ಹೊಟೇಲ್ ಒಳಗಡೆಯಿಂದಲೇ ನಗರ ವೀಕ್ಷಣೆ
Team Udayavani, May 3, 2018, 11:40 AM IST
ಮಹಾನಗರ: ಈ ಹೊಟೇಲ್ ಒಳಭಾಗಕ್ಕೆ ಪ್ರವೇಶಿಸಿದರೆ ಸಾಕು ಕರಾವಳಿಯ ಜೀವನದಿ ನೇತ್ರಾವತಿ, ವೆನ್ಲಾಕ್, ಪುರಭವನ, ಕೆಪಿಟಿ, ಕೋರ್ಟ್, ವಿಮಾನ ನಿಲ್ದಾಣ ಹೀಗೆ ಮಂಗಳೂರು ನಗರದ ಸಂಪೂರ್ಣ ಚಿತ್ರಣ ಕಣ್ಣ ಮುಂದೆ ಬರುತ್ತದೆ.
ನಗರದ ಕದ್ರಿ ಪಾರ್ಕ್ ಬಳಿ ಇರುವ ಹೊಟೇಲ್ವೊಂದರ ಪ್ರವೇಶ ದ್ವಾರದ ಒಂದು ಬದಿಯಲ್ಲಿ ಮಂಗಳೂರು ನಗರದ ಪ್ರಮುಖ ಚಿತ್ರಣವನ್ನು ಯಥಾ ರೂಪದಲ್ಲಿ ಪ್ರತಿಕೃತಿಯಾಗಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ಅಭಿವ್ಯಕ್ತಗೊಳಿಸಲಾಗಿದೆ. ಮಾಡೆಲ್ ರೂಪದಲ್ಲಿ ನಗರದ ಸಹಜರೂಪವನ್ನು ಮಿನಿಯೇಚರ್ ಶೈಲಿಯಲ್ಲಿ ರಚಿಸಿದ್ದು, ಇದು ವಾಸ್ತವಿಕ ಸಂಕೀರ್ಣದ ಪರಿಕಲ್ಪನೆಯಾಗಿದೆ.
ಮಿನಿಯೇಚರ್ ಮಾಡೆಲ್ ಹೊಟೇಲ್ ಆಗಮಿಸುವ ಗ್ರಾಹಕರನ್ನು ಅದರಲ್ಲೂ ಮಕ್ಕಳನ್ನು ಸೆಳೆಯುತ್ತಿದೆ. ಹೊಟೇಲ್ಗೆ ಕಾಲಿಡುತ್ತಿದ್ದಂತೆ ಗಮನ ಸೆಳೆಯುವ ಮಿನಿಯೇಚರ್ ಮಾಡೆಲ್ನ್ನು 30 ಫೀಟ್ ಉದ್ದ, 10 ಫೀಟ್ ಅಗಲದ ಜಾಗದಲ್ಲಿ ಕಲಾವಿದ ಸೂರಜ್ ಶೆಟ್ಟಿ ತಯಾರಿಸಿದ್ದಾರೆ. ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಾಡಲಾದ ಮಾಡೆಲ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.
ಮಿನಿಯೇಚರ್ ಮಾಡೆಲ್
ಹೊಟೇಲ್ಗೆ ದಿನನಿತ್ಯ ನೂರಾರು ಗ್ರಾಹಕರು ಬರುತ್ತಾರೆ. ಅದರಲ್ಲಿ ನಗರದ ಹೊರಭಾಗದಿಂದ ಬರುವ ಜನರು ಇರುತ್ತಾರೆ. ಅವರಿಗೆ ನಗರದ ಬಗ್ಗೆ ಮಾಹಿತಿ ನೀಡಲು ಹಾಗೂ ಸ್ವಲ್ಪ ಬದಲಾವಣೆಗಾಗಿ ಈ ಮಾಡೆಲ್ನ್ನು ಮಾಡಲಾಗಿದೆ ಎಂದು ಹೊಟೇಲ್ ಮಾಲಕರು ತಿಳಿಸುತ್ತಾರೆ. ಮಿನಿಯೇಚರ್ ಮಾಡೆಲ್ ಬಣ್ಣ ಬಣ್ಣಗಳಿಂದ ನೋಡಲು ಆಕರ್ಷಕವಾಗಿ ಕಾಣುವುದರಿಂದ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ.
ಫೋಟೋ, ವೀಡಿಯೋ ಹವಾ
ನಗರದ ಸಂಪೂರ್ಣ ಚಿತ್ರಣ ನೀಡುವ ಮಿನಿಯೇಚರ್ ಮಾಡೆಲ್ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಬಂದ ಗ್ರಾಹಕರು ಮಿನಿಯೇಚರ್ ಮಾಡೆಲ್ನ ಫೋಟೋ, ವೀಡಿಯೋ ತೆಗೆಯುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಗ್ರಾಹಕರು ತಮ್ಮೊಂದಿಗೆ ಬಂದವರೊಂದಿಗೆ ಈ ದೃಶ್ಯದ ಸನ್ನಿವೇಶಗಳನ್ನು ನೋಡುತ್ತ ಪರಸ್ಪರ ವರ್ಣಿಸುವ ಸಂದರ್ಭ ಸಾಮಾನ್ಯವಾಗಿದೆ.
ಬದಲಾವಣೆಗಾಗಿ ಮಾಡೆಲ್
ನಗರದಲ್ಲಿ ಹಲವಾರು ಹೊಟೇಲ್ ಗಳಿವೆ. ನಮ್ಮ ಹೊಟೇಲ್ನಲ್ಲಿ ಸ್ವಲ್ಪ ಬದಲಾವಣೆ ಇರಲಿ. ಹಾಗೂ ಜನರಿಗೆ ನಗರದ ಬಗ್ಗೆ ಮಾಹಿತಿ ಲಭಿಸುವಂತಾಗಲಿ ಎಂಬ ಕಾರಣಕ್ಕಾಗಿ ನಗರದ ಮಿನಿಯೇಚರ್ ಮಾಡೆಲ್ ಮಾಡಲಾಯಿತು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
– ಸ್ವರ್ಣ ಸುಂದರ,
ಹೊಟೇಲ್ ಮಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ