ಸಹೋದರನ ಸಾವಾಗಿದೆ ಎಂದ್ರೂ ಬಿಡದ ಪೊಲೀಸರು
Team Udayavani, Apr 29, 2021, 12:34 PM IST
“ಸರ್.. ನಾನು ಮೈಸೂರಿನಿಂದ ಬರುತ್ತಿದ್ದೇನೆ.ನನ್ನ ಸಹೋದರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಆಸ್ಪತ್ರೆ ಬಳಿ ಯಾರೂ ಇಲ್ಲ.ಮೈಸೂರಿನಿಂದ ಇಲ್ಲಿಯವರೆಗೂ ಎಲ್ಲಾ ಪೊಲೀಸರು ಬಿಟ್ಟಿದ್ದಾರೆ. ದಯಬಿಟ್ಟು ನನ್ನನ್ನು ಬಿಟ್ಟುಬಿಡಿ ಸರ್..’ಇದು..ಬುಧವಾರ ಸಹೋದರನ ಸಾವಿನ ವಿಷಯ ತಿಳಿದು ಸಹೋದರನನ್ನು ಕಾಣಲು ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದಿದ್ದ ಯುವಕರನನ್ನು ತಡೆದ ಪೊಲೀಸರು, ವಾಹನ ಸೀಜ್ ಮಾಡಿದಾಗ ಯುವಕರು ಪೊಲೀಸರಿಗೆ ಪರಿ ಪರಿಯಾಗಿ ಬೇಡಿಕೊಂಡ ಮನ ಮಿಡಿಯುವ ಘಟನೆ.
ಕೊರೊನಾ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿದ್ದು, 10 ಗಂಟೆ ಬಳಿಕ ಅನಗತ್ಯ ಓಡಾಟ ನಡೆಸುತ್ತಿರುವವರ ವಾಹನಗಳನ್ನು ಸಿಬ್ಬಂದಿ ಸೀಜ್ಮಾಡುತ್ತಿದ್ದು, ಈ ವೇಳೆ ಮೈಸೂರಿನಿಂದ ಬೆಂಗಳೂರಿಗೆ ಬಂದ ಯುವಕರನ್ನು ಪೊಲೀಸರು ತಡೆದು, ಅವರ ವಾಹನವನ್ನು ಸೀಜ್ ಮಾಡಿದ್ದಾರೆ.
“ಸರ್.. ತುಂಬಾ ಎಮರ್ಜೆನ್ಸಿ ಇದೆ. ನನ್ನಸಹೋದರ ಸಾವನ್ನಪ್ಪಿದ್ದಾನೆ. ಅಲ್ಲಿಗೆ ಹೋಗಲೇಬೇಕು ಎಂದು ಮನವಿ ಮಾಡಿದರೂ ಸಹ ವಾಹನ ಸೀಜ್ ಮಾಡಿರುವುದಕ್ಕೆ ಪೊಲೀಸರ ವಿರುದ್ಧ ಯುವಕರು ಅಸಮಾಧಾನ ಹೊರಹಾಕಿದ್ದಾರೆ. ಕೊನೆಗೆ ಪೊಲೀಸರು, ಯುವಕರ ಸಂಬಂಧಿಕರೊಡನೆ ಫೋನ್ನಲ್ಲಿ ಮಾತನಾಡಿ ಸಹೋದರನ ಸಾವಿನ ವಿಚಾರ ಖಚಿತ ಪಡಿಸಿಕೊಂಡು ವಾಹನ ಬಿಟ್ಟುಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ