ರಜನಿಕಾಂತ್‌ ಖುಷಿಪಟ್ಟ ಸಿನಿಮಾ


Team Udayavani, Nov 25, 2018, 11:40 AM IST

rajani.jpg

ಅಂಬರೀಶ್‌ ಅವರು “ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಸುದೀಪ್‌ ತಮ್ಮ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಇದು ತಮಿಳಿನ “ಪವರ್‌ ಪಾಂಡಿ’ ಚಿತ್ರದ ರೀಮೇಕ್‌. ಈ ಚಿತ್ರದಲ್ಲಿ ಅಂಬರೀಶ್‌ ನಟಿಸಲು ಕಾರಣ ರಜನಿಕಾಂತ್‌. ಸ್ವತಃ ಈ ಮಾತನ್ನು ಅಂಬರೀಶ್‌ ಹೇಳುತ್ತಾರೆ. “ಅದೊಂದು ದಿನ ಫೋನ್‌ ಮಾಡಿದ ರಜನಿಕಾಂತ್‌, ಪವರ್‌ ಪಾಂಡಿ ನೋಡಿ, ನಿಮಗೆ ಚೆನ್ನಾಗಿ ಹೊಂದುತ್ತದೆ, ಮಾಡಿ’ ಎಂದರು.

ನಾನು ಕೂಡಾ ನೋಡಿದೆ. ತುಂಬಾ ಇಷ್ಟವಾಯಿತು. ಹಾಗಾಗಿ, ಮಾಡುತ್ತಿದ್ದೇನೆ’ ಎಂದು ತಮ್ಮ ಸಿನಿಮಾ ಬಗ್ಗೆ ಖುಷಿಯಿಂದ ಹೇಳುತ್ತಾರೆ ಅಂಬರೀಶ್‌. ಚಿತ್ರದ ಟೈಟಲ್‌ “ಅಂಬಿ ನಿಂಗೆ ವಯಸ್ಸಾಯ್ತೋ’ ಎಂದಿದೆ. ಸಿನಿಮಾ ಯಾವ ತರಹ ಇರುತ್ತದೆ ಎಂದು ನೀವು ಕೇಳಬಹುದು. ಅದಕ್ಕೂ ಅಂಬರೀಶ್‌ ಉತ್ತರಿಸುತ್ತಾರೆ. “ಇದು ಇವತ್ತಿನ ಕಾಲಘಟ್ಟಕ್ಕೆ ಹೇಳಿಮಾಡಿಸಿದ ಸಿನಿಮಾ.

ನಮ್ಮ ಬಿಝಿ ಲೈಫ್ನಲ್ಲಿ ಸಂಬಂಧಗಳನ್ನು, ಹಿರಿ ಜೀವಗಳನ್ನು ಹೇಗೆ ಮರೆಯುತ್ತೇವೆ ಎಂಬ ಅಂಶದೊಂದಿಗೆ ಸಾಗುತ್ತದೆ. ತಂದೆ-ತಾಯಿ ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸಿರುತ್ತಾರೆ. ಒಳ್ಳೆಯ ಉದ್ಯೋಗಕ್ಕೆ ಕಾರಣರಾಗುತ್ತಾರೆ. ಆದರೆ, ಮಕ್ಕಳು ಮಾತ್ರ ತಮ್ಮ ಬಿಝಿ ಲೈಫ್ನಲ್ಲಿ ತಂದೆ-ತಾಯಂದಿರನ್ನು ಮರೆಯುತ್ತಾರೆ. ಈ ಚಿತ್ರದಲ್ಲೂ ಆ ಅಂಶ ಪ್ರಮುಖವಾಗಿರುತ್ತದೆ.

ಜೊತೆಗೆ ಚಿತ್ರ ಇಂದಿನ ಟ್ರೆಂಡ್‌ಗೆ ತಕ್ಕಂತೆ ಇರುತ್ತದೆ’ ಎನ್ನಲು ಅವರು ಮರೆಯೋದಿಲ್ಲ. ಈ ಚಿತ್ರದಲ್ಲಿ ಸುದೀಪ್‌ ಕೂಡಾ ನಟಿಸುತ್ತಾರೆಂಬ ಸುದ್ದಿ ಇದೆ. ಅಂಬರೀಶ್‌ ಅವರ ಯಂಗ್‌ ಡೇಸ್‌ ಪಾತ್ರದಲ್ಲಿ ಅಂಬರೀಶ್‌ ಕಾಣಿಸಿಕೊಳ್ಳಲಿದ್ದಾರಂತೆ. “ಸುದೀಪ್‌ ನಟಿಸಿದರೆ ಖುಷಿ. ಆತ ಒಳ್ಳೆಯ ನಟ. ಸಾಕಷ್ಟು ವಿಭಿನ್ನ ಸಿನಿಮಾಗಳನ್ನು ಮಾಡಿದ್ದಾನೆ. ಈ ಟೈಟಲ್‌ ಕೂಡಾ ಅವನೇ ಇಟ್ಟಿದ್ದು’ ಎಂದು ಸುದೀಪ್‌ ಬಗ್ಗೆ ಹೇಳುತ್ತಾರೆ. 

ಇದು ಬಿಟ್ಟರೆ ಅಂಬರೀಶ್‌ ಸದ್ಯ “ಮುನಿರತ್ನ ಕುರುಕ್ಷೇತ್ರ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಬಹುನಿರೀಕ್ಷಿತ ಈ ಚಿತ್ರದಲ್ಲಿ ಅಂಬರೀಶ್‌ ಭೀಷ್ಮನ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಈಗಾಗಲೇ ಅವರ ಗೆಟಪ್‌ನ ಫೋಟೋ ಕೂಡಾ ಓಡಾಡುತ್ತಿದೆ. ಮುಖ ತುಂಬಾ ಬಿಳಿಗಡ್ಡ, ಉದ್ದ ಕೂದಲು ಬಿಟ್ಟು ಕಾಣಿಸಿಕೊಂಡಿರುವ ಅಂಬರೀಶ್‌, ಇಷ್ಟೆಲ್ಲಾ ಮೇಕಪ್‌ ಅನ್ನು 12 ರಿಂದ 13 ನಿಮಿಷದಲ್ಲಿ ಹಾಕಿಕೊಳ್ಳುತ್ತಾರಂತೆ. ಅಷ್ಟು ಸುಲಭ ಹೇಗೆ ಎಂದು ನೀವು ಕೇಳಬಹುದು.

ಅದಕ್ಕೆ ಅಂಬರೀಶ್‌ ಅವರೇ ಉತ್ತರಿಸುತ್ತಾರೆ. “ಭೀಷ್ಮ ಗೆಟಪ್‌ನಲ್ಲಿ ಕಾಣೋದು ಕೇವಲ ನನ್ನ ಹಣೆ ಹಾಗೂ ಕಣ್ಣು ಅಷ್ಟೇ. ಉಳಿದಂತೆ ವಿಗ್‌ ಹಾಗೂ ಗಡ್ಡ ಸಿಕ್ಕಿಸಿಕೊಳ್ಳೋಕೆ ಎಷ್ಟು ಹೊತ್ತು ಬೇಕು. ಅದಕ್ಕೆ ನಾನು ಮುನಿರತ್ನನಿಗೆ ಹೇಳ್ತಾ ಇದ್ದೆ, “ಸುಮ್ಮನೆ ನನಗೆ ದುಡ್ಡು ಕೊಡೋ ಬದಲು ವಿಗ್‌ ಹಾಕಿಕೊಂಡು ನೀನೇ ಆ್ಯಕ್ಟ್ ಮಾಡು. ಕ್ಲೋಸಪ್‌ನಲ್ಲಿ ಕಣ್ಣು ಬೇಕಾದರೆ ನನ್ನ ಕಣ್ಣು ಬಳಸಿಕೋ’ ಎನ್ನುತ್ತಿದ್ದೆ’ ಎಂದು ನಗುತ್ತಾರೆ ಅಂಬರೀಶ್‌. ಈಗಾಗಲೇ ಎಂಟು ದಿನಗಳ ಕಾಲ “ಕುರುಕ್ಷೇತ್ರ’ ಚಿತ್ರದಲ್ಲಿ ಅಂಬರೀಶ್‌ ನಟಿಸಿದ್ದಾರೆ.  ಅವರ ಭಾಗದ ಚಿತ್ರೀಕರಣ ಬಾಕಿ ಇದೆಯಂತೆ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.