ಸರತಿಯಲ್ಲಿವೆ ಬಿಗ್‌ ಬಜೆಟ್‌ ಸ್ಟಾರ್‌ ಸಿನ್ಮಾಗಳು


Team Udayavani, Apr 9, 2020, 10:28 AM IST

ಸರತಿಯಲ್ಲಿವೆ ಬಿಗ್‌ ಬಜೆಟ್‌ ಸ್ಟಾರ್‌ ಸಿನ್ಮಾಗಳು

ಕೋವಿಡ್ 19 ಎಫೆಕ್ಟ್ ನಿಂದ ಇಡೀ ದೇಶವೇ ಸ್ತಬ್ಧವಾಗಿದೆ. ಎಲ್ಲಾ ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಸದ್ಯ ಕನ್ನಡ ಚಿತ್ರರಂಗ ಕೂಡಾ ಯಾವುದೇ ಚಟುವಟಿಕೆಗಳಿಲ್ಲದೇ ನೀರಸವಾಗಿದೆ.

ಹಾಗಂತ ಈ ನೀರವ ಮೌನ ಶಾಶ್ವತವಲ್ಲ. ಕೋವಿಡ್ 19  ಮುಗಿಯುತ್ತಿದ್ದಂತೆ ಕನ್ನಡ ಚಿತ್ರರಂಗ ಮತ್ತೆ ಗರಿಗೆದರಲಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿವೆ. ವಿಶೇಷವೆಂದರೆ ಕೋವಿಡ್ 19 ಮುಗಿದ ಬಳಿಕ ಬಿಡುಗಡೆಯಾಗಲಿರುವ ಸಿನಿಪಟ್ಟಿಯಲ್ಲಿ ಸ್ಟಾರ್‌ ಗಳ ಬಿಗ್‌ ಬಜೆಟ್‌ನ ಚಿತ್ರಗಳೇ ಹೆಚ್ಚಿವೆ. ಈ ಮೂಲಕ ಕೋವಿಡ್ 19 ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಚಿತ್ರರಂಗದಲ್ಲಿ ಸಿನಿ ಹಬ್ಬವೇ ನಡೆಯಲಿದೆ ಎಂದರೆ ತಪ್ಪಲ್ಲ. ಒಂದರ ಹಿಂದೊಂದರಂತೆ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾದರೆ, ಇನ್ನೊಂದಿಷ್ಟು ನಿರೀಕ್ಷಿತ ಚಿತ್ರಗಳು ತೆರೆಕಾಣಲಿವೆ.

ಯಾವ್ಯಾವ ಸಿನಿಮಾ :  ಅಷ್ಟಕ್ಕೂ ಸರತಿಯಲಿರುವ ಸಿನಿಮಾಗಳು ಯಾವುದೆಂದು ನೋಡುವುದಾದರೆ ದರ್ಶನ್‌ ಅಭಿನಯದ ರಾಬರ್ಟ್‌, ಸುದೀಪ್‌ ಅಭಿನಯದ ಕೋಟಿಗೊಬ್ಬ-3, ಪುನೀತ್‌ ರಾಜ್‌ಕುಮಾರ್‌ ನಟನೆಯ ಯುವರತ್ನ, ಧ್ರುವ ಸರ್ಜಾ ನಾಯಕರಾಗಿರುವ ಪೊಗರು, ಉಪೇಂದ್ರ ಅವರ ಬುದ್ಧಿವಂತ-2, ಪ್ರಜ್ವಲ್‌ ದೇವರಾಜ್‌ ನಟನೆಯ ಇನ್ಸ್  ಪೆಕ್ಟರ್‌ ವಿಕ್ರಂ, ಅರ್ಜುನ್‌ ಗೌಡ, ಜಗ್ಗೇಶ್‌ ಅಭಿನಯದ ತೋತಾಪುರಿ, ಪ್ರೇಮ್‌ ನಿರ್ದೇಶನದ ಏಕ್‌ ಲವ್‌ ಯಾ, ರಕ್ಷಿತ್‌ ಶೆಟ್ಟಿ ನಟನೆಯ ಚಾರ್ಲಿ, ಅಜೇಯ್‌ ರಾವ್‌ ನಟಿಸಿರುವ ಕೃಷ್ಣ ಟಾಕೀಸ್‌, ಶೋಕಿವಾಲ, ದಿಗಂತ್‌ ಅವರ ಹುಟ್ಟುಹಬ್ಬದ ಶುಭಾಶಯಗಳು, ಶರಣ್‌ ನಟನೆಯ ಅವತಾರ್‌ ಪುರುಷ, ಪ್ರೇಮ್‌ ಅವರ ಪ್ರೇಮಂ ಪೂಜ್ಯಂ, ರಿಷಭ್‌ ಶೆಟ್ಟಿ ನಟನೆ, ರಾಜ್‌ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ರಿಷಭ ವಾಹನ, ರಮೇಶ್‌ ಅರವಿಂದ್‌ ನಟನೆ- ನಿರ್ದೇಶನದ 100 … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇದರ ಜೊತೆಗೆ ಒಂದಷ್ಟು ಹೊಸಬರ ಸಿನಿಮಾಗಳು ಕೂಡಾ ಬಿಡುಗಡೆಯಾಗಲಿವೆ.

ರಂಗೇರಲಿರುವ ಚಿತ್ರರಂಗ : ಕೋವಿಡ್ 19  ಮುಗಿದ ಬಳಿಕ ಚಿತ್ರರಂಗ ರಂಗೇರಲಿದೆ ಎಂದರೆ ತಪ್ಪಲ್ಲ. ಸಿನಿಮಾ ನಿರ್ಮಾಪಕರು ಕೂಡಾ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿ, ಬಿಡುಗಡೆಗೆ ಕಾಯುತ್ತಿದ್ದಾರೆ. ಕೋಟಿಗಟ್ಟಲೇ ಬಂಡವಾಳ ಹಾಕಿರುವ ನಿರ್ಮಾಪಕರಿಗೆ ಪ್ರೇಕ್ಷಕ ತಮ್ಮ ಕೈ ಹಿಡಿಯುವ ವಿಶ್ವಾಸ ಕೂಡಾ ಇದೆ ಕೋವಿಡ್ 19 ದಿಂದ ಮನೆಯಲ್ಲಿ ಲಾಕ್‌ ಡೌನ್‌ ಆಗಿ ಮನೆಯಲ್ಲಿ ಕುಳಿತು ಬೇಸರಗೊಂಡಿರುವ ಜನರಿಗೆ ಒಂದು ರಿಲ್ಯಾಕ್ಸ್‌ ಬೇಕಾಗಿದೆ. ಅದು ಸಿನಿಮಾದಿಂದ ಸಿಕ್ಕರೂ ಸಿಗಬಹುದು. ಈಗಾಗಲೇ ಕಿರುತೆರೆಯಲ್ಲಿ ಹಳೆಯ ಕಾರ್ಯಕ್ರಗಳು ಪ್ರಸಾರವಾಗುತ್ತಿವೆ. ಹೀಗಿರುವಾಗ ಪ್ರೇಕ್ಷಕ ಹೊಸದನ್ನು ಬಯ ಸುತ್ತಾನೆ. ಬಿಡುಗಡೆಯಾಗ ಲಿರುವ ಸಿನಿಮಾಗಳಲ್ಲಿ ಒಂದಷ್ಟು ಚಿತ್ರಗಳು ಸೆನ್ಸಾರ್‌ ಆಗಿದ್ದರೆ, ಇನ್ನೊಂದಿಷ್ಟು ಚಿತ್ರಗಳು ಸೆನ್ಸಾರ್‌ಗೆ ಸಿದ್ಧವಾಗಿವೆ.

ಹಾಡು, ಟೀಸರ್‌ ಹಿಟ್‌ :  ಬಿಡುಗಡೆಯ ಹಂತದಲ್ಲಿರುವ ಈ ಚಿತ್ರಗಳ ಬಹುತೇಕ ಚಿತ್ರಗಳ ಟೀಸರ್‌, ಹಾಡು ಹಿಟ್‌ ಆಗುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿವೆ. ರಾಬರ್ಟ್‌ ಚಿತ್ರದ ಟೀಸರ್‌ ಹಾಗೂ ಎರಡು ಹಾಡು ಹಿಟ್‌ ಆದರೆ, ಪುನೀತ್‌ ಅವರ ಯುವರತ್ನ ಚಿತ್ರದ ಡೈಲಾಗ್‌ ಟೀಸರ್‌ ಮಾಸ್‌ ಮನ ಗೆದ್ದಿದೆ. ಇನ್ನು ಪೊಗರು ಚಿತ್ರದ ಖರಾಬು ಹಾಡು ಮಿಲಿಯನ್‌ ಗಟ್ಟಲೇ ಹಿಟ್‌ ಪಡೆದುಕೊಂಡಿದೆ. ಈ ಮೂಲಕ ಸಿನಿಮಾಗಳ ಮೇಲಿನ ನಿರೀಕ್ಷೆ ಹೆಚ್ಚಿದೆ.

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.