ನಿಶ್ವಿ‌ಕಾ ಕಣ್ಣಲ್ಲಿ “ಜಂಟಲ್‌ಮೆನ್‌’ ಕನಸು

ಜವಾಬ್ದಾರಿಯುತ ಹುಡುಗಿಯ ಪಾತ್ರ

Team Udayavani, Feb 3, 2020, 7:03 AM IST

nishwika

“ನಿಜವಾಗಿಯೂ ಈ ರೀತಿಯ ವ್ಯಕ್ತಿಗಳೂ ಇರ್ತಾರಾ…? ನಟಿ ನಿಶ್ವಿ‌ಕಾ ನಾಯ್ಡು ಕಥೆ ಕೇಳಿದ ಬಳಿಕ ಆ ನಿರ್ದೇಶಕರನ್ನು ಹೀಗೆ ಪ್ರಶ್ನಿಸಿದರಂತೆ. ಅಷ್ಟಕ್ಕೂ ನಿಶ್ವಿ‌ಕಾ ಕೇಳಿದ ಕಥೆ ಬೇರಾವುದೂ ಅಲ್ಲ, “ಜಂಟಲ್‌ಮೆನ್‌’ ಸ್ಟೋರಿ. ಆ ಕಥೆ ಹೇಳಿದ್ದು ನಿರ್ದೇಶಕ ಜಡೇಶ್‌. ಅಂದಹಾಗೆ, ಆ ಕಥೆಯ ವಿಶೇಷವೇನು ಗೊತ್ತಾ? ದಿನಕ್ಕೆ 18 ತಾಸು ನಿದ್ದೆ ಮಾಡುವ ಹುಡುಗನೊಬ್ಬನ ಸುತ್ತ ನಡೆಯೋ ಕಥೆ! ಉಳಿದ ಸಮಯದಲ್ಲಿ ಅವನು ಏನೆಲ್ಲಾ ಮಾಡುತ್ತಾನೆ ಅನ್ನುವುದನ್ನು ವಿಶೇಷವಾಗಿ ಹೆಣೆದಿರುವ ಕಥೆ ಕೇಳಿದ ನಿಶ್ವಿ‌ಕಾ, ನಿಜವಾಗಿಯೂ ಅಂತಹ ವ್ಯಕ್ತಿಗಳು ಇರುತ್ತಾರಾ? ಅಂತ ಪ್ರಶ್ನಿಸಿದ್ದರಂತೆ.

“ವಾಸು ನಾನು ಪಕ್ಕಾ ಕಮರ್ಷಿಯಲ್‌’, “ಅಮ್ಮಾ ಐ ಲವ್‌ಯು’,” ಪಡ್ಡೆ ಹುಲಿ’ ಬಳಿಕ “ಜೆಂಟಲ್‌ಮೆನ್‌’ ಸಿನಿಮಾದಲ್ಲಿ ನಾಯಕಿಯಾಗಿರುವ ನಿಶ್ವಿ‌ಕಾ ನಾಯ್ಡುಗೆ ಈ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇದೆ. ಅದಕ್ಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರವಂತೆ. ಆ ಕುರಿತು ಅವರು ಹೇಳುವುದಿಷ್ಟು. “ಆರಂಭದಲ್ಲಿ ನಾನು ಕಥೆ ಕೇಳಿದಾಗ, ಥ್ರಿಲ್‌ ಆಗಿದ್ದು ನಿಜ. ನಿರ್ದೇಶಕ ಜಡೇಶ್‌ ಅವರು ಕಥೆ ಹೇಗೆ ಹೇಳಿದ್ದರೋ, ಹಾಗೆಯೇ ಸಿನಿಮಾ ಮಾಡಿ ಮಗಿಸಿದ್ದಾರೆ. ಈ ವಾರ ಚಿತ್ರ ಬಿಡುಗಡೆಯಾಗುತ್ತಿದ್ದು, ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲವಿದೆ.

ಇದನ್ನು ಖಂಡಿತ ಎಲ್ಲರೂ ಒಪ್ಪಿ, ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಈ ಹಿಂದೆ ಗುರುದೇಶಪಾಂಡೆ ಅವರ ನಿರ್ದೇಶನದ “ಪಡ್ಡೆ ಹುಲಿ’ ಚಿತ್ರದಲ್ಲಿ ನಟಿಸಿದ್ದೆ. ಈಗ ಅವರ ನಿರ್ಮಾಣದ “ಜಂಟಲ್‌ಮೆನ್‌’ ಚಿತ್ರದಲ್ಲಿ ಮಾಡಿದ್ದೇನೆ. ಚಿತ್ರದಲ್ಲಿ ನನ್ನದು ತಪಸ್ವಿನಿ ಎಂಬ ಪಾತ್ರ. ಅದೊಂದು ರೀತಿ ತುಂಬಾನೇ ಜವಾಬ್ದಾರಿ ಹುಡುಗಿಯಾಗಿ, ಮೆಚ್ಯೂರ್ಡ್ ಲುಕ್‌ ಇರುವಂತಹ ಪಾತ್ರ ಮಾಡಿದ್ದೇನೆ. ಈ ಕಥೆ ಕೇಳಿದಾಗಲೇ, ನನಗೆ ನಿಜಕ್ಕೂ ಇದು ರಿಯಲ್‌ ವ್ಯಕ್ತಿಗಳ ಕಥೆನಾ ಅಥವಾ ಕಾಲ್ಪನಿಕ ಕಥೆನಾ ಎಂದು ಕೇಳಿದ್ದೆ. ಅದು ನಿಜ ಅಂತ ಗೊತ್ತಾದಾಗಲೇ, ನಾನೂ ಈ ಚಿತ್ರದಲ್ಲಿ ಒಂದು ಭಾಗ ಆಗಬೇಕು ಎಂದು ತೀರ್ಮಾನಿಸಿದ್ದೆ.

ಅದೀಗ ಚಿತ್ರ ಮುಗಿದು, ಜನರ ಮುಂದೆ ಬರಲು ಅಣಿಯಾಗಿದೆ’ ಎಂಬುದು ನಿಶ್ವಿ‌ಕಾ ಮಾತು. ಚಿತ್ರೀಕರಣದ ಬಗ್ಗೆ ಮಾತನಾಡುವ ನಿಶ್ಚಿಕಾ, “ಚಿತ್ರದ ಹಾಡೊಂದನ್ನು ವಂಡರ್‌ಲಾದಲ್ಲಿ ಚಿತ್ರೀಕರಿಸಲಾಗಿದೆ. ಆ ಸಾಂಗ್‌ನ ಅನುಭವ ಅನನ್ಯ. ಯಾಕೆಂದರೆ, ಅದು ನಮಗೆ ಶೂಟಿಂಗ್‌ ಎನಿಸಲೇ ಇಲ್ಲ. ಕುಟುಂಬದವರೆಲ್ಲರೂ, ಒಂದು ಪಿಕ್‌ನಿಕ್‌ ಹೋದಂತೆ ಇತ್ತು. ನಾನು ಡಬ್ಬಿಂಗ್‌ ವೇಳೆ ಸಿನಿಮಾ ನೋಡಿದ್ದೇನೆ. ನಿರೀಕ್ಷೆ ಜಾಸ್ತಿ ಇದೆ. ಇಲ್ಲಿ ಎಲ್ಲವೂ ಫ್ರೆಶ್‌ ಆಗಿದೆ, ಕಥೆ, ಕಾನ್ಸೆಪ್ಟ್, ಶೂಟ್‌ ಮಾಡಿರುವ ರೀತಿ ಹಾಗೂ ಅದರ ಟೋನ್‌ ಎಲ್ಲವೂ ಹೊಸದಾಗಿದೆ. ಇನ್ನು, ಈ ಚಿತ್ರ ನನಗೆ ತುಂಬಾನೇ ಸ್ಪೆಷಲ್‌.

ಯಾಕೆಂದರೆ, ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಿದು. ಇನ್ನು, ಪ್ರಜ್ವಲ್‌ ದೇವರಾಜ್‌ ಬಗ್ಗೆ ಹೇಳುವುದಾದರೆ, ನಾನು ಮೊದ ಮೊದಲು ಕೊಂಚ ನರ್ವಸ್‌ ಆಗಿಯೇ ಇದ್ದೆ. ಕೆಲ ದೃಶ್ಯಗಳಲ್ಲಿ ನಟಿಸಿದ ಬಳಿಕ ಪ್ರಜ್ವಲ್‌ ಅವರೇ ನನ್ನ ಬಳಿ ಬಂದು ಮಾತನಾಡಿಸಿ, ಫ್ರೆಂಡ್‌ ಆಗಿ ತುಂಬಾನೇ ಕಂಫ‌ರ್ಟ್‌ ಫೀಲ್‌ ಕೊಟ್ಟರು. ನಿರ್ದೇಶಕರ ಮೊದಲ ಚಿತ್ರ ಇದಾಗಿದ್ದರೂ, ಅವರು ತುಂಬಾ ತಾಳ್ಮೆಯಿಂದ ಎಲ್ಲವನ್ನೂ ಹೇಳಿಕೊಟ್ಟು, ಎಲ್ಲರಿಂದಲೂ ನೀಟ್‌ ಆಗಿ ಕೆಲಸ ತೆಗೆದುಕೊಂಡಿದ್ದಾರೆ. ಒಟ್ಟಾರೆ, “ಜಂಟಲ್‌ಮೆನ್‌’ ಹೊಸಬಗೆಯ ಚಿತ್ರವಂತೂ ಹೌದು’ ಎನ್ನುವ ನಿಶ್ವಿ‌ಕಾ, “ರಾಮಾರ್ಜುನ’ ಹಾಗೂ “ಗಾಳಿಪಟ 2′ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.

ದರ್ಶನ್‌ ಸಾಥ್‌: ಆರಂಭದಿಂದಲೂ ಪ್ರಜ್ವಲ್‌ ದೇವರಾಜ್‌ ಅವರ “ಜಂಟಲ್‌ಮೆನ್‌’ ಚಿತ್ರಕ್ಕೆ ಸಾಥ್‌ ನೀಡುತ್ತಾ ಬಂದಿರುವ ದರ್ಶನ್‌ ಇಂದು ಚಿತ್ರದ ಪ್ರೀ- ರಿಲೀಸ್‌ ಕಾರ್ಯಕ್ರಮಕ್ಕೂ ಅತಿಥಿಯಾಗಿ ಆಗಮಿಸಲಿದ್ದಾರೆ. ಚಿತ್ರದ ಟ್ರೇಲರ್‌, ಹಾಡುಗಳ ಪ್ರದರ್ಶನ ಕೂಡಾ ನಡೆಯಲಿದ್ದು, “ಜಂಟಲ್‌ಮೆನ್‌’ಗೆ ದರ್ಶನ್‌ ಸಾಥ್‌ ನೀಡುತ್ತಿದ್ದಾರೆ.

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.