ಶಾಪಿಂಗ್‌ ನಲ್ಲಿ ಉಳಿತಾಯ ಇರಲಿ ಎಲ್ಲರ ಗಮನ


Team Udayavani, Mar 26, 2018, 4:32 PM IST

26-March-15.jpg

ಶಾಪಿಂಗ್‌ ಎಂದರೆ ಯಾರಿಗೆತಾನೇ ಇಷ್ಟವಿಲ್ಲ. ಅದರಲ್ಲೂ ಹೆಣ್ಣು ಮಕ್ಕಳ ಕೈಗೆ ಹಣ ಬಂದರೆ ಸಾಕು ಶಾಪಿಂಗ್‌ ಗೆ ಹೊರಡುತ್ತಾರೆ. ಹೆಣ್ಣು ಮಕ್ಕಳು ಶಾಪಿಂಗ್‌ ಮಾಲ್‌ ಗೆ ಹೋದರೆ ಹಿಂದಿರುಗಿ ಬರುವ ಯೋಚನೆಯಲ್ಲೇ ಇರಲ್ಲ. ಅವರನ್ನು ವಾಪಸ್‌ ಮನೆಗೆ ಕೊಂಡೊಯ್ಯುವುದೇ ದೊಡ್ಡ ಸಾಹಸ ಎನ್ನುವ ಪುರುಷರು ಅನಗತ್ಯ ಶಾಪಿಂಗ್‌ಗೆ ಕಡಿವಾಣ ಹಾಕು ವುದೇ ಹೆಚ್ಚು. ಹೆಂಗಳೆಯರು ಶಾಪಿಂಗ್‌ ಮಾಡುವುದರಲ್ಲಿ ನಿಸ್ಸೀಮರಾದರೂ ಉಳಿತಾಯದತ್ತಲೂ ಅವರ ಗಮನ ಇದ್ದೇ ಇರುತ್ತದೆ. ಹಾಗಂತ ಉಳಿತಾಯದ ಯೋಚನೆಯೇ ಹೆಚ್ಚಾದರೆ ಎಲ್ಲದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು. ಅದಕ್ಕಾಗಿ ಖರೀದಿಯ ಜತೆ  ಜತೆಗೆ ಉಳಿತಾಯದತ್ತಲೂ ಗಮನವಿದ್ದರೆ ಬದುಕು ಆರಾಮವಾಗುತ್ತದೆ ಎಂಬುದು ಅನುಭವಿಗಳ ಮಾತು.

ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೂ, ಐಷಾರಾಮಿ ವಸ್ತುಗಳ ಖರೀದಿಗೂ ವ್ಯತ್ಯಾಸವಿದೆ. ಗೃಹಿಣಿಯರು ಹೆಚ್ಚಾಗಿ ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವುದಕ್ಕಾಗಿ ಗಳಿಗೊಮ್ಮೆಯಾದರೂ ಮಾರುಕಟ್ಟೆ ಕಡೆ ತೆರಳುತ್ತಾರೆ. ಯುವತಿಯರು ಬಟ್ಟೆಬರೆಗಳಿಗಾಗಿ ವಾರಕ್ಕೊಮ್ಮೆ ಮಾಲ್‌ ಗಳತ್ತ ಕಣ್ಣು ಹಾಯಿಸುತ್ತಾರೆ. ಕೈಯಲ್ಲಿ ದುಡ್ಡಿಲ್ಲದಿದ್ದರೂ ಶಾಪಿಂಗ್‌ ಮಾಡಬೇಕು ಎಂದು ಕನಸು ಕಾಣುವ ಜನರ ಸಂಖ್ಯೆಗೇನೂ ಕಡಿಮೆ ಇಲ್ಲ.

ಶಾಪಿಂಗ್‌ಗಾಗಿ ಮನೆಯಿಂದ ಹೊರಟರೆ ಕೈಯಲ್ಲಿದ್ದ ಹಣ ಹೇಗೆ ಖರ್ಚಾಗುತ್ತದೆ ಎಂಬುದು ತಿಳಿಯುವುದಿಲ್ಲ ಎಂಬುದು ಶಾಪಿಂಗ್‌ಗೆ ಹೋಗುವ ಪ್ರತಿಯೊಬ್ಬರ ಅಳಲು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಹಳ ಕಷ್ಟದ ವಿಚಾರ. ಯಾಕೆಂದರೆ ಒಂದು ವಸ್ತು ಖರೀದಿಗೆ ಹೊರ ನಡೆದರೆ 100 ವಸ್ತುಗಳು ಕಣ್ಣ ಮುಂದೆ ಹಾದುಹೋಗುತ್ತವೆ. ಇದರಿಂದಾಗಿ ಖರೀದಿಸಲು ಹೋದ ವಸ್ತುಗಳೊಂದಿಗೆ ಇನ್ನು ಕೆಲವು ವಸ್ತುಗಳು ನಮ್ಮ ಬ್ಯಾಗ್‌ ಸೇರಿಕೊಳ್ಳುತ್ತವೆ. ಇದರಿಂದ ಕೊನೆಗೆ ಬರುವ ಬಿಲ್‌ ಪಟ್ಟಿಯೂ ದೊಡ್ಡ ದಿ ರು ತ್ತದೆ. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಹೋಗುತ್ತದೆ.

ಶಾಪಿಂಗ್‌ನಲ್ಲಿ ಉಳಿತಾಯ ಹೇಗೆ?
· ಮನೆ ಅಥವಾ ಕಚೇರಿಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಮುನ್ನ ಮಾಲ್‌, ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಹೋಲಿಕೆ ಮಾಡಿಕೊಳ್ಳುವುದು ಉತ್ತಮ.

· ಒಂದೇ ವಸ್ತು ಮಾತ್ರ ಖರೀದಿಸಬೇಕು ಎಂದು ತೆರಳುವುದಾದರೆ ಪರ್ಸ್‌ನಲ್ಲಿ ಅದಕ್ಕೆ ಬೇಕಾಗುವಷ್ಟೇ
ಹಣವನ್ನು ಇರಿಸಿಕೊಳ್ಳುವುದು ಒಳ್ಳೆಯದು.

· ಶಾಪಿಂಗ್‌ಗೆ ತೆರಳುವಾಗ ಖರೀದಿಸಬೇಕಿರುವ ವಸ್ತುಗಳ ಪಟ್ಟಿ ಮಾಡಿಕೊಳ್ಳಬೇಕು. ಯಾವ ವಸ್ತು ಬೇಕು ಅದರತ್ತ ಮಾತ್ರ ಗಮನಹರಿಸಬೇಕು.

· ನಾವು ಹಿಂದೆ ಖರೀದಿಸಿದ ವಸ್ತುವನ್ನೇ ಮತ್ತೂಮ್ಮೆ ಖರೀದಿಸದಂತೆ ಎಚ್ಚರ ವಹಿಸಬೇಕು. ಬಟ್ಟೆ ಅಥವಾ ಇನ್ನಿತರ ವಸ್ತುಗಳು ನಮಗೆ ಒಪ್ಪುತ್ತವೆಯೋ ಎಂದು ಪರಿಶೀಲಿಸಿಕೊಳ್ಳಬೇಕು.

· ಮಾಲ್‌ಗ‌ಳಲ್ಲಿ ಹಬ್ಬಹರಿದಿನಗಳಲ್ಲಿ ಆಫರ್‌ಗಳಿರುತ್ತವೆ. ಇದರ ಪ್ರಯೋ ಜನ ಪಡೆ ದು ಕೊಂಡರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ.

· ದುಬಾರಿ ವಸ್ತುಗಳ ಖರೀದಿ ಸಮಯದಲ್ಲಿ ಬೇರೆ ಬೇರೆ ಶಾಪ್‌ ಗಳ ಬೆಲೆಯನ್ನು ಪರಿಶೀಲಿಸಿಕೊಳ್ಳಿ.

· ಉಳಿತಾಯದ ಶಾಪಿಂಗ್‌ ಮಾಡಬೇಕೆಂದಿದ್ದರೆ ಶಾಪಿಂಗ್‌ಗೆ ತೆರಳುವಾಗ ಕ್ರೆಡಿಟ್‌ಕಾರ್ಡ್ ಬದಲು ಡೆಬಿಟ್‌ ಕಾರ್ಡ್  ಬಳಸಿ.

.ಡೆಬಿಟ್‌ ಕಾರ್ಡ್ಗಿಂತ ನಗದು ಬಳಕೆ ಉತ್ತಮ ಎಂಬುದನ್ನು ಮರೆಯದಿರಿ.

· ಶಾಪಿಂಗ್‌ ಮಾಲ್‌ ಗಳಲ್ಲಿರುವ ವಿವಿಧ ವೋಚರ್‌ ಕಾರ್ಡ್ ಗಳ ಲಾಭ ಪಡೆಯಿರಿ. ಇದ ರಿಂದ ಶಾಪಿಂಗ್‌ ನಲ್ಲಿ   ನಿಮಗೆ ವಿಶೇಷ ರಿಯಾಯಿತಿ ಸಿಗಲಿದೆ.

· ಮಾರು ಕಟ್ಟೆ ಹತ್ತಿರದಲ್ಲೇ ಇದ್ದರೆ ನಡೆದುಕೊಂಡೇ ಹೋಗಿ. ಇದರಿಂದ ಉಳಿತಾಯವಾಗುವ ಹಣದಲ್ಲಿ ನೀವು ಬೇರೆ
ಯಾವುದಾದರೂ ವಸ್ತುವನ್ನು ಖರೀದಿಸಬಹುದು.

· ಉಳಿತಾಯದ ನೆಪದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ತರಬೇಡಿ. ದೀರ್ಘ‌ ಕಾಲ ಬಳಸಬಹುದಾದ ವಸ್ತುಗಳಿಗೆ ಕೊಂಚ ಹಣ ಹೆಚ್ಚು ಕೊಟ್ಟು ತಂದರೂ ತೊಂದರೆಯಿಲ್ಲ ಎಂಬುದನ್ನು ಮರೆಯದಿರಿ.

ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.