ಉಳ್ಳಾಲ ಕ್ಷೇತ್ರಕ್ಕೆ ಮಂಗಳೂರು ಎಂಬ ನಾಮಕರಣ ! 


Team Udayavani, Apr 12, 2018, 2:12 PM IST

12-April-13.jpg

ಪುರಾಣ ಇತಿಹಾಸಗಳಿಂದ ಪ್ರಸಿದ್ಧವಾಗಿರುವ ಮಂಗಳೂರು (ಈ ಹಿಂದೆ ಉಳ್ಳಾಲ) ವಿಧಾನಸಭಾ ಕ್ಷೇತ್ರ ರಾಜಕೀಯ ರಂಗದಲ್ಲೂ ಸಾಕಷ್ಟು ಕುತೂಹಲ ಕೆರಳಿಸುತ್ತಿರುವ ಕ್ಷೇತ್ರ. ಈ ಬಾರಿ ಇಲ್ಲಿಂದ ಹಾಲಿ ಶಾಸಕ- ಸಚಿವ ಯು.ಟಿ. ಖಾದರ್‌ ಅವರು ಕಾಂಗ್ರೆಸ್‌ ನಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಗ್ಗೆ ಯಾವುದೇ ಸುಳಿವಿಲ್ಲ. ಜೆಡಿಎಸ್‌ ಸ್ಪರ್ಧಿಸಬಹುದು. ಎಸ್‌ಡಿಪಿಐ ನಡೆಯ ಬಗ್ಗೆ ಕುತೂಹಲವಿದೆ.

ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸಿಕೊಂಡಿರುವ ನಗರ ಉಳ್ಳಾಲ. 15ನೇ ಶತಮಾನದಲ್ಲಿ ಪೋರ್ಚುಗೀಸರ ಅಧೀನದಲ್ಲಿ ಈ ನಗರವಿತ್ತು. ಆದರೆ ಅವರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಉಳ್ಳಾಲ ರಾಣಿ ಅಬ್ಬಕ್ಕ ಸ್ವಾಭಿಮಾನ, ದೇಶ ಪ್ರೇಮದ ಮೂಲಕ ಅಜರಾಮರರಾದರು.

ದಕ್ಷಿಣ ಭಾರತ ಮತ್ತು ಉತ್ತರ ಭಾರತಕ್ಕೆ ಧಾರ್ಮಿಕ ಬೆಸುಗೆಯಾಗಿದ್ದ ಶ್ರೀ ಸೋಮನಾಥೇಶ್ವರ ದೇವಸ್ಥಾನ, ವಿಶಿಷ್ಟ ಪರಂಪರೆಯ ಹಜ್ರತ್‌ ಸಯ್ಯದ್‌ ಮೊಹಮ್ಮದ್‌ ಶರೀಫಲ್‌ ಮದನಿ ದರ್ಗಾ, ಚರ್ಚ್‌ಗಳು, ಅಬ್ಬಕ್ಕ ದೇವಿ ಆರಾಧಿಸುತ್ತಿದ್ದ ಬಸದಿ ಮುಂತಾದ ಧಾರ್ಮಿಕ ಕೇಂದ್ರಗಳು ಇಲ್ಲಿವೆ. ಮೋಹಕ ಕಡಲ ಕಿನಾರೆ ಇದೆ. ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವಾಗುವ ಅಪಾರ ಅವಕಾಶಗಳು ಇಲ್ಲಿವೆ. ಅಂತೆಯೇ ಕಡಲ್ಕೊರೆತ, ಅಳಿವೆ ಬಾಗಿಲಿನಲ್ಲಿ ತುಂಬುವ ಹೂಳು ಮುಂತಾದ ಸಮಸ್ಯೆಗಳೂ ಇವೆ.

ಈ ಹಿಂದಿನ 13 ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್‌ ಪಕ್ಷ 10 ಬಾರಿ; ಸಿಪಿಐ (1962), ಸಿಪಿಎಂ (1983), ಬಿಜೆಪಿ (1994) ತಲಾ ಒಂದು ಬಾರಿ ಜಯಿಸಿವೆ. ಎರಡೂ ಎಡಪಕ್ಷಗಳಿಗೆ ಕರಾವಳಿಯ ಈ ಪ್ರದೇಶದಿಂದ ಪ್ರಾತಿನಿಧ್ಯ ನೀಡಿದ ದಾಖಲೆ ಇದು. ಉಳಿದಂತೆ ಬಿಜೆಪಿಯೂ ಒಮ್ಮೆ ಜಯಿಸಿದೆ. ಇತರ ಗೆಲುವುಗಳು ಕಾಂಗ್ರೆಸ್‌ಗೆ ಲಭಿಸಿತು. 2009ರಲ್ಲಿ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆಯಾಯಿತು. ಕೆಲವು ಕ್ಷೇತ್ರಗಳು ವಿಸ್ತಾರಗೊಂಡರೆ ಇನ್ನು ಕೆಲವು ಭೌಗೋಳಿಕ ಗಾತ್ರದಲ್ಲಿ ಕುಗ್ಗಿದವು. ಮತದಾರರ ಸಂಖ್ಯೆಯ ಸಮೀಕರಣದ ಉದ್ದೇಶದಿಂದ ಈ ಪರಿವರ್ತನೆಯಾಯಿತು. ಕೆಲವು ಕ್ಷೇತ್ರಗಳಿಗೆ ಹೊಸದಾಗಿ ನಾಮಕರಣವೂ ಆಯಿತು! ಉಳ್ಳಾಲ ಕ್ಷೇತ್ರ ಮಂಗಳೂರು ಎಂಬುದಾಗಿಯೂ; ಮಂಗಳೂರು ಕ್ಷೇತ್ರ ಮಂಗಳೂರು ದಕ್ಷಿಣ ಎಂಬುದಾಗಿಯೂ ನಾಮಕರಣಗೊಂಡವು. ಈ ಸಂದರ್ಭದಲ್ಲಿ ವಿಟ್ಲ ವಿಧಾನಸಭಾ ಕ್ಷೇತ್ರವನ್ನು ಕೈ ಬಿಡಲಾಯಿತು. ಅಕ್ಕಪಕ್ಕದ ಕ್ಷೇತ್ರಗಳಿಗೆ ಈ ಕ್ಷೇತ್ರದ ಭೂಭಾಗ ಹಂಚಿ ಹೋಯಿತು.

ಅಂದ ಹಾಗೆ …
ಉಳ್ಳಾಲ (ಈಗ ಮಂಗಳೂರು) ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ತಂದೆ-ಮಗನ ವಿಶೇಷ ಪರಂಪರೆ ಇದೆ. ಇಲ್ಲಿ ಯು.ಟಿ. ಫರೀದ್‌ ಅವರು 1972, 1978, 1999 ಮತ್ತು 2004ರಲ್ಲಿ (ಒಟ್ಟು 4 ಬಾರಿ) ಗೆದ್ದವರು. ಅವರ ನಿಧನಾನಂತರ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಯು.ಟಿ. ಖಾದರ್‌ (2007) ಗೆದ್ದರು. ಆ ಬಳಿಕದ ಎರಡೂ ಚುನಾವಣೆಗಳಲ್ಲಿ- 2008 ಮತ್ತು 2013 (ಒಟ್ಟು 3 ಬಾರಿ) ಜಯಿಸಿದರು. ಪ್ರಸ್ತುತ ನಾಗರಿಕ ಪೂರೈಕೆ, ಆಹಾರ ಇಲಾಖೆಯ ಸಚಿವರಾಗಿದ್ದಾರೆ. ವಿಶೇಷವೆಂದರೆ, ಅವರಿಬ್ಬರೂ ಕಾನೂನು ಪದವೀಧರರು. ಯುವ ಕಾಂಗ್ರೆಸ್‌ನ ನಾಯಕರಾಗಿದ್ದವರು.

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

7-kmc-ramdas-pai-block

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್‌ ಎಂ.ಪೈ ಬ್ಲಾಕ್‌

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.