ಪಿಂಕ್‌ ಬಣ್ಣದಲ್ಲಿ ಅಲಂಕೃತಗೊಂಡಿದೆ ಮಹಿಳಾಸ್ನೇಹಿ ಮತಗಟ್ಟೆ


Team Udayavani, May 12, 2018, 11:57 AM IST

12-May-5.jpg

ಮಹಾನಗರ: ಮತದಾನ ಕೇಂದ್ರಕ್ಕೆ ಬನ್ನಿ ಎಂದು ಮಹಿಳೆಯರೇ ಸ್ವಾಗತ ಕೋರುವ ಚಿತ್ರಣವಿರುವ ತಿಳಿ ಪಿಂಕ್‌ ಬಣ್ಣದ ಪ್ರವೇಶದ್ವಾರ.. ಮತಗಟ್ಟೆಯ ಒಳ ಹೋಗುತ್ತಿದ್ದಂತೆ ಸುತ್ತಲೂ ಪಿಂಕ್‌ ಬಲೂನು, ಪಿಂಕ್‌ ಬಟ್ಟೆಯಿಂದ ಮಾಡಿದ ಅಲಂಕಾರ..ಮತದಾನದ ಸಿದ್ಧತೆಯಲ್ಲಿ ತೊಡಗಿರುವ ಮಹಿಳಾ ಅಧಿಕಾರಿಗಳು.

ಮೇ 12ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಿಳಾ ಸ್ನೇಹಿ ಮತದಾನ ಕೇಂದ್ರಗಳಿಗೆ ‘ಉದಯವಾಣಿ -ಸುದಿನ’ವು ಚುನಾವಣೆಯ ಮುನ್ನಾ ದಿನವಾದ ಶುಕ್ರವಾರ ಭೇಟಿ ನೀಡಿದಾಗ ಕಂಡು ಬಂದ ಒಟ್ಟು ಚಿತ್ರಣವಿದು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ದ ಕೆಲವು ಮತಗಟ್ಟೆಗಳನ್ನು ಸಂಪೂರ್ಣ ಮಹಿಳಾಸ್ನೇಹಿ ಮತಗಟ್ಟೆಯನ್ನಾಗಿ ರೂಪಿಸುವಂತೆ ಚುನಾವಣಾ ಆಯೋಗ ಸಲಹೆ ನೀಡಿತ್ತು. ಆಯೋಗದ ಸಲಹೆಯಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತವೂ ಸಿದ್ಧತೆ ನಡೆಸಿದ್ದು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಮತಗಟ್ಟೆಗಳನ್ನು ಮಹಿಳಾಸ್ನೇಹಿಯಾಗಿ ರೂಪಿಸಲಾಗಿದೆ. ಬಿಜೈ ಕಾಪಿಕಾಡ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ವ ಸಂತ ಅಲೋಶಿಯಸ್‌ ಹಿಪ್ರಾ ಶಾಲೆ, ಬಲ್ಮಠ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರೆಯಲಾದ ಮತಗಟ್ಟೆಗಳನ್ನು ಸಂಪೂರ್ಣ ಮಹಿಳಾ ಸ್ನೇಹಿಯಾಗಿ ಅಲಂಕರಿಸಲಾಗಿದೆ.

ಪಿಂಕ್‌ ಬಣ್ಣದ ಸ್ವಾಗತ
ಈ ಮೂರೂ ಮತಗಟ್ಟೆಗಳಿಗೆ ಬರುವ ಮತದಾರರನ್ನು ಸ್ವಾಗತಿಸಲು ಪ್ರವೇಶದ್ವಾರವನ್ನು ಪಿಂಕ್‌ ಬಣ್ಣದಲ್ಲಿ ಅಲಂಕರಿಸಲಾಗಿದೆ. ತಿಳಿ ಪಿಂಕ್‌ ಬಣ್ಣದ ಗುಲಾಬಿಯ ಚಿತ್ರ, ಮತದಾನದ ಹಕ್ಕಿನ ಬಗ್ಗೆ ಮಹಿಳೆಯರು ಅರಿವು ಮೂಡಿಸುತ್ತಿರುವ ಚಿತ್ರಣವನ್ನು ಈ ದ್ವಾರದಲ್ಲಿ ಬಿಂಬಿಸಲಾಗಿದೆ. ರಸ್ತೆ ಬದಿಯಲ್ಲಿ ದೊಡ್ಡದಾಗಿ ಈ ಪ್ರವೇಶದ್ವಾರವನ್ನು ಅಲಂಕರಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.

ಬಲೂನು ಅಲಂಕಾರ
ಮಹಿಳಾಸ್ನೇಹಿ ಮತಗಟ್ಟೆಯ ಒಳಗಡೆ ಸುತ್ತಲೂ ತಿಳಿ ಪಿಂಕ್‌ ಬಣ್ಣದ ಅಲಂಕಾರಿಕ ಬಟ್ಟೆ ಮತ್ತು ತಿಳಿ ಪಿಂಕ್‌ ಬಣ್ಣದ ಬಲೂನಿನಿಂದ ಅಲಂಕರಿಸಲಾಗಿದೆ. ಇವಿಎಂ ಮೆಶಿನ್‌ ಇಟ್ಟಿರುವ ಟೇಬಲ್‌, ಅಧಿಕಾರಿಗಳು ಕುಳಿತುಕೊಳ್ಳುವ ಚಯರ್‌ ಮತ್ತು ಟೇಬಲ್‌ಗ‌ಳನ್ನೂ ಪಿಂಕ್‌ ಬಣ್ಣದಿಂದ ಶೃಂಗರಿಸಲಾಗಿದೆ.

ಪ್ರಥಮ ಪ್ರಯತ್ನ
ಪಿಂಕ್‌ ಬಣ್ಣವು ಮಹಿಳಾ ಸಶಕ್ತೀಕರಣದ ಸಂಕೇತ ವಾಗಿದ್ದು, ಮಹಿಳಾಪ್ರಿಯ ಬಣ್ಣವೂ ಹೌದು. ಈ ಮತಗಟ್ಟೆಯಲ್ಲಿ ಭದ್ರತಾ ಸಿಬಂದಿ, ಪೊಲೀಸರು ಸಹಿತ ಎಲ್ಲ ಸಿಬಂದಿ ಮಹಿಳೆಯರೇ ಆಗಿರುತ್ತಾರೆ. ಮಹಿಳೆ ಯರನ್ನು ಮತದಾನಕ್ಕೆ ಸೆಳೆಯಲೆಂದು ಅವರಿಷ್ಟದ ಪಿಂಕ್‌ ಬಣ್ಣದಲ್ಲಿ ಮತಗಟ್ಟೆಗಳನ್ನು ಅಲಂಕರಿಸಿ ಅದಕ್ಕೆ ‘ಮಹಿಳಾಸ್ನೇಹಿ’ ಮತಗಟ್ಟೆ ಎಂದು ಹೆಸರಿಟ್ಟಿರುವುದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಇದು ಮೊದಲು.

ಉರ್ವ ಸೈಂಟ್‌ ಅಲೋಶಿಯಸ್‌ ಶಾಲೆಯ ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿ ಕಿರಣ್‌ ಹೇಳುವ ಪ್ರಕಾರ, ಪಿಂಕ್‌ ಬಣ್ಣದಲ್ಲಿ ಮತಗಟ್ಟೆಯನ್ನು ಅಲಂಕಾರ ಮಾಡಿರುವುದು ಮಹಿಳಾಸ್ನೇಹಿ ವಾತಾವರ ಣವನ್ನು ಕಲ್ಪಿಸುತ್ತದೆ. ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ.

ಪಿಂಕ್‌ ಸೀರೆಯಲ್ಲಿ ಮಹಿಳಾ ಅಧಿಕಾರಿಗಳು
ಪಿಂಕ್‌ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ ಸಹಿತ ಆರು ಮಂದಿ ಅಧಿಕಾರಿಗಳೂ ಮಹಿಳೆಯರೇ ಆಗಿರುತ್ತಾರೆ. ಈ ಎಲ್ಲ ಅಧಿಕಾರಿಗಳು ಪಿಂಕ್‌ ಬಣ್ಣದ ಸೀರೆ ಉಟ್ಟು ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಿಜೈ ಕಾಪಿಕಾಡ್‌ ಸ.ಹಿ.ಪ್ರಾ. ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಶುಕ್ರವಾರವೇ ಮಹಿಳಾ ಅಧಿಕಾರಿಗಳು ಪಿಂಕ್‌ ಬಣ್ಣದ ಸೀರೆ ಧರಿಸಿ ಬಂದಿದ್ದರು. ‘ಮೊದಲ ಬಾರಿಗೆ ಚುನಾವಣಾ ಆಯೋಗವು ಮತದಾನ ಕೇಂದ್ರಗಳನ್ನು ಮಹಿಳಾಸ್ನೇಹಿಯಾಗಿಸಿದೆ. ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳತ್ತ ಸೆಳೆಯಲು ಇದೊಂದು ಅತ್ಯುತ್ತಮ ವಿಧಾನ. ನಮಗೂ ಉತ್ಸಾಹದಿಂದ ಕೆಲಸ ಮಾಡಲು ಪಿಂಕ್‌ ಮತಗಟ್ಟೆಗಳು ಸ್ಫೂರ್ತಿ ನೀಡುತ್ತಿದೆ’ ಎನ್ನುತ್ತಾರೆ ಬಿಜೈ ಕಾಪಿಕಾಡ್‌ ಹಿ.ಪ್ರಾ. ಶಾಲೆಯಲ್ಲಿರುವ ಮತಗಟ್ಟೆಯ ಅಧಿಕಾರಿ ಕೆ. ಪುಷ್ಪಾ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.