ಅಪ್ರಾಪ್ತೆ ಮೇಲಿನ ಹತ್ಯಾಚಾರ ಖಂಡನೀಯ
Team Udayavani, Dec 16, 2021, 5:51 PM IST
ಇಂಡಿ: ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ತಾಂಡಾದ ಅಪ್ರಾಪ್ತೆ ಮೇಲೆ ನಡೆದಿರುವ ಹತ್ಯಾಚಾರ ಖಂಡಿಸಿ ಇಂಡಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಕಾರ್ಯಕರ್ತರು ಹಾಗೂ ಬಂಜಾರಾ ಸಮುದಾಯದವರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸಿದ್ರಾಮ ಮುಜಗೊಂಡ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆ ತಾಲೂಕಾಧ್ಯಕ್ಷ ಸಂಜು ಚವ್ಹಾಣ, ಸಮಾಜದ ಮುಖಂಡ ವಿಜಯಕುಮಾರ ರಾಠೊಡ ಮಾತನಾಡಿ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದು ಒಂದು ವಾರ ಕಳೆಯುತ್ತ ಬಂದರೂ ಜಿಲ್ಲಾಡಳಿತ ಮೌನ ವಹಿಸಿದೆ. ಬಡ ಜನಾಂಗದ ಮೇಲೆ ಸರಕಾರಕ್ಕೆ ಕರುಣೆ ಇಲ್ಲವೇ? ಅತ್ಯಾಚಾರವೆಸಗಿದ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಬೇಕು. ಬಾಧಿತ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಶೈಲಶ್ರೀ ರಾಠೊಡ, ಸುನೀಲ ರಾಠೊಡ, ಬಾಬು ಪವಾರ, ರಾಜು ಪವಾರ, ಸಂಜು ಜಾಧವ, ಮೋಹನ ರಾಠೊಡ, ಪ್ರಕಾಶ ಪವಾರ, ಅಶೋಕ ರಾಠೊಡ, ವಿವೇಕ್ ರಾಠೊಡ, ಅಭಿಷೇಕ ಜಾಧವ, ವಿಲಾಸ ಚವ್ಹಾಣ, ರಾಹುಲ್ ರಾಠೊಡ, ಕಲ್ಲು ರಾಠೊಡ, ಮಾದೇವ ಪವಾರ, ಗಣೇಶ ರಾಠೊಡ, ಧರ್ಮಸಿಂಗ್ ರಾಠೊಡ, ಪಂಡಿತ ರಾಠೊಡ, ಅರವಿಂದ ಜಾಧವ, ಕಿಶನ್ ಪವಾರ, ರವಿಕಾಂತ ಚವ್ಹಾಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ