ಎರಡನೇ ಸಲ ಡೈರೆಕ್ಟರ್‌ ಪ್ರಾಬ್ಲಂ!


Team Udayavani, Feb 27, 2017, 11:22 AM IST

eradane-sala.jpg

ನಿರ್ದೇಶಕ ಗುರುಪ್ರಸಾದ್‌ ನಾಟ್‌ ರೀಚಬಲ್‌! ಹೀಗೆ ಹೇಳಿದ್ದು ಬೇರಾರೂ ಅಲ್ಲ, “ಎರಡನೇ ಸಲ’ ಚಿತ್ರದ ನಿರ್ಮಾಪಕ ಯೋಗೇಶ್‌ ನಾರಾಯಣ್‌. ಹೌದು, ಅವರು ಹೀಗೆ ಹೇಳುವುದಕ್ಕೂ ಕಾರಣವಿದೆ. ಚಿತ್ರ ಮಾರ್ಚ್‌ 3 ರಂದು ರಿಲೀಸ್‌ ಆಗಲು ರೆಡಿಯಾಗಿದೆ. ನಿರ್ದೇಶಕ ಗುರುಪ್ರಸಾದ್‌ ಮಾತ್ರ ನಿರ್ಮಾಪಕರ ಕೈಗೆ ಸಿಕ್ಕಿಲ್ಲ. ಹಲವು ಸಲ ಮಾಡಿದ ಫೋನ್‌ ಕಾಲ್‌ಗ‌ೂ ಪ್ರತಿಕ್ರಿಯೆ ನೀಡಿಲ್ಲ.

ಇದರಿಂದ ನಿರ್ಮಾಪಕರು ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಹೀಗೇ ಮುಂದುವರೆದರೆ, ಗುರುಪ್ರಸಾದ್‌ ವಿರುದ್ಧ ಚೇಂಬರ್‌ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ಕೊಡೋಕು ಮುಂದಾಗಿದ್ದಾರೆ ನಿರ್ಮಾಪಕರು. ಅಷ್ಟಕ್ಕೂ ಗುರುಪ್ರಸಾದ್‌ ಯಾಕೆ ಹೀಗೆ? ಆ ಬಗ್ಗೆ ಸ್ವತಃ ಯೋಗೇಶ್‌ ನಾರಾಯಣ್‌ ಅವರೇ “ಉದಯವಾಣಿ‘ ಜತೆ ಮಾತಾಡಿದ್ದಾರೆ.

“ಗುರುಪ್ರಸಾದ್‌ಗೆ ಹಲವು ಸಲ ಫೋನ್‌ ಮಾಡಿದರೂ ರಿಸೀವ್‌ ಮಾಡಿಲ್ಲ. ಅವರು 100% ಟ್ಯಾಕ್ಸ್‌ ದಾಖಲಾತಿಗೆ ಸಹಿ ಹಾಕಬೇಕು. ಇದುವರೆಗೆ ನಮ್ಮ ಕೈಗೆ ಸಿಕ್ಕಿಲ್ಲ. ಯಾಕೆ ಹೀಗೆ ಮಾಡುತ್ತಿದ್ದಾರೆಂಬುದಕ್ಕೆ ಬಲವಾದ ಕಾರಣವೂ ಇಲ್ಲ. ಅವರಿರಲಿ, ಬಿಡಲಿ ಸಿನಿಮಾ ರಿಲೀಸ್‌ ಆಗುತ್ತೆ. ರಿಲೀಸ್‌ಗೆ ಅವರ ಅವಶ್ಯಕತೆ ಇಲ್ಲ. ಈಗಾಗಲೇ ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇನೆ. ನನಗೆ ಅವರ ಮೇಲೆ ವೈಯಕ್ತಿಕ ಬೇಸರವಿಲ್ಲ.

ಆದರೆ, ಒಬ್ಬ ನಿರ್ದೇಶಕರಾಗಿ ತಮ್ಮ ಕೆಲಸವನ್ನು ಪೂರ್ಣಗೊಳಿಸದೆ, ಈ ರೀತಿ ನಿರ್ಮಾಪಕರ ಕೈಗೆ ಸಿಗದಿದ್ದರೆ ಹೇಗೆ? ಸಿನಿಮಾ ಮಾಡೋಕೆ ಮೂರು ವರ್ಷ ಟೈಮ್‌ ತಗೊಂಡ್ರು. ಇನ್ನೂ ಒಂದು ವರ್ಷ ಲೇಟ್‌ ಮಾಡಿದ್ರು. ಒಂದು ಸಿನಿಮಾ ಮಾಡೋಕೆ ಅಷ್ಟು ವರ್ಷ ಬೇಕಾ? ಸಿನಿಮಾ ಚೆನ್ನಾಗಿ ಮಾಡಿದ್ದಾರೆ. ಆ ಬಗ್ಗೆ ಯಾವ ದೂರು ಇಲ್ಲ. ಚಿತ್ರ ರಿಲೀಸ್‌ಗೆ ಹತ್ತಿರ ಬಂದಿರುವಾಗ, ನಿರ್ದೇಶಕರಾಗಿ ಜವಾಬ್ದಾರಿ ಇಟ್ಟುಕೊಂಡು ಪ್ರಚಾರ ಕಾರ್ಯಕ್ಕಾದರೂ ಬರಬಹುದಲ್ಲವೇ?

ಮೊದಲ ಕಾಪಿ ಬರೋವರೆಗೆ ಮಾತ್ರ ಜತೆಗಿರುವುದಾಗಿ ಅಗ್ರಿಮೆಂಟ್‌ ಆಗಿತ್ತು. ಮಿಕ್ಕ ಪ್ರಚಾರ ಕೆಲಸಗಳನ್ನು ನಾನು ವಹಿಸಿಕೊಳ್ಳುವುದಾಗಿಯೂ ಹೇಳಿದ್ದೆ. ಈಗ 100 % ಟ್ಯಾಕ್ಸ್‌ ದಾಖಲಾತಿಗೆ ಅವರ ಸಹಿ ಬೇಕು. ಹಾಕಿಲ್ಲ. ಸಿಗುತ್ತಿಲ್ಲ. ಅವರ ಮನೆಗೆ ಸುಮಾರು 500 ಸಲ ಹೋಗಿ ಬಂದಿದ್ದೇನೆ. ಯಾವ ಪ್ರಯೋಜವಾಗಿಲ್ಲ. ನನ್ನದೇನಾದರೂ ತಪ್ಪಿದ್ದರೆ ಹೇಳಲಿ, ವಿನಾಕಾರಣ, ಹೀಗೆ ಮಾಡಿದರೆ, ನಿರ್ಮಾಪಕರ ಗತಿ ಏನು? ಯಾವುದೇ ರೀತಿಯ ಪ್ರತಿಕ್ರಿಯೆಗೂ ಸಿಗುತ್ತಿಲ್ಲವೆಂದರೆ ಏನು ಮಾಡಬೇಕು?

ಇದು ಹೀಗೆಯೇ ಮುಂದುವರೆದರೆ, ಫಿಲ್ಮ್ ಚೇಂಬರ್‌, ನಿರ್ಮಾಪಕರ ಸಂಘಕ್ಕೆ ದೂರು ಕೊಡ್ತೀನಿ. ದೂರು ಕೊಡುವುದು ದೊಡ್ಡ ವಿಷಯವೇನಲ್ಲ. ಹಾಗೆ ಮಾಡುವುದಾಗಿದ್ದರೆ, ಯಾವಾಗಲೋ ಮಾಡುತ್ತಿದ್ದೆ. ಅವರು ಹೆಸರು ಮಾಡಲು ಎಷ್ಟೋ ವರ್ಷ ಕಷ್ಟಪಟ್ಟಿದ್ದಾರೆ. ನಾನು ದೂರು ಕೊಟ್ಟು ಹೆಸರು ಹಾಳುಮಾಡೋದು ನಿಮಿಷದ ಕೆಲಸ. ಕಂಪ್ಲೇಂಟ್‌ ಬರೆದು ಕೈಯಲ್ಲಿಟ್ಟುಕೊಂಡಿದ್ದೇನೆ.

ಇನ್ನೂ, ಅದನ್ನು ಸಂಬಂಧಿಸಿದವರಿಗೆ ಕೊಟ್ಟಿಲ್ಲ. ನನ್ನಿಂದ ಅವರಿಗೇನಾದರೂ ತೊಂದರೆಯಾಗಿದೆಯಾ ಹೇಳಲಿ? ಅವರಿಗೆ ನಾನು ಕೇಳಿದ ಸಂಭಾವನೆಗಿಂತ ಎಕ್ಸ್ಟ್ರಾನೇ ಕೊಟ್ಟಿದ್ದೇನೆ. ಇಷ್ಟಾದರೂ, ಸ್ಪಂದಿಸುತ್ತಿಲ್ಲ’ ಎಂದು ಗರಂ ಆಗಿ ಹೇಳುತ್ತಾರೆ ನಿರ್ಮಾಪಕರು. ಇಡೀ ಚಿತ್ರತಂಡ ನಮ್ಮೊಂದಿಗಿದೆ. ಎಲ್ಲರೂ ನಿರ್ದೇಶಕರಿಗೆ ಫೋನ್‌ ಮಾಡಿದರೂ, ಪ್ರಯೋಜನವಾಗಿಲ್ಲ.

ಸ್ವತಃ, ಲಕ್ಷ್ಮೀ ಮೇಡಮ್‌ ಅವರೇ ನಾಲ್ಕೈದು ಸಲ ಕಾಲ್‌ ಮಾಡಿದರೂ ರೆಸ್ಪಾನ್ಸ್‌ ಮಾಡಿಲ್ಲ. ಚಿತ್ರ ಚೆನ್ನಾಗಿ ಮಾಡಿದ್ದಾರೆ. ಆದರೆ, ಇಂತಹ ವಿಷಯದಲ್ಲಿ ಕೆಟ್ಟವರಾಗುತ್ತಿದ್ದಾರೆ. ದಾಖಲೆಗಳನ್ನೆಲ್ಲಾ ಕೊಡಬೇಕು. ಅವರ ಸಹಿ ಬೇಕು. ಆದರೆ, ಕೈಗೆ ಸಿಗುತ್ತಿಲ್ಲ. ಇನ್ನೆರೆಡು ದಿನ ನೋಡಿ, ಆಮೇಲೆ ಏನು ಮಾಡಬೇಕೋ ಹಾಗೆ ಮಾಡ್ತೀನಿ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ.

ಟಾಪ್ ನ್ಯೂಸ್

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

12-uppinangady

Uppinangady: ಮಹಿಳೆ ಸಾವು; ಕೊಲೆ ಶಂಕೆ

Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು

Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

11-chikkodi

Chikkodi: ವ್ಯಕ್ತಿಯ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

Innanje Railway Station; A gold chain was stolen from a woman who was traveling from Madurai to Mumbai

Innanje Railway Station; ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhruva sarja’s bahaddur movie re releasing after 10 years

Dhruva Sarja; 10 ವರ್ಷಗಳ ನಂತರ ‘ಬಹದ್ದೂರ್‌’ ಮತ್ತೆ ರಿಲೀಸ್‌

rachana-rai

Devil ಚಿತ್ರದ ನಾಯಕಿ ರಚನಾ ರೈ ಕನಸು ಭಗ್ನ

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Raakha Directed by Malavalli Saikrishna

ಸಂಬಂಧದ ಸುತ್ತ ರಾಖಾ; ಮಳವಳ್ಳಿ ಸಾಯಿಕೃಷ್ಣ ನಿರ್ದೇಶನ

Gowri Movie Dhool Yebsava Video Song

Samarjith lankesh; ಧೂಳ್‌ ಎಬ್ಬಿಸುತ್ತ ಬಂದ ಗೌರಿ ಹಾಡು

MUST WATCH

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

ಹೊಸ ಸೇರ್ಪಡೆ

Dhruva sarja’s bahaddur movie re releasing after 10 years

Dhruva Sarja; 10 ವರ್ಷಗಳ ನಂತರ ‘ಬಹದ್ದೂರ್‌’ ಮತ್ತೆ ರಿಲೀಸ್‌

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

Zap-X for painless treatment of brain tumors

ZAP-X Radiosurgery; ಬ್ರೈನ್‌ ಟ್ಯೂಮರ್‌ ನೋವುರಹಿತ ಚಿಕಿತ್ಸೆಗೆ ಝ್ಯಾಪ್‌- ಎಕ್ಸ್‌

12-uppinangady

Uppinangady: ಮಹಿಳೆ ಸಾವು; ಕೊಲೆ ಶಂಕೆ

Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು

Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.