ಕೆಯ್ಯೂರಿನ ಕುಟುಂಬಕ್ಕೆ ಧನ ಸಹಾಯ, ವಿದ್ಯಾಭ್ಯಾಸಕ್ಕೆ ನೆರವು
Team Udayavani, Dec 20, 2018, 11:09 AM IST
ಕೆಯ್ಯೂರು: ಕೆಯ್ಯೂರು ಗ್ರಾಮದ ದಲಿತ ಕುಟುಂಬವೊಂದರ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದ ಸಂಕಷ್ಟದ ಜೀವನದ ಕುರಿತು ಬುಧವಾರ ‘ಉದಯವಾಣಿ’ ಸುದಿನದಲ್ಲಿ ‘ಹೆತ್ತವರಿಲ್ಲದ ನಾಲ್ವರು ಹೆಣ್ಣು ಮಕ್ಕಳಿಗೆ ಸೂರೂ ಇಲ್ಲ’ ಎನ್ನುವ ತಲೆಬರಹದಡಿಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದನೆ ದೊರೆತಿದ್ದು, ಆ ಕುಟುಂಬಕ್ಕೆ ಧನ ಸಹಾಯ, ವಿದ್ಯಾಭ್ಯಾಸಕ್ಕೆ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದಾರೆ.
10 ಸಾವಿರ ರೂ. ನೆರವು
ಹೆಸರು ತಿಳಿಸಲು ಇಚ್ಛಿಸದ ದಾನಿಯೊಬ್ಬರು ಪರಿಚಿತರ ಮೂಲಕ ಈ ಬಡ ಕುಟುಂಬಕ್ಕೆ 10 ಸಾವಿರ ರೂ. ಧನಸಹಾಯ ನೀಡಿದ್ದಾರೆ. ಜತೆಗೆ ಮನೆ ನಿರ್ಮಾಣಕ್ಕೆ ತನ್ನಿಂದಾದ ಸಹಕಾರವನ್ನೂ ನೀಡುವುದಾಗಿಯೂ ಅವರು ಭರವಸೆ ಇತ್ತಿದ್ದಾರೆ. 10 ಸಾವಿರ ರೂ. ನಗದನ್ನು ನಾಲ್ವರು ಹೆಣ್ಣುಮಕ್ಕಳ ಅಜ್ಜಿ ಭಾಗೀರಥಿ ಅವರಿಗೆ ಹಸ್ತಾಂತರಿ ಸಲಾಯಿತು. ಪದವಿ ವ್ಯಾಸಂಗ ಮಾಡುತ್ತಿರುವ ನೇತ್ರಾ ಅವರ ಒಂದು ವರ್ಷದ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಬೆಂಗಳೂರಿನ ವಿದ್ಯಾಮಾತಾ ಫೌಂಡೇಶನ್ ಅಧ್ಯಕ್ಷ ಭಾಗೇಶ್ ರೈ ತಿಳಿಸಿದ್ದಾರೆ. ವರದಿ ಗಮನಿಸಿದ ಅವರು, ವಾರದೊಳಗೆ ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ‘ಉದಯವಾಣಿ’ ಪ್ರತಿನಿಧಿಗೆ ತಿಳಿಸಿದ್ದಾರೆ.
ಪಿಂಚಣಿ ಬಂದರೆ ಊಟ
ಧನಸಹಾಯ ಸ್ವೀಕರಿಸಿದ ಬಳಿಕ ಭಾಗೀರಥಿ ಅವರು ಮಾತನಾಡಿ, ತನಗೆ ಪಿಂಚಣಿ ರೂಪದಲ್ಲಿ ತಿಂಗಳಿಗೆ 600 ರೂ. ಬರುತ್ತದೆ (ಈಗ ಅದು 1,000 ರೂ.ಗೆ ಹೆಚ್ಚಳವಾಗಿದೆ. ಅದಿನ್ನೂ ಕೈಸೇರಿಲ್ಲ). ಆ ಸಂದರ್ಭದಲ್ಲಿ ಅಂಗಡಿಯಿಂದ ಅಕ್ಕಿ ತಂದು ಮನೆಯಲ್ಲಿರುವ ನಾವು ಹೊಟ್ಟೆ ತುಂಬಾ ಊಟ ಮಾಡುತ್ತೇವೆ. ಉಳಿದ ದಿನ ಪಡಿತರ ಅಂಗಡಿಯ ಬಿಳಿ ಅಕ್ಕಿಯ ಊಟವನ್ನೇ ಮಾಡುತ್ತೇವೆ. ಈ ಧನ ಸಹಾಯದಿಂದ ಒಪ್ಪೊತ್ತಿನ ಊಟಕ್ಕೆ ಸಹಾಯ ಆಯಿತು ಎಂದವರು ಆನಂದ ಬಾಷ್ಪದೊಂದಿಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?