ತೊಕ್ಕೊಟ್ಟು ಜಂಕ್ಷನ್: ಸಂಚಾರ ಅಸ್ತವ್ಯಸ್ತ
Team Udayavani, Jun 30, 2018, 10:49 AM IST
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ತೊಕ್ಕೊಟ್ಟು ಜಂಕ್ಷನ್ ಸಮಸ್ಯೆ ಇನ್ನಷ್ಟು ಜಟಿಲವಾಗಿದ್ದು, ಶುಕ್ರವಾರವೂ ಮಳೆ ನೀರು ರಸ್ತೆಯಲ್ಲೇ ಹರಿದು ಸಂಚಾರ ಅಸ್ತವ್ಯಸ್ತವಾಗಿದೆ. ತೊಕ್ಕೊಟ್ಟು ಜಂಕ್ಷನ್ನಲ್ಲಿ ಫ್ಲೈ ಓವರ್ ಕಾಮಗಾರಿ ಸಮಸ್ಯೆಯಿಂದ ಕಲ್ಲಾಪುವಿನಿಂದ ತೊಕ್ಕೊಟ್ಟು ಓವರ್ಬ್ರಿಡ್ಜ್ವರೆಗೆ ರಸ್ತೆಯು ಕೆಲವು ದಿನಗಳಿಂದ ಸುರಿದ ಮಳೆಗೆ ಹೊಂಡ ಬಿದ್ದು ಸಂಚಾರಕ್ಕೆ ತಡೆಯಾಗಿತ್ತು.
ನೀರಿನಲ್ಲಿ ಹೋಗುತ್ತಿದೆ ಜಲ್ಲಿಹುಡಿ
ತೊಕ್ಕೊಟ್ಟು ಜಂಕ್ಷನ್ನಲ್ಲಿ ಹೆದ್ದಾರಿ ಕಾಮಗಾರಿ ಮಾಡುವ ಸಂಸ್ಥೆಯ ಸಿಬಂದಿ ಜಲ್ಲಿ ಹುಡಿ ಹಾಕಿ ಹೊಂಡ ಮುಚ್ಚಿದರೆ ಸಂಜೆ ವೇಳೆಗೆ ಒಂದೇ ಮಳೆಗೆ ಜಲ್ಲಿಹುಡಿ ನೀರಿನಲ್ಲಿ ಹರಿದು ಹೊಂಡ ಪುನರ್ ನಿರ್ಮಾಣವಾಗುತ್ತಿದೆ.
ಪೊಲೀಸರು ಕಲ್ಲು ಹಾಕಿದರು
ಶುಕ್ರವಾರ ರಸ್ತೆಯ ಗುಂಡಿಯನ್ನು ಸ್ಥಳೀಯರು ಮತ್ತು ಸಂಚಾರಿ ಪೊಲೀಸರು ಕಲ್ಲುಗಳನ್ನು ಹಾಕುವ ಮೂಲಕ ಮುಚ್ಚಿದರು. ಬಳಿಕ ಹೆದ್ದಾರಿ ಕಾಮಗಾರಿ ನಡೆಸುವ ಕಾರ್ಮಿಕರು ಆಗಮಿಸಿ ಕೆಲವು ಗುಂಡಿಗಳಿಗೆ ಕಲ್ಲು ಹಾಕಿದರು.
ಸಂಚಾರ ವ್ಯತ್ಯಯ
ನಾಲ್ಕು ದಿನಗಳಿಂದ ಕಲ್ಲಾಪುವಿನಿಂದ ತೊಕ್ಕೊಟ್ಟು ಓವರ್ಬ್ರಿಡ್ಜ್ ವರೆಗೆ ವಾಹನಗಳು ಸರತಿಯಲ್ಲಿ ನಿಂತು ಸಂಚರಿಸುತ್ತಿದ್ದು ಒಂದು ಕಿ.ಮೀ. ವ್ಯಾಪ್ತಿ ಸಂಚರಿಸಲು ಅರ್ಧಗಂಟೆ ತಗಲುತ್ತಿದ್ದು, ಕೆಲವು ಬಸ್ಗಳು ಅರ್ಧದಲ್ಲೇ ಸಂಚಾರ ಮೊಟಕುಗೊಳಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!