ಆತ್ಮಸ್ಥೈರ್ಯದಿಂದ ಕೊರೊನಾ ಎದುರಿಸೋಣ


Team Udayavani, May 31, 2021, 4:39 PM IST

covid news

ನೆಲಮಂಗಲ: ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಅವರು ಕೋವಿಡ್‌ ಸೋಂಕಿಗೆ ಒಳಗಾಗಿಸುಮಾರು ಒಂದು ತಿಂಗಳಿಗೂ ಹೆಚ್ಚುಕಾಲಅನಾರೋಗ್ಯಗೊಂಡು ಕೊರೊನಾ ಗೆದ್ದುಬರುವುದರೊಂದಿಗೆ ಕ್ಷೇತ್ರದಲ್ಲಿ ಕೊರೊನಾಕ್ಕೆಕಡಿವಾಣ ಹಾಕುವಲ್ಲಿ ಅಧಿಕಾರಿಗಳು, ವೈದ್ಯರು,ಕಾರ್ಯಕರ್ತರ ಜತೆಗೂಡಿ ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಈ ಕುರಿತು ಉದಯವಾಣಿ ಕಿರು ಸಂದರ್ಶನದಲ್ಲಿತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ತಾಲೂಕಿನ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕೋವಿಡ್‌ ಪರಿಸ್ಥಿತಿ ಹೇಗಿದೆ ?

ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್‌ ಸಮಸ್ಯೆಗಳುಸುಧಾರಣೆ ಹಂತಕ್ಕೆ ಬರುತ್ತಿದೆ. ಕಳೆದ 15-20ದಿನಗಳ ಹಿಂದೆ ತಾಲೂಕಿನ ಜನರು ಸಾಕಷ್ಟುಸಮಸ್ಯೆಗಳನ್ನು ಎದುರಿಸಬೇಕಾಯಿತು. ತಾಲೂಕುಆಡಳಿತ , ಆರೋಗ್ಯ ಕಾರ್ಯಕರ್ತರು, ಪೊಲೀಸ್‌ಇಲಾಖೆಯ ಮತ್ತು ಸಂಘಸಂಸ್ಥೆಗಳುಪರಿಶ್ರಮದಿಂದ ಪ್ರತಿಯೊಬ್ಬರೂ ಕೊರೊನಾವಿರುದ್ದ ಸಮರ ಸಾರಿದ್ದರಿಂದಾಗಿ ಕ್ಷೇತ್ರದಲ್ಲಿ ಸಮಸ್ಯೆಸ್ವಲ್ಪಮಟ್ಟಿಗೆ ಸುಧಾರಿಸಿದೆ.

ಕೊರೊನಾ ಸಮಸ್ಯೆಗಳಿಂದ ಕ್ಷೇತ್ರದಸಂಕಷ್ಟಗಳಿಗೆ ಪರಿಹಾರ ಸಿಕ್ಕಿದೆಯಾ?

ಕೋವಿಡ್‌ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ.ಕ್ಷೇತ್ರದಲ್ಲಿರುವ ಎಲ್ಲಾ ಹಂತದ ಮುಖಂಡರುಸಂಘ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದತಂಡಗಳನ್ನು ಕಟ್ಟಿಕೊಂಡು ತಮ್ಮದೇಆದರೀತಿಯಲ್ಲಿ ಹೋರಾಟ ಮಾಡಿದ್ದಾರೆ.ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯಿಂದ 10 ಆಕ್ಸಿಜನ್‌ಕಾನ್ಸನ್‌ ಟ್ರೇಟರ್‌ಗಳನ್ನು 2 ವೆಂಟಿಲೇಟರ್‌ಗಳನ್ನುನೀಡಿದ್ದಾರೆ. ತಾಲೂಕಿನಲ್ಲಿರುವಕೈಗಾರಿಕೋದ್ಯಮಿಗಳು ತಮ್ಮ ಶಕ್ತಿಯನುಸಾರಸಹಕರಿಸಿದ್ದಾರೆ. ನಾನೂ ಸಹ ಶಾಸಕರಕ್ಷೇತ್ರಾಭಿವೃದ್ಧಿ ನಿಧಿಯಿಂದ ಸಾಕಷ್ಟು ಅನುಕೂಲಕಲ್ಪಿಸಿದ್ದು, ಈಗ ಯಾವುದೇ ರೀತಿ ತೊಂದರೆಯಿಲ್ಲ.

ಕೋವಿಡ್‌ ಸಂಕಷ್ಟಕ್ಕೆ ನಿಮ್ಮ ಕೊಡುಗೆ ಏನು ?

ಕೊರೋನಾ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯಸರಕಾರದಿಂದ ನೀಡಬೇಕಾದ ಎಲ್ಲಾ ರೀತಿಯಸೌಲಭ್ಯಗಳನ್ನು ತಾಲೂಕಿಗೆ ಕೊಡಿಸಿಕೊಡಲಾಗಿದೆ.ದೆಹಲಿಯಲ್ಲಿರುವ ಎನ್‌ಡಿಆರ್‌ಎಫ್ ಯವರಸಂಪರ್ಕ ಸಾಧಿಸಿ 40ಕ್ಕೂ ಹೆಚ್ಚು ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ಗಳನ್ನು ಹಾಗೂ 2 ವೆಂಟಿಲೇಟರ್‌ಗಳನ್ನುಕೊಡಿಸಿಕೊಡಲಾಗಿದೆ. ಸ್ವತಃ ಸೋಂಕಿಗೆ ಒಳಗಾದಸಂದರ್ಭದಲ್ಲಿಯೂ ಉಸ್ತುವಾರಿ ಸಚಿವರು ಮತ್ತುಸಂಸದರೊಂದಿಗೆ ಚರ್ಚಿಸಿ ಅಧಿಕಾರಿಗಳೊಂದಿಗೆಸಮನ್ವಯತೆ ಸಾಧಿಸಿ ಸೋಂಕಿತರಿಗೆ ಸೂಕ್ತಅನುಕೂಲತೆಗಳನ್ನು ಕಲ್ಪಿಸಿಕೊಡಲಾಗಿದೆ.ನನ್ನ ಅನುದಾನದಲ್ಲಿ ಎಲ್ಲಾ ಪಿಎಚ್‌ಸಿಗಳಿಗೂತಲಾ 5, ಹಾಗೂ ಸೋಲೂರು ಹೋಬಳಿಯ 3ಪಿಎಚ್‌ಸಿಗಳಿಗೆ 10 ಸೇರಿದಂತೆ 60 ಆಕ್ಸಿಜನ್‌ಕಾನ್ಸನ್‌ ಟ್ರೇಟರ್‌ಗಳನ್ನು ನೀಡಲುಕ್ರಮವಹಿಸುತಿದ್ದೇನೆ.

ಕೋವಿಡ್‌ ಆಸ್ಪತ್ರೆಗಳು, ಕೇರ್‌ ಸೆಂಟರ್‌ಗಳಿಗೆ ಭೇಟಿ ನೀಡಿದ್ದೀರಾ?

ಹೌದು ಈಗಾಗಲೆ ಸಾಕಷ್ಟು ಭಾರಿ ಭೇಟಿ ನೀಡಿಅಲ್ಲಿನ ಆರೋಗ್ಯ ಸಿಬ್ಬಂದಿ ಮತ್ತು ಸೋಂಕಿತರಸಮಸ್ಯೆಗಳನ್ನು ಆಲಿಸಿದ್ದೇನೆ. ನಿನ್ನೆಯೂ ಕೇರ್‌ಸೆಂಟರ್‌ ಮತ್ತು ಆಸ್ಪತ್ರಗೆ ಭೇಟಿ ನೀಡಿಅಗತ್ಯತೆಗಳನ್ನು ಪೂರೈಸಲು ತಹಶೀಲ್ದಾರ್‌ಮಂಜುನಾಥ್‌ ಅವರಿಗೆ ತಿಳಿಸಿದ್ದೇನೆ. ಎಲ್ಲಾರೀತಿಯ ಪರಿಕರಗಳನ್ನು ಬಳಕೆ ಮಾಡಲಾಗುತ್ತಿದೆ.ಸದ್ಯಕ್ಕೆ ಬೆಡ್‌, ಆಕ್ಸಿಜನ್‌ ಸೇರಿದಂತೆ ಆಂಬುಲೆನ್ಸ್‌ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆಎಚ್ಚರಿಕೆ ವಹಿಸಲಾಗಿದೆ.

ಸಾಮಾನ್ಯ ವ್ಯಕ್ತಿಯಾಗಿ ಕೊರೊನಾ ತಡೆಗೆ ನಿಮ್ಮ ಸಲಹೆ ?

ನನ್ನ ಪ್ರಕಾರ ಹೇಳುವುದಾರರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್‌ ವಿಚಾರದಲ್ಲಿ ಮೈ ಮರೆತಫ‌ಲವಾಗಿ ರಾಜ್ಯ ಸಂಕಷ್ಟವನ್ನು ಎದುರಿಸಬೇಕಾಯಿತು. ಮೊದಲನೇ ಅಲೆ ಬಳಿಕ ಎಚ್ಚೆತ್ತುಕೊಂಡಿದ್ದರೆ ಸಮಸ್ಯೆಉಲ್ಬಣವಾಗುತ್ತಿರಲಿಲ್ಲ, ಪ್ರಸ್ತುತ ಜಾರಿಯಲ್ಲಿರುವ ಕಠಿಣ ಕ್ರಮಗಳನ್ನು ಈ ಮೊದಲೆ ತೆಗೆದುಕೊಳ್ಳಬೇಕಿತ್ತು.ಸರ್ಕಾರ ನಿಲುವಿನಿಂದ ಅನೇಕ ಜನ ಪ್ರಾಣ ತೆತ್ತರು. ಪ್ರಸ್ತುತ ಜನರು ಜಾಗೃತಿ ವಹಿಸಿ, ಸ್ವತ್ಛತೆ, ಅಂತರಕಾಪಾಡಿಕೊಂಡರೆ ಈಗಲೂ ಕೊರೊನಾ ನಿರ್ನಾಮ ಸಾಧ್ಯ.ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾಕ್ಕೆ ಕಡಿವಾಣ ಹಾಕುವಲ್ಲಿ ನನ್ನೊಂದಿಗೆ ಹಗಲಿರುಳೆನ್ನದೆಶ್ರಮಿಸುತ್ತಿರುವ ತಾಲೂಕು ಆಡಳಿತ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ, ಸಂಘಸಂಸ್ಥೆಗಳು ಹಾಗೂ ಕೋರೊನಾ ವಾರಿಯರ್ಗಳ ಸಹಕಾರ ಮತ್ತು ಸಂಸದಬಿ.ಎನ್‌.ಬಚ್ಚೇಗೌಡರು ಹಾಗೂ ವಿಧಾನಪರಿಷತ್‌ ಸದಸ್ಯ ಎಸ್‌.ರವಿ ಅವರುಗಳು ತಲಾ25ಲಕ್ಷ ರೂ. ಗಳನ್ನು ಕ್ಷೇತ್ರ ಸಂಕಷ್ಟಕ್ಕೆ ನೀಡಿದ್ದು ಅಭಿನಂದನಾರ್ಹವಾಗಿವೆ.

ಕೊಟ್ರೇಶ್‌.ಆರ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.