ಕಲಾವಿದರ ಕಲಾವೈಭವ ಪಸರಿಸೋಣ
Team Udayavani, Oct 25, 2018, 10:33 AM IST
ಕಲಾವಿದರ ಕೈಚಳಕದಿಂದ ಪ್ರಪಂಚದ ಸುಂದರತೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಸೌಂದರ್ಯಕ್ಕೊಂದು ಮೆರುಗು ನೀಡುವವರು, ಕಳೆದುಹೋದ ಘಟನೆಗಳನ್ನು ದಾಖಲಿಸಿ ಮರುಸೃಷ್ಟಿಸುವವರು ಕಲಾವಿದರು. ಕಲಾಕ್ಷೇತ್ರದಲ್ಲಿ ಪರಿಣತರಾಗಿರುವವರು ಹಲವಾರದರೆ ಅದನ್ನೇ ಜೀವನಕ್ಕೆ ಆಧಾರವಾಗಿಸಿಕೊಂಡವರು ಇನ್ನು ಕೆಲವರು. ಛಾಯಾ ಚಿತ್ರ, ಬರೆವಣಿಗೆ, ಸಂಗೀತ, ಶಿಲ್ಪಕಲೆ, ನಟನೆ, ನೃತ್ಯ, ಯಕ್ಷಗಾನ, ಚಿತ್ರಗಾರ ಹೀಗೆ ಹತ್ತು ಹಲವು. ಎಲ್ಲರ ಅಭಿರುಚಿ, ವೃತ್ತಿರಂಗ ವಿಭಿನ್ನ. ಹಾಗೆಯೇ ಹಾವ, ಭಾವ, ಅಭಿರುಚಿಗಳು ಪ್ರತ್ಯೇಕವಾಗಿರುತ್ತದೆ.
ಹಿನ್ನೆಲೆ
ಸಾವಿರಾರು ಕಲಾವಿದರಿದ್ದರೂ ಕೆಲವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ, ಇನ್ನು ಕೆಲವರು ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೀಮಿತರಾಗಿದ್ದಾರೆ. ಆದರೆ ಕಲಾವಿದರು ಎಲ್ಲಿದ್ದರು ಅವರ ಕಲಾಕಾರತೆಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಲೆಗೆ ಪ್ರೋತ್ಸಾಹ ನೀಡಲೆಂದೇ ಪ್ರತಿ ವರ್ಷ ಅ. 25ರಂದು ಅಂತಾರಾಷ್ಟ್ರೀಯ ಕಲಾವಿದರ ದಿನವನ್ನು ಆಚರಿಸಲಾಗುತ್ತದೆ.
2004ರಲ್ಲಿ ಇದನ್ನು ಕೆನಡಿಯನ್ ಪ್ರಖ್ಯಾತ ವರ್ಣಚಿತ್ರಕಾರ ಕ್ರಿಸ್ ಮ್ಯಾಕ್ಲ್ಯೂರ್ಅವರು ಇದನ್ನು ಪ್ರಾರಂಭಿಸಿದರು. ‘ರೋಮ್ಯಾಂಟಿಕ್ ರಿಯಾಲಿಸಮ್’ ಚಿತ್ರಕಲಾ ಶೈಲಿಯಲ್ಲಿ ಪರಿಣತಿ ಪಡೆದಿದ್ದ ಇವರ ವರ್ಣಚಿತ್ರಗಳು ರೋಮ್ಯಾಂಟಿಕ್ ವಾಸ್ತವವಾದಿ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತದೆ. ಜಗತ್ತಿನಲ್ಲಿ ಕಲೆಗೆ ಮನ್ನಣೆ ತರುವ ಉದ್ದೇಶದಿಂದ ಹಾಗೂ ಕಲಾವಿದರು ತಮ್ಮದೇ ವಿಶಿಷ್ಟ ನೋಟವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಈ ದಿನವನ್ನು ಆಚರಿಸಲು ಪ್ರಾರಂಭಿಸಿದರು.
ಅನಂತರ ಸಾಮಾಜಿಕ ಜಾಲತಾಣಗಳಲ್ಲಿ ಐಎಡಿ ((international artist day) ಎಂದು ಬ್ಲಾಗ್ ಸೃಷ್ಟಿಸಿ ಕಲಾವಿದರಿಗೆ ಸಹಾಯವಾಗುವ ರೀತಿಯಲ್ಲಿ ಚಿತ್ರಗಳನ್ನು ಪ್ರಕಟಿಸುತ್ತಾರೆ. ಐಎಡಿ ಎಂದೇ ಪ್ರಖ್ಯಾತಗೊಂಡ ಈ ಸಂಸ್ಥೆ ಪ್ರತಿ ವರ್ಷವೂ ವಿವಿಧ ರೀತಿಯ ಸ್ಪರ್ಧೆ ನಡೆಸಿ ಪ್ರಶಸ್ತಿಗಳನ್ನು ನೀಡುತ್ತಿದೆ.
ಕಲಾವಿದರ ಅಭಿರುಚಿಗೆ ಮನ್ನಣೆ
ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಲಾವಿದರ ವೈಯಕ್ತಿಕ ಅನುಭವ ಹಾಗೂ ಅಭಿರುಚಿಗೆ ಮನ್ನಣೆ ನೀಡುವ ಉದ್ದೇಶವನ್ನಿಟ್ಟುಕೊಂಡು ಕಲಾವಿದರ ದಿನವನ್ನು ಆಚರಿಸಲಾಗುತ್ತಿದೆ. ಮೂರು ದಿನಗಳ ಕಾಲ ಕೆನಡಾದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ಅನೇಕ ಕಲಾವಿದರು ಭಾಗವಹಿಸುತ್ತಾರೆ.
ಹೀಗೂ ಆಚರಿಸಬಹುದು
ಅನನ್ಯ ಪ್ರಕಾರದ ಕಲೆಗಳಿಗೆ ಅನುಗುಣವಾಗಿ ನೀವು ಮೆಚ್ಚಿರುವ ಕಲಾವಿದರನ್ನು ಬೆಂಬಲಿಸುವುದರಿಂದ ಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಒಬ್ಬ ಕಲಾವಿದ ನೂರಾರು ಕಲಾವಿದರನ್ನು ಸೃಷ್ಟಿಸಬಲ್ಲ ಅನ್ನುವ ಮಾತಿನಂತೆ ಹೆಚ್ಚಿನ ರೀತಿಯಲ್ಲಿ ಸ್ಥಳೀಯ ಕಲೆಗಳನ್ನು ಬೆಳೆಸುವುದು ಉತ್ತಮ. ಇದರಿಂದ ಕಲಾವಿದರನ್ನು ಬೆಳೆಸಿ ನಮ್ಮ ಕಲೆಯನ್ನು ಜಗದಗಲಕ್ಕೆ ಪಸರಿಸಿದಂತಾಗುತ್ತದೆ.
ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ