ಸಿಡಿಲು ಸಹಿತ ಗಾಳಿ ಮಳೆ: ಅಲ್ಲಲ್ಲಿ  ಹಾನಿ


Team Udayavani, Mar 20, 2018, 8:00 AM IST

Tree-19-3.jpg

ಕಾಸರಗೋಡು/ ಮಂಗಳೂರು/ ಉಡುಪಿ: ಕರಾವಳಿ ಮತ್ತು ಒಳನಾಡಿನ ವಿವಿಧೆಡೆ ಸೋಮವಾರ ಅಪರಾಹ್ನ ಸುರಿದ ಸಿಡಿಲು ಸಹಿತ ಗಾಳಿ ಮಳೆಯಿಂದ ಅಲ್ಲಲ್ಲಿ ಹಾನಿ, ನಷ್ಟ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆ ಮಳೆಯಾಗಿದ್ದರೆ, ಉಡುಪಿ ಜಿಲ್ಲೆಯ ಒಂದೆರಡು ಕಡೆ ಮಾತ್ರ ಮಳೆ ಸುರಿದಿದೆ. ಹಗಲಿನಲ್ಲಿ ಬಿಸಿಲಿನ ಝಳ ಜೋರಾಗಿತ್ತು.

ನೆಲ್ಯಾಡಿ: ಗಾಳಿ-ಮಳೆ; ವ್ಯಾಪಕ ಹಾನಿ
ನೆಲ್ಯಾಡಿ ಪರಿಸರದಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಮತ್ತು ಸುರಿದ ಮಳೆಯಿಂದ ವ್ಯಾಪಕ ಹಾನಿ ಉಂಟಾಗಿದೆ. ಪೆರಿಯಶಾಂತಿಯಲ್ಲಿ ರಸ್ತೆಗೆ ಮರ ಅಡ್ಡಬಿದ್ದ ಪರಿಣಾಮ ಸುಮಾರು 3 ತಾಸುಗಳ ಕಾಲ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿತ್ತು. ಅಲ್ಲದೆ ವಿದ್ಯುತ್‌ ತಂತಿಗಳ ಮೇಲೆಯೇ ಮರಬಿದ್ದ ಪರಿಣಾಮ ವಿದ್ಯುತ್‌ ಸರಬರಾಜಿನಲ್ಲೂ ವ್ಯತ್ಯಯವಾಗಿದೆ.

ನೆಲ್ಯಾಡಿ ಪರಿಸರದಲ್ಲಿ ಅಪರಾಹ್ನ 3.30ರಿಂದ ಸುಮಾರು ಒಂದು ತಾಸು ಕಾಲ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ನೆಲ್ಯಾಡಿ ಜನತಾ ಕಾಲನಿ ನಿವಾಸಿ ಉಮರಬ್ಬ ಅವರ ಮನೆ ಮೇಲೆ ಮರ ಬಿದ್ದಿದ್ದು, ಮನೆ ಸಂಪೂರ್ಣ ಹಾನಿಗೊಂಡಿದೆ. ಮನೆಯ ಹೆಂಚು ಹಾಗೂ ಪಕ್ಕಾಸು ಮುರಿದು ಸುಮಾರು 2 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಉಮ್ಮರಬ್ಬ ಮತ್ತು ಮನೆಯವರು ಒಳಗಿದ್ದರೂ ಅಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌, ಸದಸ್ಯರಾದ ಅಬ್ದುಲ್‌ ಹಮೀದ್‌, ಮೋಹಿನಿ, ಗ್ರಾಮ ಸಹಾಯಕ ಮಾಯಿಲಪ್ಪ, ಸಿಬಂದಿಗಳಾದ ಶಿವಪ್ರಸಾದ್‌, ಗಿರೀಶ್‌, ಸೋಮಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲ್ಯಾಡಿ ಗಾಂಧಿ ಮೈದಾನದಲ್ಲಿರುವ ಗೆಳೆಯರ ಬಳಗದ ರಂಗವೇದಿಕೆಯ ಮಾಡಿನ ಸಿಮೆಂಟ್‌ ಶೀಟ್‌ಗಳು ಗಾಳಿಗೆ ಹಾರಿಹೋಗಿ ನಷ್ಟ ಸಂಭವಿಸಿದೆ.

ಮರ ಬಿದ್ದು ರಸ್ತೆ ಬಂದ್‌
ಪೆರಿಯಶಾಂತಿ – ಕೊಕ್ಕಡ ರಸ್ತೆಯ ಪೊಟ್ಲಡ್ಕದಲ್ಲಿ ರಸ್ತೆಗೆ ಮರಬಿದ್ದ ಪರಿಣಾಮ ಸುಮಾರು 3 ತಾಸು ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಧರ್ಮಸ್ಥಳ- ಸುಬ್ರಹ್ಮಣ್ಯ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಇತರ ವಾಹನಗಳು ಪುತ್ಯೆ ಮೂಲಕ ಬದಲಿ ರಸ್ತೆಯಲ್ಲಿ ಸಂಚರಿಸಿವೆ. ಬಳಿಕ ಸಾರ್ವಜನಿಕರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬಂದಿ ಮರ ತೆರವುಗೊಳಿಸಿದರು.


ವಿದ್ಯುತ್‌ ವ್ಯತ್ಯಯ

ಮಾದೇರಿ ಸಬ್‌ಸ್ಟೇಶನ್‌ನಿಂದ ವಿದ್ಯುತ್‌ ಸರಬರಾಜು ಆಗುವ ಮಾರ್ಗದ ಕೊಲ್ಯೊಟ್ಟಿನಲ್ಲಿ ವಿದ್ಯುತ್‌ ತಂತಿ ಮೇಲೆಯೇ ಮರವೊಂದು ಮುರಿದುಬಿದ್ದಿದ್ದು ವಿದ್ಯುತ್‌ ತಂತಿ ತುಂಡಾಗಿ ವಿದ್ಯುತ್‌ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ. ಗೋಳಿತ್ತೂಟ್ಟು ಅಂಬೇಡಲಿನಲ್ಲಿ ವಿದ್ಯುತ್‌ ತಂತಿಯ ಮೇಲೆಯೇ ಮರ ಬಿದ್ದು ವಿದ್ಯುತ್‌ ತಂತಿ ತುಂಡಾಗಿದ್ದು ವಿದ್ಯುತ್‌ ಸಂಚಾರದಲ್ಲಿ ಅಡಚಣೆಯಾಗಿದೆ.

ಕಡಬದಲ್ಲಿ ಹಾನಿ: ಬಲ್ಯ ಗ್ರಾಮದ ಪನ್ಯಾಡಿ ಪ್ರದೇಶದಲ್ಲಿ ಸೋಮವಾರ ಸಂಜೆ ಗಾಳಿ ಮಳೆಗೆ ತೆಂಗು ಅಡಿಕೆ ಹಾಗೂ ಇನ್ನಿತರ ಮರಗಳು ಉರುಳಿಬಿದ್ದು ಅಪಾರ ಹಾನಿಯಾಗಿದೆ. ಹಲವು ವಿದ್ಯುತ್‌ ಕಂಬಗಳು ಮುರಿದು ಬಿದ್ದು ವಿದ್ಯುತ್‌ ಸರಬರಾಜು ವ್ಯತ್ಯಯಗೊಂಡಿದೆ. ಉಳಿದಂತೆ ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಮಾಣಿ, ಪುತ್ತೂರು, ಸವಣೂರು, ಬೆಳ್ಳಾರೆ, ಕನ್ಯಾಡಿ, ಉಜಿರೆ, ಮಡಂತ್ಯಾರು, ಬೆಳ್ತಂಗಡಿ, ಕಾರ್ಕಳ, ಪೂಂಜಾಲಕಟ್ಟೆ, ವಿಟ್ಲ, ಉಡುಪಿಯ ಹಾಲಾಡಿ, ಅಮಾಸೆಬೈಲು, ಸಿದ್ದಾಪುರ, ಮುಳ್ಳೇರಿಯ, ಕಾಸರಗೋಡು ಸೇರಿದಂತೆ ಸುತ್ತಮುತ್ತಲಿನ ಪರಿಸರ ದಲ್ಲಿ ಮಳೆಯಾದ ವರದಿಯಾಗಿದೆ. 

ಅಡ್ಯನಡ್ಕದಲ್ಲಿ ಅಂಗಡಿಗೆ ಹಾನಿ

ವಿಟ್ಲ ಆಸುಪಾಸಿನಲ್ಲಿ ಸೋಮವಾರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಭಾರೀ ಮಳೆಯಿಂದ ಅಲ್ಲಲ್ಲಿ  ಹಾನಿ ಸಂಭವಿಸಿದೆ. ಅಡ್ಯನಡ್ಕ ಪೇಟೆಯಲ್ಲಿ ಬಿರುಗಾಳಿಗೆ ಅಂಗಡಿಯ ಮೇಲ್ಛಾವಣಿ ಹಾರಿಹೋಗಿ ಕಾಗದ ಪತ್ರ ಸೇರಿ ಮಹತ್ವದ ದಾಖಲೆಗಳು ಒದ್ದೆಮುದ್ದೆಯಾದವು, ಕೇಪು ಗ್ರಾ.ಪಂ. ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದ ಭಾಸ್ಕರ್‌ ಶೆಟ್ಟಿ ಅವರ ಅಂಗಡಿಯ ಛಾವಣಿಯ ಶೀಟ್‌ ಹಾರಿ ಹೋಗಿದೆ. ಕೊಳ್ನಾಡು ಗ್ರಾಮದ ಮಾದಕಟ್ಟೆ ಶಾಲಾ ಬಳಿಯ ವಿದ್ಯುತ್‌ ಪರಿವರ್ತಕಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಇದರಿಂದ ಆಸುಪಾಸಿನಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ. ಚಂದಳಿಕೆ ನಿಡ್ಯ ಕೃಷ್ಣಪ್ಪ ಆಚಾರ್‌ ಅವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಕಾಸರಗೋಡು: ಅಲ್ಲಲ್ಲಿ  ಮಳೆ; ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಸೋಮವಾರ ಸಂಜೆ 4.45ರಿಂದ ಕೆಲವೆಡೆ ಸುಮಾರು ಒಂದು ತಾಸು ಕಾಲ ಮಳೆಯಾಗಿದ್ದು, ವ್ಯಾಪಕ ಹಾನಿ ಉಂಟು ಮಾಡಿದೆ. ಕಾಸರಗೋಡು ನಗರದಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ವಿವಿಧೆಡೆ ಇನ್ನೂ ಕೆಲವು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನೀಲೇಶ್ವರ ವೆಸ್ಟ್‌ ಎಳೇರಿಯ ಪುಂಗಚಾಲ್‌ ಚಿರಕಯದಲ್ಲಿ ಸಿಡಿಲು ಬಡಿದು ಪಿ.ವಿ. ಶೋಭಾ ಅವರ ಮನೆ ಹಾನಿಗೀಡಾಗಿದೆ. ಮನೆಯಲ್ಲಿದ್ದ ಪ್ಲಸ್‌ ಟು ವಿದ್ಯಾರ್ಥಿ ಅರ್ಜುನನ್‌ (18) ಅವರಿಗೆ ವಿದ್ಯುತ್‌ ಆಘಾತ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಳಂಗರೆ ತೆರುವತ್ತ ಕೋಯಾಸ್‌ ಲೈನ್‌ನಲ್ಲಿ ಮನೆಯೊಂದು ಹಾನಿಗೀಡಾಗಿದೆ.

ಸಿಡಿಲು ಬಡಿದು ಓರ್ವ ಸಾವು
ಸವಣೂರು:
ಸೋಮವಾರ ಸುರಿದ ಸಿಡಿಲು ಮತ್ತು ಗಾಳಿ ಸಹಿತ ಮಳೆಗೆ ಓರ್ವ ಬಲಿಯಾಗಿ, ಇಬ್ಬರು ಗಾಯಗೊಂಡ ಘಟನೆ ಸವಣೂರು ಸಮೀಪದ ಪುಣcಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಪುಣcಪ್ಪಾಡಿ ಗ್ರಾಮದ ನೆಕ್ಕಿ ನಿವಾಸಿ ಕೇಪು ಎಂಬವರ ಪುತ್ರ ಧನಂಜಯ (36) ಮೃತಪಟ್ಟ ಯುವಕ. ಧನಂಜಯ ಅವರು ಅಂಗವಿಕಲರಾಗಿದ್ದು, ಮನೆಯಲ್ಲೇ ಇದ್ದರು. ಸಂಜೆ 4.30ಕ್ಕೆ ಮನೆ ಹಾಗೂ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದು ಅವರು ಆಘಾತಕ್ಕೆ ಈಡಾಗಿ ಈ ಘಟನೆ ನಡೆದಿದೆ. ಧನಂಜಯ ಅವರ ಅಕ್ಕ ಗೀತಾ, ದೊಡ್ಡಪ್ಪ ಕುಂಡ ಅವರಿಗೂ ಸಿಡಿಲಿನಿಂದ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಧನಂಜಯ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಕಾರು ಜಖಂ
ಸವಣೂರು ಸಮೀಪದ ಮೋನು ಎಂಬವರ ಮನೆ ಸಮೀಪ ಗಾಳಿಯಿಂದ ವಿದ್ಯುತ್‌ ಕಂಬ ಮುರಿದು ಕಾರೊಂದು ಜಖಂಗೊಂಡಿದೆ.

ಪುತ್ತೂರು: 5 ಸೆಂ.ಮೀ. ಮಳೆ
ಸೋಮವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಪುತ್ತೂರು, ಭಾಗಮಂಡಲ ಮತ್ತು ನಾಪೋಕ್ಲುವಿನಲ್ಲಿ 5 ಸೆಂ.ಮೀ.ಗಳ ಗರಿಷ್ಠ ಮಳೆಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸುರಿದ ಮಳೆ ವಿವರ: ಕೊಟ್ಟೆಗೆಹಾರ, ಜಯಪುರ, ಬಾಳೆಹೊನ್ನೂರು 3 ಸೆಂ.ಮೀ., ಧರ್ಮಸ್ಥಳ, ಬೈಲಹೊಂಗಲ, ಶೃಂಗೇರಿ, ಮಾಗಡಿ 2 ಸೆಂ.ಮೀ. ಮತ್ತು ಸೋಮವಾರಪೇಟೆ, ಕಮ್ಮರಡಿ, ಅಜ್ಜಂಪುರ, ಬಸರಾಳು, ಶಾಂತೆಬೆನ್ನೂರು 1 ಸೆಂ.ಮೀ. ಮಳೆಯಾಗಿದೆ.

ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 36.6 ಡಿ.ಸೆ. ತಾಪಮಾನ ದಾಖಲಾದರೆ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರಾಜ್ಯದಲ್ಲಿಯೇ ಕನಿಷ್ಠ 18.8 ಡಿ.ಸೆ. ಉಷ್ಣತೆ ದಾಖಲಾಗಿದೆ. ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ವಿವಿಧೆಡೆ ಮತ್ತು ಕರಾವಳಿಯ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ. ಆ ಬಳಿಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.    

ಟಾಪ್ ನ್ಯೂಸ್

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Crime News: ಕಾಸರಗೋಡು ಅಪರಾಧ ಸುದ್ದಿಗಳು

Crime News: ಕಾಸರಗೋಡು ಅಪರಾಧ ಸುದ್ದಿಗಳು

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

Udupi ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

BJP notice to Union Minister Sinha who did not come to campaign and did not vote

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Crime News: ಕಾಸರಗೋಡು ಅಪರಾಧ ಸುದ್ದಿಗಳು

Crime News: ಕಾಸರಗೋಡು ಅಪರಾಧ ಸುದ್ದಿಗಳು

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.