ಪ್ರಸ್ ಕ್ಲಬ್ ಸುವರ್ಣ ಮಹೋತ್ಸವಕ್ಕೆ 1 ಕೋಟಿ ನೆರವು: ಸಿಎಂ ಭರವಸೆ
Team Udayavani, May 20, 2017, 12:22 PM IST
ಬೆಂಗಳೂರು: ಬೆಂಗಳೂರು ಪ್ರಸ್ ಕ್ಲಬ್ ಈ ವರ್ಷ 50ನೇ ವರ್ಷಾಚರಣೆ ಆಚರಿಸುತ್ತಿರುವ ಸಂದರ್ಭದಲ್ಲಿ ಕ್ಲಬ್ನ ಚಟುವಟಿಕೆಗಳಿಗೆ ಒಂದು ಕೋಟಿ ರೂ. ಧನ ಸಹಾಯ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಪ್ರಸ್ಕ್ಲಬ್ನ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರಲ್ಲಿ ಧನ ಸಹಾಯ ಕುರಿತು ಪ್ರಸ್ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅವರು ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಸ್ ಕ್ಲಬ್ ಜಾಗವನ್ನು ಬಾಡಿಗೆ ಪಡೆದು ನಡೆಸಲಾಗುತ್ತಿದ್ದು, ಅದನ್ನು ಕ್ಲಬ್ ಆಡಳಿತ ಮಂಡಳಿಗೆ ವಹಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಹಿರಿಯ ಪತ್ರಕರ್ತರಿಗೆ ಮಾಸಾಶನ ನೀಡುವಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ವಾರ್ತಾ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹರಿಸುವುದಾಗಿ ಸಿಎಂ ತಿಳಿಸಿದರು. ದೆಹಲಿ ಮಾದರಿಯಲ್ಲಿ ಪತ್ರಕರ್ತರ ಕಾಲೋನಿ ಮಾಡುವ ಕುರಿತು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.