ಅಭಿವೃದ್ಧಿ ಹೆಸರಲ್ಲಿ ಕೆರೆ ಏರಿಗೆ ಕುತ್ತು!


Team Udayavani, Mar 13, 2020, 10:50 AM IST

ಅಭಿವೃದ್ಧಿ ಹೆಸರಲ್ಲಿ ಕೆರೆ ಏರಿಗೆ ಕುತ್ತು!

ಬೆಂಗಳೂರು: ಬೆನ್ನಿಗಾನಹಳ್ಳಿಯ ಕೆರೆಯನ್ನು ಎರಡು ವರ್ಷಗಳ ಹಿಂದೆಯಷ್ಟೇ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಅಭಿವೃದ್ಧಿ ಮಾಡಿತ್ತು. ಸದ್ಯ ಬಿಎಂ ಆರ್‌ಸಿಎಲ್‌ ಮೆಟ್ರೋ “ಅಭಿವೃದ್ಧಿ’ ಕಾಮಗಾರಿ ಹೆಸರಿ ನಲ್ಲಿ ಕೆರೆಯ ಜಾಗಕ್ಕೆ ಕತ್ತರಿ ಬೀಳುವ ಮುನ್ಸೂಚನೆ ಸಿಕ್ಕಿದೆ!

ಸಿಲ್ಕ್ಬೋರ್ಡ್‌- ಕೆ.ಆರ್‌.ಪುರ ಮಾರ್ಗದಲ್ಲಿ ಮೆಟ್ರೋ ಎರಡನೇ ಹಂತದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಮಾರ್ಗ ಮಧ್ಯದಲ್ಲಿರುವ ಬೆನ್ನಿಗಾನಹಳ್ಳಿ ಕೆರೆಯ ಒಂದು ಭಾಗದ ಏರಿಯನ್ನು ಬಿಟ್ಟುಕೊಡುವಂತೆ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹೀಗಾಗಿ, ಕೆರೆ ಅಧಿಕೃತವಾಗಿಯೇ ಒತ್ತುವರಿಯಾಗಲಿದೆ.

ಮೆಟ್ರೋಗೆ ಕೆರೆಯ ಏರಿಭಾಗವನ್ನು ಬಿಟ್ಟುಕೊಟ್ಟರೆ, ಕೆರೆಯ ಅಭಿವೃದ್ಧಿಗೆ ವೆಚ್ಚ ಮಾಡಿದ ಶೇ.50ರಷ್ಟು ಹಣ ನೀರು ಪಾಲಾಗಲಿದೆ. ಅಷ್ಟೇ ಅಲ್ಲ, ಈ ರೀತಿ ಅಭಿವೃದ್ಧಿ ಆಗಿರುವ ಪ್ರದೇಶದಲ್ಲೇ ಮತ್ತೂಂದು ಇಲಾಖೆ ಅಭಿವೃದ್ಧಿ ಯೋಜನೆ ರೂಪಿಸಿಕೊಳ್ಳುತ್ತಿರುವುದು ಗಮನಿಸಿದರೆ, ಇಲಾಖೆಗಳ ಮಧ್ಯೆ ಇರುವ ಸಮನ್ವಯ ಕೊರತೆಯೂ ಎದ್ದುಕಾಣುತ್ತಿದೆ. ಬೆನ್ನಿಗಾನಹಳ್ಳಿ ಕೆರೆ 18 ಎಕರೆ 25 ಗುಂಟೆ ವಿಸ್ತೀರ್ಣವಿದ್ದು, ಕೆರೆಯ ರಚನೆ ಭಿನ್ನವಾಗಿದೆ. ಕೆರೆ ಎರಡು ಭಾಗವಾಗಿ ವಿಭಜನೆಯಾಗಿದ್ದು, ಕೆರೆಯ ಒಂದು ಪಾರ್ಶ್ವದಲ್ಲಿ ರೈಲ್ವೆ ಹಳಿಗಳು, ಮತ್ತೂಂದು ಪಾರ್ಶ್ವದಲ್ಲಿ ಕೆರೆಯ ಮೇಲೆ ಮೇಲ್ಸೇತುವೆ ಹಾದುಹೋಗಿದೆ. ಸದ್ಯ ಮೆಟ್ರೋ ಅಧಿಕಾರಿಗಳು ಕೆರೆಯ ಏರಿಯ ಒಂದು ಭಾಗವನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಕೆರೆ ಪಕ್ಕವೇ ಮೆಟ್ರೋ ನಿಲ್ದಾಣ?: ಮೆಟ್ರೋ ಎರಡನೇ ಹಂತದ ಕಾಮಗಾರಿಗಾಗಿ ಹೊರವಲಯದ ರಸ್ತೆಯಿಂದ ಟಿನ್‌ಫ್ಯಾಕ್ಟರಿ ಮಾರ್ಗ ಸಂರ್ಪಕಿಸುವ ಮೇಲ್ಸೇತುವೆಯ ರಸ್ತೆಯನ್ನು ಮುಚ್ಚಿ ಅಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವ ಹಾಗೂ ಕೆರೆಯ ಏರಿ ಭಾಗವನ್ನು ರಸ್ತೆಯಾಗಿ ಬದಲಾಯಿಸುವ ಪ್ರಸ್ತಾವನೆ ಯನ್ನು ಬಿಎಂಆರ್‌ಸಿಎಲ್‌ ಪಾಲಿಕೆಯ ಮುಂದಿಟ್ಟಿದೆ. ಬೆನ್ನಿಗಾನಹಳ್ಳಿ ಕೆರೆಯ ಮೇಲೆ ಈಗಾಗಲೇ ಮೇಲ್ಸೇತುವೆ, ರೈಲು ಮಾರ್ಗಗಳು ಹಾದು ಹೋಗಿದ್ದು, ಪರೋಕ್ಷವಾಗಿ ಕೆರೆಯ ಭಾಗವನ್ನು ಆವರಿಸಿಕೊಂಡಿವೆ. ಈಗ ಮೆಟ್ರೋ ಕಾಮಗಾರಿಗಾಗಿ ಕೆರೆಯ ಜಾಗವನ್ನು ನೀಡಿದರೆ, ಕೆರೆಯ ವಿಸ್ತೀರ್ಣ ಮತ್ತಷ್ಟು ಕಡಿಮೆಯಾಗಲಿದೆ. ಇಲ್ಲಿವರೆಗೆ ಕೆರೆ ಅಭಿವೃದ್ಧಿಗೆ ಬಿಬಿಎಂಪಿ ವ್ಯಯಮಾಡಿದ ಹಣ ಪೋಲಾದಂತಾಗುತ್ತದೆ.

ಕೆರೆಗೆ ಕೊಳಚೆ ನೀರು ಸೇರ್ಪಡೆ: ಪಾಲಿಕೆ ಕೆರೆಯ ಒಂದು ಭಾಗವನ್ನು ಮಾತ್ರ ಸ್ವತ್ಛ ಮಾಡಿದ್ದು, ರೈಲ್ವೆ ಹಳಿ ಹಾದು ಹೋಗಿರುವ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.  ಹೀಗಾಗಿ, ಈ ಭಾಗದ ಸುತ್ತಮುತ್ತಲಿನ ಮನೆಗಳ ಕೊಳಚೆ ನೀರು ಕೆರೆಯನ್ನು ಸೇರುತ್ತಿದೆ.

ಅಭಿವೃದ್ಧಿ ನೆಪದಲ್ಲಿಸಸಿಗಳನ್ನು ಕಡಿದರು! :  ಕೆರೆ ಅಭಿವೃದ್ಧಿ ಹೆಸರಿನಲ್ಲಿ ನೆಡಲಾಗಿದ್ದ ಸಸಿಗಳನ್ನು ಕಡಿದಿರುವ ಪಾಲಿಕೆ, ನಂತರ ಸಸಿನೆಟ್ಟು ಪೋಷಣೆ ಮಾಡಿಲ್ಲ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್‌ ದೂರಿದರು. ಕೆರೆಯ ಸುತ್ತಮುತ್ತಲಿನ ಪ್ರದೇಶದ ವಾತಾವರಣ ಈ ಹಿಂದೆಗಿಂತ ಸುಧಾರಿಸಿದೆ ನಿಜ. ಆದರೆ, ಅಭಿವೃದ್ಧಿ ಹೆಸರಲ್ಲಿ ಸಸಿಗಳನ್ನು ಕಡಿಯಲಾಗಿದೆ. ಪಾದಚಾರಿ ಮಾರ್ಗ ಮತ್ತು ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಇಲ್ಲ. ಕೆರೆ ರಕ್ಷಣೆ ದೃಷ್ಟಿಯಿಂದ ರಕ್ಷಣಾ ಸಿಬ್ಬಂದಿ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಬೆನ್ನಿಗಾನಹಳ್ಳಿ ಕೆರೆ ಏರಿಭಾಗವನ್ನು ಬಿಟ್ಟುಕೊಡುವಂತೆ ಬಿಎಂಆರ್‌ ಸಿಎಲ್‌ ಪ್ರಸ್ತಾವನೆ ನೀಡಿದೆ. ಆದರೆ, ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದು ಕೊಂಡಿಲ್ಲ. ಇನ್ನು ಕೆರೆಯ ರಕ್ಷಣಾ ಕ್ರಮ ಶೀಘ್ರವಾಗಿ ತೆಗೆದುಕೊಳ್ಳಲಾಗುವುದು. –ಬಿ.ಟಿ. ಮೋಹನ್‌ ಕೃಷ್ಣ, ಕೆರೆ ವಿಭಾಗದ ಮುಖ್ಯ ಎಂಜಿನಿಯರ್

ನಿರ್ವಹಣೆ ಲೋಪಗಳು :

  • ಕೆರೆಯಲ್ಲಿ ನೀರು ತುಂಬಿದರೆ ಸರಾಗವಾಗಿ ನೀರು ಹೊರಕ್ಕೆ ಹೋಗಲು ಸೂಕ್ತ ಕೋಡಿ ವ್ಯವಸ್ಥೆಯೇ ಇಲ್ಲ
  • ಇಡೀ ಕೆರೆಯ ಯಾವ ಭಾಗದಲ್ಲೂ ಬೇಲಿ ನಿರ್ಮಿಸಿಲ್ಲ
  • ಕೆರೆಯ ಅಂಗಳದಲ್ಲಿ ಬಿಬಿಎಂಪಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಿಲ್ಲ
  • ಕೆರೆಗೆ ಸೇರುವ ಒಳಚರಂಡಿ ನೀರು ತಡೆಯವಲ್ಲಿ ಮತ್ತಷ್ಟು ಕ್ರಮಗಳು ಅಗತ್ಯ
  • ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿನೆಟ್ಟು ಪೋಷಿಸುವಲ್ಲಿ ಪಾಲಿಕೆ ವಿಫ‌ಲ

ಯಾವುದಕ್ಕೆ ಎಷ್ಟು ಖರ್ಚು :

  • ಹಳೆ ಮದ್ರಾಸ್‌ ರಸ್ತೆಯ ಸರ್ವೆ ನಂ.47ನಲ್ಲಿರುವ ಬೆನ್ನಿಗಾನಹಳ್ಳಿ ಕೆರೆ
  • ಬೆನ್ನಿಗಾನಹಳ್ಳಿ ಕೆರೆಯ ಒಟ್ಟು ವಿಸ್ತೀರ್ಣ18 ಎಕರೆ 25 ಗುಂಟೆ
  • 2 ವರ್ಷದ ಹಿಂದೆ ಕೆರೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ
  • ಇದರಲ್ಲಿ ಕೆರೆಯಂಗಳ ಅಭಿವೃದ್ಧಿಗೆ 1.60 ಕೋಟಿ ರೂ., ಏರಿ ಅಭಿವೃದ್ಧಿಗೆ 27.49 ಲಕ್ಷ ರೂ. ಹಾಗೂ ಕೆರೆಯ ದಂಡೆ ಬಲವರ್ಧನೆಗೆ 56 ಲಕ್ಷ ರೂ. ನಿಗದಿ.

 

-ಹಿತೇಶ್‌ ವೈ

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.