ಕಡಬ ತಾಲೂಕು ಉದ್ಘಾಟನೆಗೆ ಎದುರಾಗುತ್ತಿದೆ ಹಲವು ವಿಘ್ನ!
Team Udayavani, Aug 25, 2018, 10:09 AM IST
ಕಡಬ: ನೂತನ ಕಡಬ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲು ದಿನ ನಿಗದಿಪಡಿಸಿದರೂ ಪದೇ ಪದೇ ವಿಘ್ನಗಳು ಎದುರಾಗಿ ಉದ್ಘಾಟನೆ ಸಮಾರಂಭ ರದ್ದಾಗುತ್ತಿರುವುದರಿಂದಾಗಿ ತಾಲೂಕು ಅನುಷ್ಠಾನದ ಕುರಿತು ಕಡಬ ಪ್ರದೇಶದ ಜನರ ಮನಸ್ಸಿನಲ್ಲಿ ಆತಂಕ ಮೂಡುವಂತಾಗಿದೆ.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಘೋಷಣೆಯಾಗಿದ್ದ ಕಡಬ ನೂತನ ತಾಲೂಕು ಬಳಿಕ ಅನುಷ್ಠಾನವಾಗದೇ ಇದ್ದುದರಿಂದ ಭ್ರಮನಿರಸನಗೊಂಡಿದ್ದ ಕಡಬದ ಜನತೆ ಬಳಿಕ ಸಿದ್ಧರಾಮಯ್ಯ ನೇತೃತ್ವದ ಸರಕಾರವೂ ಈ ಕುರಿತು ಗಮನಹರಿಸದೇ ಇದ್ದಾಗ ತೀವ್ರ ಅಸಮಾಧಾನಗೊಂಡಿದ್ದರು. ಆನಂತರ ಸಿದ್ಧರಾಮಯ್ಯ ಅವರು ಇತರ ನೂತನ ತಾಲೂಕುಗಳೊಂದಿಗೆ ಕಡಬ ತಾಲೂಕನ್ನು ಮತ್ತೆ ಘೋಷಣೆ ಮಾಡಿದಾಗಲೂ ಜನರಲ್ಲಿ ಹಿಂದಿನ ಉತ್ಸಾಹ ಕಂಡುಬಂದಿರಲಿಲ್ಲ.
ಮೂರು ಬಾರಿ ಮುಂದೂಡಿಕೆ
ಬೈಂದೂರು, ಬ್ರಹ್ಮಾವರ ಹಾಗೂ ಕಾಪು ತಾಲೂಕುಗಳ ಉದ್ಘಾಟನೆ ನಡೆದು ಕಡಬ ತಾಲೂಕು ಉದ್ಘಾಟನೆಯಾಗದೇ ಇದ್ದಾಗ ಕಡಬದ ಜನರಲ್ಲಿ ಆತಂಕ ಆರಂಭವಾಗಿತ್ತು. ಅದರೊಂದಿಗೆ ಬಳಿಕ 3 ಬಾರಿ ಕಡಬ ತಾಲೂಕು ಉದ್ಘಾಟನೆಗೆ ದಿನ ನಿಗದಿಯಾಗಿ ಮುಂದೂಡಲ್ಪಟ್ಟಿರುವುದು ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೀಘ್ರ ಕಡಬ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸುವ ಮೂಲಕ ಜನರ ಮನಸ್ಸಿನಲ್ಲಿರುವ ಭೀತಿಯನ್ನು ಹೋಗಲಾಡಿಸುವ ಅಗತ್ಯವಿದೆ.
ತಾಲೂಕು ರದ್ದಾಗಲು ಸಾಧ್ಯವೇ ಇಲ್ಲ
ಹೊಸ ತಾಲೂಕುಗಳ ಕುರಿತು ಸರಕಾರ ಅಧಿಸೂಚನೆ ಹೊರಡಿಸಿರುವುದರಿಂದಾಗಿ ಆತಂಕ ಪಡಬೇಕಾಗಿಲ್ಲ. ಅನ್ಯ ಕಾರಣಗಳಿಂದಾಗಿ ಉದ್ಘಾಟನೆ ಮುಂದೂಡಲ್ಪಟ್ಟಿದೆ. ಯಾವುದೇ ಕಾರಣಕ್ಕೂ ಕಡಬ ತಾಲೂಕು ರದ್ದಾಗಲು ಸಾಧ್ಯವಿಲ್ಲ. ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ತೆರೆಯುವುದರೊಂದಿಗೆ ಶೀಘ್ರ ಕಡಬ ತಾಲೂಕು ಉದ್ಘಾಟನೆಯಾಗಲಿದೆ.
– ಜಾನ್ಪ್ರಕಾಶ್ ರೋಡ್ರಿಗಸ್
ಕಡಬ ತಹಶೀಲ್ದಾರ್
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ