ಸ್ಕೌಟ್ಸ್ಆ್ಯಂಡ್ಗೈಡ್ಸ್ ಶಿಬಿರಾನುಭವ ಜೀವನಕ್ಕೆ ಮಾರ್ಗದರ್ಶಿಯಾಗಲಿ
Team Udayavani, Jan 10, 2017, 3:20 AM IST
ಪೆರಡಾಲ: ಮಕ್ಕಳಿಗೆ ಶಾಲಾ ಜೀವನ ಎಂದಿಗೂ ಮರೆಯಲಾಗದ ಅನುಭವ ನೀಡುತ್ತಿದೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಶಾಲೆಯಲ್ಲಿ ಮತ್ತು ವಿಶೇಷ ಶಿಬಿರಗಳಲ್ಲಿ ಜೀವನಕ್ಕೆ ಮಾರ್ಗದರ್ಶಿ ಯಾಗುವ ಅನುಭವ ನೀಡುತ್ತದೆ. ನಾಲ್ಕು ದಿವಸಗಳ ಕಾಲ ಮನೆ ಬಿಟ್ಟು ಡೇರೆ ಯಲ್ಲಿ ನಡೆಸುವ ಜೀವನ, ಅನುಭವ ಹಂಚಿ ಕೊಳ್ಳುವ ಕ್ರಮಗಳು ಜೀವನಕ್ಕೆ ಮುಂದೆ ಉಪಯೋಗ ವಾಗುತ್ತವೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಶಿಬಿರಾನುಭವಗಳು ಜೀವನಕ್ಕೆ ಮಾರ್ಗದರ್ಶಿಯಾಗಲಿ ಎಂದು ಕಾಸರಗೋಡು ಕ್ಷೇತ್ರ ಶಾಸಕ ಎನ್.ಎ. ನೆಲ್ಲಿಕುನ್ನು ನುಡಿದರು. ಅವರು ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡ 4 ದಿಸಗಳ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರದ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ವಹಿಸಿದ್ದರು. ಅತಿಥಿಗಳಾಗಿ ಮಂಜೇಶ್ವ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಬ್ಲಾಕ್ ಪಂಚಾಯತ್ ಅಧ್ಯಕ್ಷ ವಾಮನ ರಾಮಚಂದ್ರದ್ ಮತ್ತು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಕಾಂತ್ ಉಪಸ್ಥಿತರಿದ್ದರು.
ಕಾಸರಗೋಡು ನಗರಸಭಾ ಸದಸ್ಯೆ ಸವಿತಾ, ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ವತ್ಸಲಾ, ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಝೆ„ಬುನ್ನೀಸಾ, ಅಭಿವೃದ್ಧಿ ಕ್ಷೇಮ ಸಮಿತಿ ಅಧ್ಯಕ್ಷರಾದ ಅನ್ವರ್ ಓಝೊàನ್, ಆರೋಗ್ಯ ಕ್ಷೇಮ ಸಮಿತಿ ಅಧ್ಯಕ್ಷರಾದ ಶ್ಯಾಮ ಪ್ರಸಾದ್ ಮಾನ್ಯ, ಸ್ಥಳೀಯ ವಾರ್ಡು ಸದಸ್ಯೆ ರಾಜೇಶ್ವರಿ, ಶಾಲಾರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಗನ್ನಾಥ ಆಳ್ವ, ಉಪಾಧ್ಯಕ್ಷ ಶಾಫಿ ಚೂರಿಪಳ್ಳ, ಮಾತೃ ಸಂಘದ ಅಧ್ಯಕ್ಷೆ ಸುರೇಖಾ ಮತ್ತು ಸಹ ಮುಖ್ಯೋಪಾಧ್ಯಾಯರಾದ ಶ್ಯಾಮಭಟ್ ಕೆ. ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಭಾರತ ಹಿಂದಿ ವಿಶಾರದಾ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ಗಳಿಸಿದ ಈ ಶಾಲೆಯ ವಿದ್ಯಾರ್ಥಿನಿ ಅನಘಾ ಬಿ. ನಾಯರ್ ಅವರನ್ನು ಸಮ್ಮಾನಿಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಭಟ್ ಕೆ.ಎನ್. ಸ್ವಾಗತಿದರು. ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ವಂದಿಸಿದರು. ಸ್ಕೌಟ್ಸ್ ಜಿಲ್ಲಾ ಕಮಿಷ‚ನರ್ ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.