ಕೋಲಾರದಲ್ಲಿ ಸಂಕ್ರಾಂತಿ ಸಂಭ್ರಮ; ಕಾರ್ಗಿಲ್‌ ವೀರರಿಗೆ ಸನ್ಮಾನ


Team Udayavani, Jan 21, 2017, 3:00 PM IST

Murali-Krishna-Uttarayana.jpg

ಕೋಲಾರ: ನಗರದ ಕ್ರೀಡಾ ಅಭಿವೃದ್ಧಿ ಅಕಾಡೆಮಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಾಂತಿ ಅಂಗವಾಗಿ ನಡೆಸಿದ ನಗೆಹಬ್ಬದ ವೇಳೆ ಕಾರ್ಗಿಲ್‌ ಯೋಧರು, ಜಿಲ್ಲೆಯ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಕ್ರೀಡಾ ಸಾಧಕರನ್ನು ಶಾಸಕ ಆರ್‌.ವರ್ತೂರು ಪ್ರಕಾಶ್‌ ಸನ್ಮಾನಿಸಿದರು.

ಕೋಲಾರ ಜಿಲ್ಲಾ ಕ್ರೀಡಾ ಅಭಿವೃದ್ಧಿ ಅಕಾಡೆಮಿ ವತಿಯಿಂದ ನಗರದ ಮಿನಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಗಿಲ್‌ ವಿಜಯಕ್ಕೆ ಕಾರಣರಾದ ಹವಾಲ್ದಾರ್‌ ಟಿ.ಯು.ಜನಾದ‌ìನ್‌, ಹವಾಲ್ದಾರ್‌ ಸಿ.ಎಂ.ನಾರಾಯಣಸ್ವಾಮಿ, ಎಲ್‌.ನಾಯಕ್‌ ಆಂಜನೇಯಬಾಬು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್‌, ಕೋಲಾರದ ಜನತೆಗೆ ಸಂಕ್ರಾಂತಿಯ ಶುಭಾಶಯಗಳನ್ನು ಕೋರಿ, ಜಿಲ್ಲೆಗೆ ಒಳ್ಳೆಯ ಮಳೆ- ಬೆಳೆಯಾಗಲಿ ಎಂದು ಹಾರೈಸಿದರು. ಕನ್ನಡಸೇನೆ ರಾಜಾಧ್ಯಕ್ಷ ಕುಮಾರ್‌, ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಳ್ಳಬೇಕು ಎಂದರು. ಫೆ.18ರಂದು ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ಜನತೆಯನ್ನು ಕೋರಿದರು.

ಹಾಸ್ಯ ಕಲಾವಿದ ಪ್ರಾಣೇಶ್‌ ಮಾತನಾಡಿ, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿರುವ ನಗು ನೋವನ್ನು ಮರೆಸಿ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಇಂದಿನ ಒತ್ತಡದ ಜೀವನದಿಂದಾಗಿ ಪರಸ್ಪರ ಬಾಂಧವ್ಯ ದೂರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಗೆಹಬ್ಬಗಳು ಹೆಚ್ಚು ಹೆಚ್ಚಾಗಿ ಮೂಡಿ ಬರಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾದ ಯೋಗೇಶ್‌, ಭರತನಾಟ್ಯ ಕಲಾವಿದ ಮಾಲೂರಿನ ಜೆಎಸ್‌ಎಸ್‌ ಶಾಲೆಯ ಕನ್ನಡ ಪೂರ್ಣಶ್ರೀ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಸ್‌.ಅಮೃತಾ, ಸಾಯಿ ನಾಗೇಂದ್ರ, ಜೆ.ವರ್ಷಿತಾ, ಸ್ವಾತಿ, ನಿತಿನ್‌ ಯಾದವ್‌ ಅವರನ್ನು ಸನ್ಮಾನಿಸಲಾಯಿತು.

ಹಾಸ್ಯ ಕಲಾವಿದರಾದ ನರಸಿಂಹಜೋಷಿ, ಬಸವರಾಜ್‌ ಮಹಾಮನಿ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ತಮ್ಮ ಸಾಹಿತ್ಯ ಹಾಗೂ ಹಾಸ್ಯದ ಮಿಶ್ರಣದೊಂದಿಗೆ ನೆರೆದಿದ್ದ ಪ್ರೇಕ್ಷಕರಿಗೆ ಉಣಬಡಿಸಿದರು. ಪ್ರಾಣೇಶ್‌, ನರಸಿಂಹಜೋಷಿ, ಮಹಾಮನಿ ಅವರ ನವಿರಾದ ಹಾಸ್ಯ ಚಟಾಕಿಗಳು ಜನತೆಯನ್ನು ಸಂತಸದಲ್ಲಿ ತೇಲಿಸಿದವು.

ಕೋಚಿಮುಲ್‌ ನಿರ್ದೇಶಕ ಕೆ.ವೈ.ನಂಜೇಗೌಡ,  ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್‌.ಗಣೇಶ್‌, ನಗರಸಭೆ ಸದಸ್ಯರಾದ ಪ್ರಸಾದ್‌ ಬಾಬು, ಮುರಳೀಗೌಡ, ಸೋಮಶೇಖರ್‌, ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಬಿಜೆಪಿ ರಾಜ್ಯ ಯುವ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಎಪಿಎಂಸಿ ನಿರ್ದೇಶಕ ದೇವರಾಜ್‌ ಇದ್ದರು. ಕುರುಬರಪೇಟೆ ವೆಂಕಟೇಶ್‌ ಸ್ವಾಗತಿಸಿದರೆ, ಶಿವಕುಮಾರ್‌ ನಿರೂಪಿಸಿದರು.

ಟಾಪ್ ನ್ಯೂಸ್

M K Stalin: ತಮಿಳುನಾಡಲ್ಲಿ ಗೂಗಲ್‌ ಪಿಕ್ಸೆಲ್‌ ಫೋನ್‌ ತಯಾರಿಕೆ ಆರಂಭ: ಸ್ಟಾಲಿನ್‌

M K Stalin: ತಮಿಳುನಾಡಲ್ಲಿ ಗೂಗಲ್‌ ಪಿಕ್ಸೆಲ್‌ ಫೋನ್‌ ತಯಾರಿಕೆ ಆರಂಭ: ಸ್ಟಾಲಿನ್‌

1–asdasddasd

Mangaluru: ಪೊಲೀಸರ ಬಲೆಗೆ ಬಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರು

1-sdasdsdasdasdas

College ದಿನಗಳ ಪ್ರೇಮ ಕಹಾನಿ ನೆನಪಿಸಿಕೊಂಡ ಸಿಎಂ ಸಿದ್ದರಾಮಯ್ಯ !

Congress: 5 ಬಂಡಾಯ ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಉಚ್ಚಾಟನೆ

Congress: 5 ಬಂಡಾಯ ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಉಚ್ಚಾಟನೆ

1-fdsfssdf

Belagavi; ಗುಂಪುಗಳ ಘರ್ಷಣೆ: ಮಾರಾಮಾರಿ-ಕಲ್ಲು ತೂರಾಟ

12

ಪ್ರಜ್ವಲ್‌ನನ್ನು ವಿದೇಶಕ್ಕೆ ಕಳಿಸಿದ್ದೇ ದೇವೇಗೌಡರು: ಸಿದ್ದು ಆರೋಪ

1-rrewrwe

Punjab ಡ್ರಗ್ಸ್ ದಂಧೆ ಜೋರಾಗಿದೆ : ಆಪ್, ಕಾಂಗ್ರೆಸ್ ವಿರುದ್ಧ ಪ್ರಧಾನಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sadananda Gowda ಭಾಗ್ಯಗಳ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

Sadananda Gowda ಭಾಗ್ಯಗಳ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Mangalore: ಮಟ್ಕಾ ಜೂಜು; ಇಬ್ಬರು ವಶಕ್ಕೆ

Mangalore: ಮಟ್ಕಾ ಜೂಜು; ಇಬ್ಬರು ವಶಕ್ಕೆ

M K Stalin: ತಮಿಳುನಾಡಲ್ಲಿ ಗೂಗಲ್‌ ಪಿಕ್ಸೆಲ್‌ ಫೋನ್‌ ತಯಾರಿಕೆ ಆರಂಭ: ಸ್ಟಾಲಿನ್‌

M K Stalin: ತಮಿಳುನಾಡಲ್ಲಿ ಗೂಗಲ್‌ ಪಿಕ್ಸೆಲ್‌ ಫೋನ್‌ ತಯಾರಿಕೆ ಆರಂಭ: ಸ್ಟಾಲಿನ್‌

1–asdasddasd

Mangaluru: ಪೊಲೀಸರ ಬಲೆಗೆ ಬಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರು

belooru

Sagara: ಶಾಸಕ ಬೇಳೂರು ತೇಜೋವಧೆ; ಪೊಲೀಸರಿಗೆ ದೂರು

1-sdasdsdasdasdas

College ದಿನಗಳ ಪ್ರೇಮ ಕಹಾನಿ ನೆನಪಿಸಿಕೊಂಡ ಸಿಎಂ ಸಿದ್ದರಾಮಯ್ಯ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.