ನಕಲಿ ವದಂತಿಗೆ 10 ರೂ. ನಾಣ್ಯ ಚಲಾವಣೆ ಸ್ಥಗಿತ
Team Udayavani, Jan 27, 2017, 3:45 AM IST
ಬಂಗಾರಪೇಟೆ (ಕೋಲಾರ): ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ 10 ರೂಪಾಯಿಯ ನಕಲಿ ನಾಣ್ಯ ಚಲಾವಣೆಗೆ ಬಂದಿವೆ ಎಂದ ವದಂತಿಗೆ ಹೆದರಿ ಜನರು 10 ರೂ. ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ.
ತಮಿಳುನಾಡು ಗಡಿಯಲ್ಲಿ ಅಕ್ಕಸಾಲಿಗರು ನಕಲಿ ನಾಣ್ಯಗಳನ್ನು ಟಂಕಿಸುತ್ತಿದ್ದು, ಈಗಾಗಲೇ ಆಂಧ್ರಪ್ರದೇಶದಲ್ಲಿ 10 ರೂ. ನಾಣ್ಯಗಳನ್ನು ರದ್ದುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ 10 ರೂ. ನಾಣ್ಯಗಳನ್ನು ಹಿಂಪಡೆಯಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದರಿಂದ ಆಂಧ್ರಪ್ರದೇಶ ಗಡಿಯ ಕುಪ್ಪಂ ಮತ್ತು ತಮಿಳುನಾಡು ಗಡಿಯ ವೇಪನಪಲ್ಲಿ ಹಾಗೂ ತೊಪ್ಪನಹಳ್ಳಿ, ಮುಷ್ಟ್ರಹಳ್ಳಿ, ದೋಣಿಮಡಗು ಗ್ರಾಮಗಳಲ್ಲಿ ಯಾರೊಬ್ಬರೂ 10.ರೂ ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಇಲ್ಲಿ ಈ ನಾಣ್ಯ ತಾನಾಗಿಯೇ ಸ್ಥಗಿತವಾಗಿದೆ.
ಬ್ಯಾಂಕಿನತ್ತ ಜನ!
ದೇಶದಲ್ಲಿ 500 ಹಾಗೂ 1000 ಮುಖಬೆಲೆಯ ನೋಟುಗಳು ಅಮಾನ್ಯಗೊಂಡ ನಂತರ ಚಿಲ್ಲರೆ ಸಮಸ್ಯೆ ನೀಗಿಸಲು 10 ರೂ. ನಾಣ್ಯಗಳನ್ನು ಬ್ಯಾಂಕುಗಳು ಜನರಿಗೆ ನೀಡಿದ್ದವು. ವದಂತಿಗಳಿಂದ ಜನರು ನಾಣ್ಯಗಳನ್ನು ಮತ್ತೆ ಬ್ಯಾಂಕಿಗೆ ಹಿಂದಿರುಗಿಸಲು ಜಮಾಯಿಸಿದ್ದಾರೆ. ಸಿಬ್ಬಂದಿ ಎಷ್ಟೇ ಹೇಳಿದರೂ ಜನ ನಂಬದೆ ಜಮಾ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap; ಕೆಎಸ್ಆರ್ಟಿಸಿ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು
ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ: ಭಾವುಕ ಕ್ಷಣದ ವಿಡಿಯೋ ವೈರಲ್
ಸಂಬಂಧದ ಸುತ್ತ ರಾಖಾ; ಮಳವಳ್ಳಿ ಸಾಯಿಕೃಷ್ಣ ನಿರ್ದೇಶನ
Siruguppa: ಸಾರ್ವಜನಿಕ ಗ್ರಂಥಾಲಯದಲ್ಲಿ ಶೌಚಕ್ಕಾಗಿ ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿನಿಯರು
ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.