ಮಧ್ಯಮ ವರ್ಗದ ಹುಡುಗನ ಕಲರ್‌ಫ‌ುಲ್‌ ಕನಸು

ಚಿತ್ರ ವಿಮರ್ಶೆ

Team Udayavani, Apr 20, 2019, 3:00 AM IST

Padde-huli

“ನಿನಗೆ ನೀನು ಪ್ರೀತಿಸುವ ಆ ಸಂಗೀತಾ ಬೇಕಾ ಅಥವಾ ನಿನ್ನನ್ನು ಪ್ರೀತಿಸುವ ಈ ಸಂಗೀತಾ ಬೇಕಾ’  ಕಣ್ತುಂಬ ಕನಸು ಕಟ್ಟಿಕೊಂಡಿರುವ ನಾಯಕನಿಗೆ ನಾಯಕಿ ಹೀಗೆ ಖಡಕ್‌ ಆಗಿ ಹೇಳುತ್ತಾಳೆ. ಇತ್ತ ಕಡೆ ಮನೆ ಬಂದರೆ ನಾಯಕನ ತಂದೆ ಕೂಡಾ, “ಕನಸಿನ ಜೊತೆಗೆ ಎಜುಕೇಶನ್‌ ಕೂಡಾ ಮುಖ್ಯ.

ಬೆನ್ನ ಹಿಂದೆ ಶಿಕ್ಷಣದ ಜೊತೆಗೆ, ಆ ನಂತರ ಕನಸು ಸಾಕಾರಗೊಳಿಸು’ ಎನ್ನುತ್ತಾರೆ. ಹಾಗಾದರೆ ನಾಯಕ ಏನು ಮಾಡಬೇಕು, ತನ್ನ ಗುರಿಸಾಧಿಸಬೇಕಾ, ಪ್ರೀತಿಸಿದ ಹುಡುಗಿನಾ ಮದುವೆಯಾಗಬೇಕಾ ಅಥವಾ ಎಲ್ಲವನ್ನು ಬದಿಗೊತ್ತಿ ಶಿಕ್ಷಣ ಮುಂದುವರೆಸಬೇಕಾ? ಈ ಗೊಂದಲದಲ್ಲಿರುವ ನಾಯಕ ಅಂತಿಮವಾಗಿ ಏನು ಮಾಡುತ್ತಾನೆಂಬ ಕುತೂಹಲವಿದ್ದರೆ ನೀವು “ಪಡ್ಡೆಹುಲಿ’ ಚಿತ್ರ ನೋಡಬಹುದು.

ಒಬ್ಬ ಹೊಸ ಹೀರೋನನ್ನು ಲಾಂಚ್‌ ಮಾಡುವಾಗ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ಕಮರ್ಷಿಯಲ್‌ ಹೀರೋ ಆಗಿ ಎಂಟ್ರಿಕೊಡುವಾಗ ಚಿತ್ರತಂಡ ಸ್ವಲ್ಪ ಹೆಚ್ಚೇ ಎಚ್ಚರವಹಿಸಬೇಕಾಗುತ್ತದೆ. ಆ ಎಲ್ಲಾ ಎಚ್ಚರದೊಂದಿಗೆ ಮಾಡಿದ ಸಿನಿಮಾ “ಪಡ್ಡೆಹುಲಿ’ ಎಂದರೆ ತಪ್ಪಲ್ಲ. ಹಾಗಾದರೆ ಸಿನಿಮಾದಲ್ಲಿ ಅಂಥದ್ದೇನಿದೆ ಎಂದು ನೀವು ಕೇಳಬಹುದು.

ವಿಭಿನ್ನ ಶೈಲಿಯ ಹಾಡುಗಳು, ಜೋಶ್‌ ತುಂಬಿರುವ ಡ್ಯಾನ್ಸ್‌, ಮಾಸ್‌ ಪ್ರಿಯರಿಗೆ ಇಷ್ಟವಾಗುವ ಫೈಟ್‌, ಯಂಗ್‌ಸ್ಟಾರ್ಗೆ ಬೇಕಾದ ಲವ್‌ಸ್ಟೋರಿ, ಫ್ಯಾಮಿಲಿ ಆಡಿಯನ್ಸ್‌ಗೆ ಬೇಕಾದ ಒಂದು ಸಂದೇಶ … ಈ ಎಲ್ಲಾ ಅಂಶಗಳನ್ನು ಒಂದೇ ತಟ್ಟೆಯಲ್ಲಿಟ್ಟು “ಪಡ್ಡೆಹುಲಿ’ಯಲ್ಲಿ ಕೊಡಲಾಗಿದೆ. ಹಾಗಾಗಿ, ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಎನ್ನಲು ಅಡ್ಡಿಯಿಲ್ಲ.

ಹಾಗಾದರೆ ಇದು ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾನಾ ಎಂದು ನೀವು ಕೇಳಬಹುದು. ಹೊಸ ಹುಡುಗನನ್ನು ಲಾಂಚ್‌ ಮಾಡುವಾಗ ಚಿತ್ರತಂಡ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗಬಾರದೆಂಬ ಕಾರಣಕ್ಕೆ ಅದ್ಧೂರಿಯಾಗಿ ಒಂದು ಕಮರ್ಷಿಯಲ್‌ ಸಿನಿಮಾವನ್ನು ಕಟ್ಟಿಕೊಟ್ಟಿದೆ.

ಚಿತ್ರದುರ್ಗದಿಂದ ಆರಂಭವಾಗುವ ಸಿನಿಮಾ, ದಾವಣಗೆರೆ ಸುತ್ತಿಕೊಂಡು ಮುಂದೆ ಬೆಂಗಳೂರಿಗೆ ಬರುತ್ತದೆ. ಇದಕ್ಕೆಲ್ಲಾ ಕಾರಣ ನಾಯಕನ ಕನಸು. ತಾನು ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕು, ರಾಕ್‌ಸ್ಟಾರ್‌ ಆಗಬೇಕೆಂಬ ನಾಯಕನ ಕನಸಿನೊಂದಿಗೆ ಸಾಗುವ ಸಿನಿಮಾದಲ್ಲಿ ಆಗಾಗ ವಿಷ್ಣುವರ್ಧನ್‌ ಅಭಿಮಾನಿಗಳನ್ನು ಖುಷಿಪಡಿಸುವ ಕೆಲಸವನ್ನು ಮಾಡಲಾಗಿದೆ.

ಅದಕ್ಕೆ ಕಾರಣ ನಾಯಕನ ಹೆಸರು ಸಂಪತ್‌ ಹಾಗೂ ಕೋಟೆ ಹಿನ್ನೆಲೆಯ ಹುಡುಗ. ಜೊತೆಗೆ ವಿಷ್ಣುವರ್ಧನ್‌ ಅಭಿಮಾನಿ….. ಚಿತ್ರದ ಕಥೆ ಆರಂಭವಾಗಿ ಸಾಗುವ ರೀತಿ ನೋಡಿದಾಗ ನಿಮಗೆ ತಮಿಳು ಚಿತ್ರವೊಂದರ ನೆನಪಾಗಬಹುದು. ತಮಿಳಿನ “ಮಿಸೈ ಮುರುಕ್ಕು’ ಸಿನಿಮಾದ ಛಾಯೆ ಚಿತ್ರದಲ್ಲಿ ಕಂಡರೂ, ಚಿತ್ರತಂಡ ಅದರಿಂದ ಹೆಚ್ಚೇನು ಪ್ರಭಾವಿತವಾಗಿಲ್ಲ.

ಕನ್ನಡ ನೇಟಿವಿಟಿ, ಕನ್ನಡ ಕವಿಗಳ ಹಾಡು, ದಾಸರ ಪದ, ವಚನಗಳನ್ನು ಬಳಸಿಕೊಳ್ಳುವ ಮೂಲಕ ಸಿನಿಮಾವನ್ನು ಕನ್ನಡಮಯ ಮಾಡಿದೆ. ಜೊತೆಗೆ ಇಡೀ ಸಿನಿಮಾವನ್ನು ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. ಚಿತ್ರತಂಡದ ಈ ಪ್ರಯತ್ನವನ್ನು ಮೆಚ್ಚಬೇಕು. ಇನ್ನು, ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಹಾಗೂ ಪುನೀತ್‌ ರಾಜಕುಮಾರ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ.

ಹಾಗಂತ ಚಿತ್ರತಂಡ ಆ ಪಾತ್ರಗಳನ್ನು ಹೆಚ್ಚು ಬೆಳೆಸದೇ, ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಂಡಿದೆ. ಸಿನಿಮಾ ನೋಡಿ ಹೊರಬಂದಾಗ, ಸಿನಿಮಾದ ಅವಧಿ ಕೊಂಚ ಜಾಸ್ತಿಯಾಯಿತೆಂಬ ಭಾವನೆ ಬರದೇ ಇರದು. ಚಿತ್ರದ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ ಟ್ರಿಮ್‌ ಮಾಡುವ ಅವಕಾಶವಿತ್ತು.

ನಾಯಕ ಶ್ರೇಯಸ್‌ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.  ಕಮರ್ಷಿಯಲ್‌ ಹೀರೋ ಆಗಿ ನೆಲೆಕಾಣುವ ಎಲ್ಲಾ ಲಕ್ಷಣಗಳನ್ನು ತೋರಿದ್ದಾರೆ. ಡ್ಯಾನ್ಸ್‌, ಫೈಟ್‌ನಲ್ಲಿ ಶ್ರೇಯಸ್‌ ಎನರ್ಜಿ ಮೆಚ್ಚುವಂಥದ್ದೇ. ನಟನೆಯಲ್ಲೂ ಶ್ರೇಯಸ್‌ ಹಿಂದೆ ಬಿದ್ದಿಲ್ಲ. ನಾಯಕಿ ನಿಶ್ವಿ‌ಕಾ ನಾಯ್ಡು ಕೂಡಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.

ಮಗನಿಗೆ ಪ್ರೋತ್ಸಾಹ ತುಂಬುವ ತಂದೆಯಾಗಿ ರವಿಚಂದ್ರನ್‌ ಇಷ್ಟವಾಗುತ್ತಾರೆ. ಉಳಿದಂತೆ ಚಿಕ್ಕಣ್ಣ, ಅಮಿತ್‌, ಸುಧಾರಾಣಿ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತದ ಹಾಡುಗಳು ಇಷ್ಟವಾಗುತ್ತವೆ. ಮಧ್ಯಮ ವರ್ಗದ ಹುಡುಗನ ಕನಸನ್ನು ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ.

ಚಿತ್ರ: ಪಡ್ಡೆಹುಲಿ
ನಿರ್ಮಾಣ: ರಮೇಶ್‌ ರೆಡ್ಡಿ
ನಿರ್ದೇಶನ: ಗುರುದೇಶಪಾಂಡೆ
ತಾರಾಗಣ: ಶ್ರೇಯಸ್‌, ನಿಶ್ವಿ‌ಕಾ ನಾಯ್ಡು, ರವಿಚಂದ್ರನ್‌, ಸುಧಾರಾಣಿ, ಚಿಕ್ಕಣ್ಣ, ಅಮಿತ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.