ರೆಂಜ-ಮುಡಿಪುನಡ್ಕ ರಸ್ತೆಯಲ್ಲಿ ಮಣ್ಣು: ಸಂಚಾರಕ್ಕೆ ಅಡ್ಡಿ
Team Udayavani, May 26, 2018, 11:24 AM IST
ನಿಡ್ಪಳ್ಳಿ : ರೆಂಜದಿಂದ ಮುಡಿಪುನಡ್ಕಕ್ಕೆ ತೆರಳುವ ಜಿಲ್ಲಾ ಪಂಚಾಯತ್ ರಸ್ತೆ ಮೇಲೆ ಮಳೆ ನೀರಿನೊಂದಿಗೆ ಮಣ್ಣು ಹರಿದು ಸಂಚಾರಕ್ಕೆ ಅಡಚಣೆಯಾಗಿದೆ. ಖಾಸಗಿ ಟೆಲಿಫೋನ್ ಸಂಸ್ಥೆಯವರು ಒಎಫ್ಸಿ ಕೇಬಲ್ ಅಳವಡಿಸಲು ನೀರು ಹೋಗುವ ಚರಂಡಿಯಲ್ಲಿ ಹೊಂಡ ತೆಗೆದ ಪರಿಣಾಮ ಚರಂಡಿ ಮುಚ್ಚಿ ಹೋಗಿದೆ. ಮಳೆ ಬಂದಾಗ ನೀರು ರಸ್ತೆ ಮೇಲೆ ಹರಿದು ಮಣ್ಣು ನೀರಿನೊಂದಿಗೆ ಬಂದು ರಸ್ತೆ ಕೆಸರುಮಯವಾಗುತ್ತಿದೆ.
ಇದರಿಂದ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ಅಡ್ಡಿಯಾಗುತ್ತಿದ್ದು, ರಸ್ತೆಯೂ ಹಾಳಾಗುತ್ತಿದೆ. ಮಳೆಗಾಲ ಆರಂಭಕ್ಕೆ ಮೊದಲು ಚರಂಡಿ ವ್ಯವಸ್ಥೆ ಮಾಡದಿದ್ದರೆ ರಸ್ತೆ ಇನ್ನಷ್ಟು ಹದಗೆಡಲಿದೆ. ಕಾರ್ಮಿಕರಲ್ಲಿ ವಿಚಾರಿಸಿದರೆ ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಉತ್ತರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ