ಜನರಿಗೆ ತರಕಾರಿ ವಿತರಣೆ
Team Udayavani, Jun 23, 2021, 5:25 PM IST
ಕೆಂಗೇರಿ: ಬೆಂಗಳೂರು ನಗರ ಪ್ರದೇಶವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಸಂದರ್ಭದಲ್ಲಿರಾಜ್ಯ ಸರ್ಕಾರವು ಲಾಕ್ಡೌನ್ ಅನ್ನುಸಡಿಲಿಸುತ್ತಿದ್ದು ಸಾರ್ವಜನಿಕರು ಯಾವುದೇ ಕಾರಣಕ್ಕೂ ಎಚ್ಚರ ತಪ್ಪದೆ ಮುಂಜಾಗೃತರಾಗಿ ಇರಬೇಕೆಂದು ಸಹಕಾರಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳು ವಾರ್ಡ್ ಅಮ್ಮ ಆಶ್ರಮರಸ್ತೆ ನಗೆಮನೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 11ಸಾವಿರ ಜನರಿಗೆ ತರಕಾರಿಯನ್ನು ವಿತರಿಸಿಮಾತನಾಡಿ, ಕೊರೊನಾ ಸೋಂಕಿನಿಂದಸಾಕಷ್ಟುಜನರುಕೆಲಸವಿಲ್ಲದೆಪರದಾಡುತ್ತಿದ್ದು ಕುಟುಂಬ ನಿರ್ವಹಣೆಗೆ ದಾರಿಇಲ್ಲದೆ ದಿಕ್ಕು ತೋಚದೆ ಪರಿತಪಿಸುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಸೋಂಕು ಇಳಿಮುಖವಾಗುತ್ತಿದಂತೆ ಕೆಲವು ಕೈಗಾರಿಕೆಗಳು ಗಾರ್ಮೆಂಟ್ಸ್ಗಳನ್ನು ಪುನರಾರಂಭಿಸುವ ಚಿಂತನೆಯಿಂದ ಅನ್ಲಾಕ್ ಘೋಷಣೆಯನ್ನು ಮಾಡುತ್ತಿದ್ದು ಸಾರ್ವಜನಿಕರು ಮಾಸ್ಕ್ಧರಿಸಿಕೊಂಡು,ಸಾಮಾಜಿಕ ಅಂತರ ಕಾಪಾಡುವುದರಮೂಲಕ ಸರ್ಕಾರದ ನಿಯಮವನ್ನುಪಾಲಿಸಬೇಕು ಎಂದು ಸೂಚಿಸಿದರು.
ಕ್ಷೇತ್ರದ ಪ್ರತಿ ವಾರ್ಡ್ನಲ್ಲಿರುವಬಡವರು, ಕೂಲಿ ಕಾರ್ಮಿಕರು,ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸೇರಿದಂತೆ ಎಲ್ಲಾ ವರ್ಗದ ಜನರು ಮತ್ತುಕೊರೊನಾ ವಾರಿಯರ್ಗಳಿಗೆ ಸಹಾಯಹಸ್ತವನ್ನು ನೀಡುತ್ತಿದ್ದು, ಅದರಅಂಗವಾಗಿ ಕೆಂಗೇರಿ ವಾರ್ಡ್,ದೊಡ್ಡಬೀದರಕಲ್ಲು ವಾರ್ಡ್ ಹಾಗೂಉಲ್ಲಾಳು ವಾರ್ಡ್ಗಳಲ್ಲಿ ಗ್ರಾಮೀಣಭಾಗದ ರೈತರಿಂದ ಸುಮಾರು 50 ಟನ್ತರಕಾರಿಗಳನ್ನು ಖರೀದಿಸಿ ನೇರವಾಗಿಜನರಿಗೆ ತರಕಾರಿ ಕಿಟ್ಗಳನ್ನುವಿತರಿಸಲಾಗಿದೆ.
ಇದರಿಂದ ರೈತರು ತಾವು ಬೆಳೆದಬೆಳೆಗೆ ಮಧ್ಯವರ್ತಿಗಳ ಹಾವಳಿ ಯಿಲ್ಲದೆತಮ್ಮ ಫಸಲಿಗೆ ಉತ್ತಮ ಬೆಲೆ ಲಭಿಸಿದಂತಾಗುತ್ತದೆ ಹಾಗೂ ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.ಬೆಂಗಳೂರು ಉತ್ತರ ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷ ಜಿ. ಮುನಿರಾಜು,ಪಾಲಿಕೆ ಮಾಜಿ ಸದಸ್ಯರಾದವಿ.ವಿ.ಸತ್ಯನಾರಾಯಣ, ರ.ಆಂಜೀನಪ್ಪ,ಯುವ ಮುಖಂಡ ನಿಶಾಂತ್ ಸೋಮಶೇಖರ್, ಉಲ್ಲಾಳು ವಾರ್ಡ್ ಬಿಜೆಪಿಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಮ್,ಪ್ರಧಾನ ಕಾರ್ಯದರ್ಶಿ ಗಿರೀಶ್,ಮುಖಂಡರಾದ ಅನಿಲ್ಕುಮಾರ್,ಎನ್.ಕದರಪ್ಪ, ಶಶಿಕುಮಾರ್, ಎನ್.ಸಿ.ಕುಮಾರ್, ಎನ್.ಸತ್ಯನಾರಾಯಣ, ಜೆ.ರಮೇಶ್, ಎಂ.ಹರೀಶ್ಕುಮಾರ್ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ