ಹಿಜಾಬ್ ವಿವಾದ ಸರ್ಕಾರ ಕೂಡಲೇ ಕೊನೆಗಾಣಿಸಲಿ
Team Udayavani, Feb 12, 2022, 4:12 PM IST
ಬಳ್ಳಾರಿ: ರಾಜ್ಯದಲ್ಲಿ ಕೋಮುಸೌಹಾರ್ದತೆ ಮತ್ತು ಸಹಬಾಳ್ವೆಗೆಧಕ್ಕೆ ತರುವ ರೀತಿಯಲ್ಲಿ ಕಳೆದಕೆಲ ದಿನಗಳಿಂದ ನಡೆಯುತ್ತಿರುವಘಟನೆಗಳು ಮತ್ತು ಅದನ್ನು ರಾಜ್ಯ ಬಿಜೆಪಿಸರ್ಕಾರ ನಿಭಾಯಿಸಿದ ರೀತಿಯನ್ನುಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾಸಮಿತಿ ತೀವ್ರವಾಗಿ ಖಂಡಿಸಿದೆ.ಈ ಕುರಿತು ಪ್ರಕಟಣೆ ನೀಡಿರುವಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣಉಪಾಧ್ಯ, ಶಾಲಾ ಕಾಲೇಜುಗಳಲ್ಲಿ,ಸರ್ಕಾರಿ ಕಚೇರಿಗಳಲ್ಲಿ, ವಿಧಾನಸೌಧದಲ್ಲೂ ಧಾರ್ಮಿಕ ಆಚರಣೆಗಳಿಗೆಅವಕಾಶ ನೀಡಿವೆ.
ಸರ್ಕಾರದ ಆರ್ಥಿಕನೆರವಿನಲ್ಲಿ ನಡೆಯುವ ಸಂಸ್ಥೆಗಳಲ್ಲಿಧಾರ್ಮಿಕ ಆಚರಣೆ ಸಲ್ಲದುಎಂಬ ಪ್ರಜಾಸತ್ತಾತ್ಮಕ ಸಂವಿಧಾನದಆಶಯಕ್ಕೆ ಧಕ್ಕೆ ತಂದಿವೆ. ಅಷ್ಟೇ ಅಲ್ಲದೆಆಡಳಿತ ಪಕ್ಷಗಳು ತಮ್ಮ ಕ್ಷುಲ್ಲಕಓಟಿನ ರಾಜಕಾರಣಕ್ಕಾಗಿ ಒಂದಲ್ಲಒಂದು ಜಾತಿ, ಮತೀಯ ಕೋಮಿಗೆಬೆಂಬಲ ನೀಡುವುದು ಮತ್ತು ಇತರೆಕೋಮುಗಳ ವಿರುದ್ಧ ಎತ್ತಿಕಟ್ಟುತ್ತಾಕೋಮುವಾದವನ್ನೂ ಬೆಳೆಸಿವೆ ಎಂದುಅವರು ಆರೋಪಿಸಿದ್ದಾರೆ.ಶಾಲಾ ಕಾಲೇಜುಗಳಲ್ಲಿ ಎಲ್ಲ ತರಹದಧಾರ್ಮಿಕ ಆಚರಣೆಗಳೂ ಜರುಗುತ್ತಿವೆ.
ಆದರೆ ಹಠಾತ್ತಾಗಿ ಹಿಜಾಬ್ಧರಿಸುವಂತಹ ಭಾವನಾತ್ಮಕ ವಿಷಯದಸುತ್ತ ವಿವಾದ ಹುಟ್ಟು ಹಾಕಲಾಯಿತು.ನಿಷ್ಪಕ್ಷಪಾತವಾಗಿರಬೇಕಾಗಿದ್ದ ಸರ್ಕಾರಒಂದು ಕಣ್ಣಿಗೆ ಬೆಣ್ಣೆ ಇನ್ನೊಂದುಕಣ್ಣಿಗೆ ಸುಣ್ಣ ಎಂಬ ಧೋರಣೆತಳೆಯಿತು.
ಇಂಥ ದುರುದ್ದೇಶದಿಂದಎಳೆಯ ಮನಸ್ಸುಗಳನ್ನುಕಲುಷಿತಗೊಳಿಸಲಾಯಿತು. ಸ್ಪಷ್ಟವಾಗಿಕಾನೂನಿನ ಉಲ್ಲಂಘನೆ ಮಾಡುತ್ತಿರುವ”ವಿದ್ಯಾರ್ಥಿಗಳ’ ವಿರುದ್ಧ ಯಾವುದೇಕ್ರಮ ಕೈಗೊಳ್ಳದೇ ಪರಿಸ್ಥಿತಿಯನ್ನುಬಿಗಡಾಯಿಸಲು ಬಿಡಲಾಯಿತು.ಇಷ್ಟೇ ಸಾಲದೆಂಬಂತೆ ಸರ್ಕಾರಹಾಗೂ ಆಡಳಿತ ಪಕ್ಷದ ಅನೇಕನಾಯಕರು ಇಂಥ ದುಷ್ಕೃತ್ಯಗಳಪರವಾಗಿ ನಿಲುವು ತಳೆದು ನಿಂತದ್ದುರಾಜ್ಯವ್ಯಾಪಿಯಾಗಿ ಸಂಕ್ಷೋಭೆಯವಾತಾವರಣವನ್ನು ಸೃಷ್ಟಿಸಿತು ಮತ್ತುಕೋಮು ಸಾಮರಸ್ಯಕ್ಕೆ ಹೆಸರಾಗಿದ್ದರಾಜ್ಯದ ಘನತೆಗೆ ವಿಶ್ವದಾದ್ಯಂತ ಕಳಂಕತಂದೊಡ್ಡಲಾಯಿತು.
ಕುವೆಂಪು, ತೇಜಸ್ವಿ,ಕೊಡಗಿನ ಗೌರಮ್ಮ, ಪಂಡಿತ ತಾರಾನಾಥ್ಮೊದಲಾದವರಿಂದ ಶ್ರೀಮಂತವಾದಕರ್ನಾಟಕದ ಸೌಹಾರ್ದ ಪರಂಪರೆಗೆಧಕ್ಕೆ ತರಲಾಗಿದ್ದು, ರಾಜ್ಯ ಸರ್ಕಾರಈ ಕೂಡಲೇ ಇಂಥ ದುಷ್ಕೃತ್ಯಗಳನ್ನುಕೊನೆಗೊಳಿಸಬೇಕು ಎಂದವರುಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ