ಮನಸ್ಸು ಹೇಳಿದಂತೆ ಕುಣಿಯುವವರು ನಾವೆಲ್ಲ !


Team Udayavani, May 28, 2018, 4:28 PM IST

28-may-16.jpg

ಜೀವನ ಆಟವಿದ್ದಂತೆ. ಆಡಿಸುವಾತ ದೇವರು ಎನ್ನುತ್ತೇವೆ. ಆದರೆ ದೇವರು ಯಾರು, ಎಲ್ಲಿದ್ದಾನೆ, ಹೇಗೆ ಎಲ್ಲರ ಬದುಕನ್ನು ನಿರ್ಣಯಿಸುತ್ತಾನೆ? ಇಂತಹ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ನಿತ್ಯವೂ ಅಲೆದಾಡುತ್ತೇವೆ. ಆದರೆ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೊರ ಗೆಲ್ಲೂ ಸಿಗುವುದಿಲ್ಲ. ನಮ್ಮೊಳಗೆ ಇದೆ. ಅದನ್ನು ನಾವು ಹುಡುಕಬೇಕು.

ಹುಟ್ಟಿದ ಪ್ರತೀ ಮಗು ತನ್ನ ಜೀವನದ ಪಾಠವನ್ನು ಕಲಿಯುವುದು ಆಟವಾಡುವ ಮೂಲಕ. ಅದು ಆಟಿಕೆಗಳನ್ನು ಅರಸುತ್ತ ತೆ‌ವಳಲು ಪ್ರಾರಂಭಿಸಿ, ಅನಂತರ ನಿಧಾನವಾಗಿ ತಪ್ಪು ಹಜ್ಜೆಗಳನ್ನಿಡುತ್ತಾ ನಡೆಯಲು ಕಲಿಯುತ್ತದೆ. ಇದಕ್ಕೆ ಕಾರಣ ಕಾಣದ ದೇವರೋ ಅಥವಾ ಸುತ್ತಲಿನ ಪರಿಸರವಲ್ಲ, ಬದಲಾಗಿ ಅದರ ಮನಃ ಶಕ್ತಿ.

ಬದುಕಿನಲ್ಲಿ ಎಲ್ಲರೂ ಬಯಸುವುದು ಒಂದೇ. ಪ್ರತಿಯೊಂದು ಗೆಲುವು ತಮ್ಮದಾಗಬೇಕು. ಸೋಲುಗಳು ಎದುರಾದಾಗ ವಿಧಿಯನ್ನು ಹಳಿಯುತ್ತೇವೆ, ಗೆದ್ದಾಗ ನಮ್ಮ ಪರಿಶ್ರಮವೆಂದು ಬೀಗುತ್ತೇವೆ. ಆದರೆ ನಮ್ಮ ಪ್ರತಿ ಸೋಲು, ಗೆಲುವಿಗೆ ಮನಸ್ಸೇ ಕಾರಣ ಎಂಬುದನ್ನು ಮಾತ್ರ ಮರೆಯುತ್ತೇವೆ.

ಗೆಲುವು ನಮ್ಮದಾಗಲು ಸತತ ಪರಿಶ್ರಮ ಮಾಡಿದ್ದೇವೆ ಎಂದು ಹೇಳುತ್ತೇವೆ. ಆದರೆ ಸೋತವರು ಪರಿಶ್ರಮ ಪಡದೇ ಸೋತರೇ? ಮನಸ್ಸಿನಲ್ಲಿ ದೃಢ ನಿರ್ಧಾರವಿಲ್ಲದೇ ಹೋದರೆ ಗೆಲುವಿನ ಕೈಹಿಡಿಯುವುದು ಅಸಾಧ್ಯ. ಯಾವುದೇ ತಪ್ಪು ಅಥವಾ ಸರಿ ಯಾದ ಕೆಲಸ ಮಾಡಲಿ. ದೇವರು ಎಲ್ಲರನ್ನೂ ನೋಡುತ್ತಿರುತ್ತಾನೆ. ಅವನಿಚ್ಛೆಯಂತೆಯೇ ಎಲ್ಲ ನಡೆಯುತ್ತದೆ ಎನ್ನುತ್ತೇವೆ. ಆದರೆ ಇದು ನಿಜವಲ್ಲ. ನಮ್ಮ ಆತ್ಮಸಾಕ್ಷಿಗಿಂತ ದೊಡ್ಡ ದೇವರಿಲ್ಲ. ಮನಸ್ಸಿಗಿಂತ ದೊಡ್ಡ ಶಕ್ತಿ ಇಲ್ಲ.

ಯಾವುದೇ ಕೆಟ್ಟ ಕಾರ್ಯ ಮಾಡಲು ಹೋಗುವಾಗ ಪ್ರತಿ ಯೊಬ್ಬರ ಮನಸ್ಸು ಒಂದಲ್ಲ ಒಂದು ಬಾರಿ ಅಂಜುತ್ತದೆ. ನಾವು ಮಾಡುವುದು ತಪ್ಪು ಎನ್ನು ತ್ತದೆ. ಅದೇ ಸರಿ ಯಾದ ಅಥವಾ ಉತ್ತಮ ಕೆಲಸ ಮಾಡಲು ಹೋಗುವಾಗ ಯಾವುದೇ ಭಯ ನಮ್ಮನ್ನು ಕಾಡುವುದಿಲ್ಲ. ನಾವು ಮಾಡಿದ್ದು ಸರಿ ಎಂಬ ಹೆಮ್ಮೆ ಮನಸ್ಸಿನಲ್ಲಿ ಉಂಟಾಗುತ್ತದೆ.

ನಾವು ಆಡುವ ಮಾತು ಹೇಗೇ ಇರಲಿ. ಆದರೆ ಕೊನೆಯಲ್ಲಿ ಎಲ್ಲರೂ ಕೇಳುವುದು ಮನಸ್ಸಿನ ಮಾತನ್ನೇ. ಒಂದು ವೇಳೆ ಮನಸ್ಸಿನ ಮಾತಿಗೆ ವಿರುದ್ಧವಾಗಿ ಹೋದರೆ ನಮ್ಮೊಳಗೊಂದು ಅಸಮಾಧಾನ, ಅಸಹನೆ ಕಾಡಲಾರಂಭಿಸುತ್ತದೆ.

ಮನಸ್ಸಿನ ಒಂದು ದೃಢ ನಿಲುವು ನಮ್ಮ ಜೀವನವನ್ನು ಉನ್ನತಿ ಅಥವಾ ಅವನತಿಯತ್ತ  ಕೊಂಡೊಯ್ಯಬಲ್ಲದು. ಆದರೆ ಅದು ನಮ್ಮ ನಿರ್ಧಾರ ಮತ್ತು ನಾವು ಆಯ್ಕೆ ಮಾಡಿ ಕೊಳ್ಳುವ ದಾರಿಯ ಮೇಲಿರುತ್ತದೆ. ದೃಢನಿಲುವಿದ್ದರೆ ಮಾತ್ರ ನಾವು ನಿಶ್ಚಿತ ಗುರಿಯನ್ನು ತಲುಪಲು ಸಾಧ್ಯವಿದೆ. ಹೀಗಾಗಿ ಜೀವನದ ಪ್ರತೀ ಹೆಜ್ಜೆಯಲ್ಲಿಯೂ ನಮ್ಮೊಂದಿಗೆ ಇದ್ದು, ನಮಗೆ ಅರಿಯದಂತೆ ತನ್ನೆಲ್ಲ ಕೆಲಸವನ್ನು ಮುಗಿಸಿಕೊಡುವ ಮನಸ್ಸು ತಾನೇ ನಮ್ಮ ಜೀವನದ ನಿಜವಾದ ಆಟಗಾರ!

ಮೇಘಾ ಆರ್‌. ಸಾನಾಡಿ

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.