ನಾಳೆ ರೈತ ಜಾಗೃತ ಸಮಾವೇಶ
Team Udayavani, Dec 23, 2019, 1:23 PM IST
ಕನಕಗಿರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತ ಜಾಗೃತ ಸಮಾವೇಶ ಮತ್ತು ರೈತ ದಿನಾಚರಣೆ ಮಾಡಲಾಗುವುದು ಎಂದು ತಾಲೂಕು ಘಟಕದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೆ. ಗಣೇಶ ರೆಡ್ಡಿ ಹೇಳಿದರು.
ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಬೃಹತ್ ಪ್ರಮಾಣದ ರೈತ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಕೋಡಿಹಳ್ಳಿ, ರಾಜ್ಯ ಕಾರ್ಯದರ್ಶಿಗಳಾದ ಶಿವಪ್ಪ ಅಂಬಣ್ಣಿ, ಮಾಲುತೇಶ ಪೂಜಾರ, ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ರಾಮದುರ್ಗಾ, ನಜೀರಸಾಬ್ ಮೂಲಿಮನಿ ಸೇರಿದಂತೆ ವಿವಿಧ ರೈತ ನಾಯಕರು ಭಾಗವಹಿಸಲಿದ್ದಾರೆ. ಡಿ. 24ರಂದು ಬೆಳಗ್ಗೆ ಪಟ್ಟಣದ ಮೇಲುಗಡೆ ಅಗಸಿಯಿಂದ ಪ್ರಾರಂಭವಾಗುವ ಎತ್ತಿನ ಬಂಡಿಗಳ ಮೆರವಣಿಗೆ ರಾಜಬೀದಿಯ ಮೂಲಕ ಕನಕಾಚಲಪತಿ ವೇದಿಕೆ ತಲುಪಲಿದೆ. ವೇದಿಕೆಯಲ್ಲಿ ಕೃಷ್ಣಾ ಬಿಸ್ಕಿಂ, ಸಮನಾಂತರ ಜಲಾಶಯ, ಖರೀದಿ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಕಚೇರಿಗಳ ಪ್ರಾರಂಭ, ವಾರದ ಸಂತೆ ಮಾರುಕಟ್ಟೆ ಸ್ಥಳ ನಿಗದಿ ಪಡಿಸುವುದು, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ರೈತರ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಸುತ್ತಮುತ್ತ ಹೋಬಳಿಯಿಂದ 5 ಸಾವಿರಕ್ಕೂ ಅ ಧಿಕ ರೈತರು ಹಾಗೂ ರೈತ ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ರೈತ ಮುಖಂಡರಾದ ಉಮಾಕಾಂತ ದೇಸಾಯಿ, ಸಗರಪ್ಪ ಗಂಗಾಮತ, ಗಿರೀಶ ದೇವರೆಡ್ಡಿ, ಗೋಪಾಲಕೃಷ್ಣ, ಅಂಬಣ್ಣ ಮಹಿಪತಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: 3 ಲಕ್ಷ ರೂ.ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಅಧಿಕಾರಿ
Kustagi: ವೀರಸಾವರ್ಕರ್ ಬಗ್ಗೆ ಅವಹೇಳನಕಾರಿ ಬರಹ: ಪ್ರಕರಣ ದಾಖಲು
ಈ ಬಾರಿ ಡಿಗ್ರಿ ಕೋರ್ಸ್ ಪ್ರವೇಶ ಆಫ್ ಲೈನಾ ಅಥವಾ ಆನ್ ಲೈನಾ? ಗೊಂದಲದಲ್ಲಿ ವಿದ್ಯಾರ್ಥಿಗಳು
2015 ರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣ: ಅಪರಾಧಿಗೆ 6 ವರ್ಷ ಜೈಲು, 15 ಸಾವಿರ ದಂಡ
Koppala; ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಮಗು ಸಾವು; ಸಂಬಂಧಿಕರ ಆಕ್ರೋಶ