲನ್ನು ಉಪಯೋಗಿಸಿ ಪೂರ್ತಿಯಾಗಿ ಶುಚಿಗೊಳಿಸಲುತ್ತದೆ. ನಂತರ ತೈಲಭ್ಯಂಜನ ಅರ್ಥಾತ್ ಕೊಬ್ಬರಿ ಎಣ್ಣೆಯಲ್ಲಿ ರುದ್ರಾಭಿಷೇಕ ಮಾಡಲಾಗುತ್ತದೆ. ನಂತರ ಈ ಅಭಿಷೇಕದ ನೀರನ್ನು ಹೊರ ತೆಗೆದು ದೇವರಿಗೆ ಮಹಾನೈವೇದ್ಯ ನೆರವೇರಿಸಲಾಗುತ್ತದೆ. ತದನಂತರ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ರುದ್ರಾಭಿಷೇಕ ನಡೆಯುತ್ತದೆ. ಇದಾದ ಬಳಿಕ ಇನ್ನೊಮ್ಮೆ ಅಭಿಷೇಕ ಮಾಡಿದ ನೀರನ್ನು ಒಂದು ಹನಿಯು ಬಿಡದಂತೆ ಬಟ್ಟೆಯಿಂದ ಒರೆಸಿ ಶುದ್ಧಗೊಳಿಸಲುತ್ತದೆ. ಈ ಪ್ರಕ್ರೀಯೆ ಮುಗಿದ ಬಳಿಕ ಬಂದಿರುವ ಭಕ್ತಾದಿಗಳಿಗೆ ಶ್ರೀ ದೇವರ ಮೂಲ ಬಿಂಬ ದರ್ಶನ ಮಾಡಿಸಲಾಗುತ್ತದೆ . ಬಳಿಕ ಮೂಲ ಬಿಂಬ ಪೂಜೆ, ಅಲಂಕಾರ, ನೈವೇದ್ಯ,ಮಂಗಳಾರತಿ, ಮಂತ್ರಪುಷ್ಪಗಳನ್ನು ನೆರವೇರಿಸಿ  ಅರ್ಚಕರು ಹೊರಬರುತ್ತಾರೆ. ತದನಂತರ ಪವನಮಂತ್ರ ಪಠಿಸುತ್ತಾ ಈ ಗುಹೆ ಪೂರ್ತಿಯಾಗಿ ತುಂಬಿ ಎದುರಿನ ದಂಡೆಯಿಂದ ನೀರು ಹೊರಬರುವವರೆಗೆ ಶುದ್ಧಜಲ ತುಂಬಿಸಲಾಗುತ್ತದೆ.

ಇಲ್ಲಿಗೆ ಬಂದು ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಮದುವೆ, ಸಂತಾನ, ವ್ಯವಹಾರ, ನಿರ್ವಿಘ್ನವಾಗಿ ನೆರವೇರುತ್ತದೆ ಎನ್ನುವ ನಂಬಿಕೆ ಇಲ್ಲಿಯ ಭಕ್ತರದ್ದು, ವಿದ್ಯೆ ಬುದ್ದಿ, ಉದ್ಯೋಗಗಳನ್ನು ಕರುಣಿಸುವ ಗುಡ್ಡಟ್ಟು ಗಣಪತಿ ಕೆಲವೊಂದು ವಿಶೇಷತೆಗಳನ್ನು ಹೊಂದಿದ್ದಾನೆ ಅಂತೆಯೇ ವಿನಾಯಕನ ದರುಶನಕ್ಕಾಗಿ ದೇಶದ ಮೂಲೆ ಮೂಲೆಯಿಂದಲೂ ಜನಸಾಗರ ಹರಿದು ಬರುತ್ತದೆ. ಇಲ್ಲಿಗೆ ಬಂದಂತ ಭಕ್ತರಿಗೆ ಅನ್ನಸಂತರ್ಪಣೆಯು ನಡೆಯುತ್ತದೆ.

ಪ್ರಕೃತಿಯ ಮಧ್ಯದಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಗುಡ್ಡಟ್ಟು ಗಣಪತಿ ದರ್ಶನದಿಂದ ಭಕ್ತರಿಗೆ ಮುದವನ್ನು ನೀಡುತ್ತಿದ್ದಾನೆ ಸಾಧ್ಯವಾದರೆ ನೀವು ಕೂಡ ಭೇಟಿ ನೀಡಿ ಬಂಡೆಯೊಳಗೆ ವಿರಾಜಮಾನನಾಗಿರುವ ಗಣಪನ ದರ್ಶನವನ್ನು ಪಡೆದು ಧನ್ಯರಾಗಿ…

ಈ ಕ್ಷೇತ್ರಕ್ಕೆ ಬರುವುದು ಹೇಗೆ ?

ಉಡುಪಿಯಿಂದ -ಬ್ರಹ್ಮಾವರ -ಬಾರಕೂರು-ಶಿರಿಯಾರ -ಗುಡ್ಡಟ್ಟು-28 ಕೀ.ಮೀ, ಕುಂದಾಪುರದಿಂದ-ಶಿವಮೊಗ್ಗ ಮಾರ್ಗವಾಗಿ-ಕೋಟೇಶ್ವರ-ಗುಡ್ಡಟ್ಟು , ಶಿವಮೊಗ್ಗ- ಹೊಸಂಗಡಿ – ಸಿದ್ದಾಪುರ – ಶಂಕರನಾರಾಯಣ – ಗುಡ್ಡಟ್ಟು 147ಕೀ.ಮೀಟರ್‌. ಹೀಗೆ ಕ್ರಮಿಸಿದಾರೆ  ಈ ಪುಣ್ಯ ಕ್ಷೇತ್ರ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ ನಮಗೆ ಕಾಣಸಿಗುತ್ತದೆ.

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.