ಕೊರಗ ಸಮುದಾಯದ 15 ಜೋಡಿಗಳಿಗೆ ಕಂಕಣಭಾಗ್ಯ
Team Udayavani, Feb 11, 2019, 5:08 AM IST
ಕೋಡಿಕಲ್ : ಕೊರಗರ ಸಾಮೂಹಿಕ ವಿವಾಹ ಸಮಿತಿ ಅಶ್ರಯದಲ್ಲಿ ಮಹಾನಗರ ಪಾಲಿಕೆ ಸಹಕಾರದೊಂದಿಗೆ ಕೋಡಿಕಲ್ ಕುದ್ಮಲ್ ರಂಗರಾವ್ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಕೊರಗ ಸಮುದಾಯದ 15 ಯುವ ಜೋಡಿಗಳು ಸತಿಪತಿಗಳಾದರು.
ಮಾಜಿ ಸಚಿವ ಬಿ. ರಮಾನಾಥ ರೈ, ಮೇಯರ್ ಭಾಸ್ಕರ ಕೆ., ಮುಖ್ಯಸಚೇತಕ ಶಶಿಧರ ಹೆಗ್ಡೆ, ಮಂಗಳೂರು ತಹಶೀಲ್ದಾರ್, ಇತರ ಅಧಿಕಾರಿಗಳು ಸಾಕ್ಷಿಗಳಾದರು.
ಕೊರಗ ಸಾಮೂಹಿಕ ವಿವಾಹ ಸಮಿತಿಯು 4 ವರ್ಷಗಳಿಂದ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ದ.ಕ. ಜಿಲ್ಲೆಯಿಂದ 7, ಉಡುಪಿಯಿಂದ 7 ಮತ್ತು ಕಾಸರಗೋಡಿನ 1 ಸಹಿತ ಒಟ್ಟು 15 ಮಂದಿ ವಿವಾಹದಲ್ಲಿ ನೋಂದಣಿ ಮಾಡಿದ್ದರು. ವಧು- ವರರಿಗೆ ತಲಾ ಇಪ್ಪತ್ತು ಸಾವಿರ ರೂ. ವೆಚ್ಚದಲ್ಲಿ ತಾಳಿ, ಕರಿಮಣಿ, ಸೀರೆ, ಪಂಚೆ, ಪೇಟ ಸಹಿತ ವಿವಾಹಕ್ಕೆ ಬೇಕಾದ ಸೌಲಭ್ಯ ನೀಡಲಾಗಿತ್ತು. ಪಾಲಿಕೆ ವತಿಯಿಂದ ಪೆಂಡಾಲ್, ನೀರು, ಮೈಕ, ವಿದ್ಯುತ್ ಸಹಿತ ಮೂಲಸೌಕರ್ಯ ಒದಗಿಸಲಾಗಿತ್ತು.
ವಧುವರರಿಗೆ ಶುಭ ಹಾರೈಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಥ ರೈ, ಕೊರಗ ಸಮುದಾಯ ತುಳಿತಕ್ಕೊಳಗಾದ ಸಮುದಾಯವಾಗಿದೆ. ಸಚಿವನಾಗಿದ್ದಾಗ ಈ ಸಮುದಾಯ ಕೇಳದಿದ್ದರೂ ಮೂಲಸೌಲಭ್ಯ ಒದಗಿಸಲು ಮುತುವರ್ಜಿ ವಹಿಸಿದ್ದೆ. ಸಮಾಜದಲ್ಲಿ ಸಮಾನತೆಯಿಂದ ಜೀವಿಸಲು ಎಲ್ಲರಿಗೂ ಹಕ್ಕಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ಸಮಾಜದ ಮುಂಚೂಣಿಗೆ ಬರಲು ಸಹಕರಿಸಿ. ತಾರತಮ್ಯ ಹೋಗಲಾಡಿಸಲು ಪ್ರಬಲ ಹೋರಾಟದಿಂದ ಸಾಧ್ಯ ಎಂದು ಹೇಳಿದರು.
ಮುಖ್ಯಸಚೇತಕ ಶಶಿಧರ ಹೆಗ್ಡೆ ಮಾತನಾಡಿದರು. ಮೇಯರ್ ಭಾಸ್ಕರ್ ಕೆ., ಬಂಟರ ಯಾನೇ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಡಿಸಿಸಿ ಕಾರ್ಯದರ್ಶಿ ಮಮತಾಶೆಟ್ಟಿ, ಲ್ಯಾನ್ಸಿ ಪಿಂಟೋ ಶುಭ ಹಾರೈಸಿದರು. ವಿವಾಹ ಸಮಿತಿ ಸದಸ್ಯರು, ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ದುಂದುವೆಚ್ಚಕ್ಕೆ ವಿರೋಧ
ಸಮಿತಿಯ ಎಂ. ಸುಂದರ್ ಕಡಂದಲೆ ಮಾತನಾಡಿ, ನಾಲ್ಕು ವರ್ಷದಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸುತ್ತಾ ಬಂದಿದ್ದೇವೆ. ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವ ಅಣ್ಣಿ ಕೋಡಿಕಲ್ ಸಾಮೂಹಿಕ ವಿವಾಹವಾಗಿ ದುಂದುವೆಚ್ಚಕ್ಕೆ ವಿರೋಧ ವ್ಯಕ್ತಪಡಿದ್ದಾರೆ. ಪದವಿ ಪಡೆದವರೂ ಇದ್ದಾರೆ. ಕೊರಗ ಸಮುದಾಯದಲ್ಲಿ ಯಾವುದೇ ಮುಹೂರ್ತ ನೋಡುವ, ತಾಳಿ ಕಟ್ಟುವ ಸಂಪ್ರದಾಯವಿಲ್ಲ. ಆದರೆ ಕರಿಮಣಿ ಕಟ್ಟುವುದು ಎಂಬ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ನಮ್ಮ ಮದುವೆ ಐದು ದಿನಗಳ ಸಂಭ್ರಮದ್ದಾಗಿದೆ. ಆದರೆ ಅತೀ ಕಡಿಮೆ ವೆಚ್ಚದಲ್ಲಿ ಮಾಡುವ ಉದ್ದೇಶದಿಂದ 2 ದಿನಗಳ ಕಾರ್ಯ ಕ್ರಮ ಮಾಡಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ