ಕಮಲೇಶ್ಚಂದ್ರ ವರದಿಅನುಷ್ಠಾನಗೊಳಿಸಿ,ತಾರತಮ್ಯ ನಿವಾರಿಸಲುನೌಕರರಒತ್ತಾಯ


Team Udayavani, May 25, 2018, 11:08 AM IST

25-may-5.jpg

ಆಲಂಕಾರು: ಭಾರತೀಯ ಅಂಚೆ ಇಲಾಖೆ ಇಂದಿಗೂ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಆದರೆ, ದೇಶಕ್ಕೆ ಆದಾಯ ತಂದುಕೊಡುವ ಇಲಾಖೆಯ ಆಧಾರ ಸ್ತಂಭವೇ ಅಲುಗಾಡುತ್ತಿದೆ. ಇಲಾಖೆಯ ಉನ್ನತಿಗೆ ಕಾರಣರಾದವರೇ ಹೊಟ್ಟೆಗೆ ಅನ್ನವಿಲ್ಲದೆ ದೇಶದ ಮೂಲೆ ಮೂಲೆಯಲ್ಲಿರುವ ಬಡವರ ಸೇವೆ ಮಾಡಬೇಕಾಗಿದೆ. ತಮ್ಮ ಹಕ್ಕನ್ನು ಮುಷ್ಕರದ ಮೂಲಕವೇ ಪಡೆಯಬೇಕಾಗಿದೆ. ದೇಶದಲ್ಲಿ 2.75 ಲಕ್ಷ ಇಲಾಖೇತರ ನೌಕರರು ಬ್ರಿಟಿಷರು ಬಿಟ್ಟು ಹೋದ ಜೀತಪದ್ಧತಿಯಲ್ಲೇ ದುಡಿಯುವಂತಾಗಿದೆ.

ಜಾರಿಯಾಗದ ವೇತನ ಆಯೋಗ
ಗ್ರಾಮೀಣ ಅಂಚೆ ನೌಕರರ ಕುರಿತು ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ. ತನ್ನ ಇಲಾಖೆಯ ನೌಕರರಿಗೆ 2016ರಲ್ಲೇ 7ನೇ ವೇತನ ಆಯೋಗವನ್ನು ಜಾರಿಗೊಳಿಸಿ ವೇತನವನ್ನು ಪರಿಷ್ಕರಿಸಿದೆ. ಆದರೆ ಇಲಾಖೇತರ ನೌಕರರಿಗೆ ವೇತನ ಪರಿಷ್ಕರಿಸದೆ ಸತಾಯಿಸುತ್ತಿದೆ. ನ್ಯಾಯಯುತ ಬೇಡಿಕೆಗಾಗಿ ಪ್ರತ್ಯೇಕ ಕಮಲೇಶ್ಚಂದ್ರ ಸಮಿತಿಯನ್ನು ರಚಿಸಿ ಸರಕಾರಕ್ಕೆ ವರದಿಯನ್ನು ನೀಡಲಾಯಿತು. ಆಯೋಗ ನೀಡಿದ 7ನೇ ವೇತನ ಆಯೋಗದ ವರದಿ ಮಂಡನೆಯಾಗಿ 16 ತಿಂಗಳು ಕಳೆದಿವೆ. ಹಣಕಾಸು ಇಲಾಖೆ ಅನುಮೋದಿಸಿ ಕಡತವನ್ನು ಕ್ಯಾಬಿನೆಟ್‌ ಗೆ ಕಳುಹಿಸಿ ತಿಂಗಳು ಎರಡು ಸಂದರೂ ಇನ್ನೂ ಅಲ್ಲೇ ಕೊಳೆಯುತ್ತಿದೆ.

ಎಲ್ಲವೂ ಹೋರಾಟದ ಫ‌ಲ
ಸ್ವಾತಂತ್ರ್ಯ ಪೂರ್ವದಿಂದಲೇ ಭಾರತದಲ್ಲಿ ಅಂಚೆ ಸೇವೆಗಳಿದ್ದರೂ ಇಲಾಖೆ ಮತ್ತು ಇಲಾಖೇತರ ಸಿಬಂದಿ ಎಂದು ಎರಡು ಬಗೆಯ ನೌಕರರನ್ನು ಸೃಷ್ಟಿಸಿ ದೌರ್ಜನ್ಯ ಎಸಗಿದೆ. 2004ರ ತನಕ ಇಲಾಖೇತರ ಹಾಗೂ ಇಲಾಖೆ ನೌಕರರು ಪ್ರತಿಯೊಂದು ಬೇಡಿಕೆಗೆ ಜಂಟಿಯಾಗಿ ಹೋರಾಟ ನಡೆಸುತ್ತಿದ್ದರು. ಆದರೆ ಇದರ ಫ‌ಲವನ್ನು ಇಲಾಖೆ ನೌಕರರು ಪಡೆಯುತ್ತಿದ್ದರೇ ಹೊರತು ಇಲಾಖೇತರರನ್ನು ವಂಚಿಸಲಾಗುತ್ತಿತ್ತು. 2004ರಲ್ಲಿ ಎಸ್‌.ಎಸ್‌. ಮಹಾದೇವಯ್ಯ ನೇತೃತ್ವದಲ್ಲಿ ಇಲಾಖೇತರ ನೌಕರರ ಪ್ರತ್ಯೇಕ ಸಂಘಟನೆ ಕಟ್ಟುವುದರ ಮೂಲಕ ಇಲಾಖೇತರ ಸಿಬಂದಿಯ ಬೇಡಿಕೆಗಳಿಗೆ ಹೋರಾಟದ ಕಿಚ್ಚು ಹೊತ್ತಿಸಲಾಯಿತು. ಇದರ ಪರಿಣಾಮ ಸಮಾನಾಂತರ ಬೋನಸ್‌, ಎಂಟಿಎಸ್‌ ಪರೀಕ್ಷೆಗಳಿಗೆ ಜಿಡಿಎಸ್‌ ನೌಕರರಿಗೆ ಮಾತ್ರ ಅವಕಾಶ, ಪೆನ್ಶನ್‌, ಪೋಸ್ಟ್‌ಮೆನ್‌ ಪರೀಕ್ಷೆಗೆ ಶೇ. 50 ಜಿಡಿಎಸ್‌ ನೌಕರರಿಗೆ ಅವಕಾಶ, 20 ದಿನ ವಾರ್ಷಿಕ ರಜೆ, ಮಹಿಳಾ ನೌಕರರಿಗೆ ವೆಲ್‌ಫೇರ್‌ ಫ‌ಂಡ್‌ ಮೂಲಕ ಹೆರಿಗೆ ಭತ್ತೆ – ಎಲ್ಲವನ್ನೂ ಹೋರಾಟ, ಮುಷ್ಕರದ ಮೂಲಕವೇ ಪಡೆಯಬೇಕಾಯಿತು. 

ಉಳಿತಾಯಕ್ಕೆ ಇಲ್ಲಿದೆ ಉಪಾಯ
ಈ ನೌಕರರು ರೆಗ್ಯುಲರ್‌ ನೌಕರರಿಗೆ ಸಮಾನರಲ್ಲ. ಓರ್ವ ಇಲಾಖೇತರ ಸಿಬಂದಿ ತನ್ನ ಜೀವನ ನಿರ್ವಹಣೆಗಾಗಿ ಇತರ ಆದಾಯದ ಮೂಲವನ್ನು ಹೊಂದಿರುತ್ತಾನೆ ಎಂದು ಇಲಾಖೆ ಸಬೂಬು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಇಲಾಖೆ ಇವರಿಗೆ ಬಿಡಿಗಾಸು ನೀಡಿ ಸಾಕಷ್ಟು ಉಳಿತಾಯ ಮಾಡುತ್ತಿದೆ ಎಂಬ ಮನೋಭಾವನೆ ಬೆಳೆಸಿಕೊಂಡಿದೆ.

ಹಾಗಾದರೆ ಇಲಾಖೇತರ ನೌಕರರ ಮಾದರಿ ಇಲಾಖೇತರ ಪೋಸ್ಟ್‌ ಮಾಸ್ಟರ್‌ ಜನರಲ್‌, ಇಲಾಖೇತರ ಪೋಸ್ಟಲ್‌ ಡೈರಡಕ್ಟರ್‌ ಹುದ್ದೆ ಏಕೆ ಸೃಷ್ಟಿಸಬಾರದು? ಇಂತಹ ಕ್ರಮಗಳಿಂದ ಇಲಾಖೆಗೆ ಇನ್ನಷ್ಟು ಕೋಟಿ ರೂ. ಉಳಿತಾಯವಾಗುವ ಸಾಧ್ಯತೆಯಿಲ್ಲವೇ? ಅಂಚೆ ಇಲಾಖೆಯನ್ನೇ ಸಂಪೂರ್ಣ ಇಲಾಖೇತರ ಸಿಬಂದಿಯಾಗಿ ಪರಿವರ್ತಿಸಿದರೆ ಹೇಗೆ? ದೇಶದ ಎಲ್ಲ ಇಲಾಖೆಗಳಲ್ಲೂ ಇದೇ ಮಾದರಿ ಅನುಷ್ಠಾನವಾದರೆ ದೇಶ ಉದ್ಧಾರ ಸಾಧ್ಯವಿಲ್ಲವೇ? ಎಂದು ಇಲಾಖೇತರ ನೌಕರರು ನೋವಿನಿಂದಲೇ ಪ್ರಶ್ನಿಸುತ್ತಿದ್ದಾರೆ.

ಸದಾನಂದ ಆಲಂಕಾರು

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.