ಮಗನ ಕಿರಿಕಿರಿಗೆ ಬೇಸತ್ತು ಕೊಲೆಗೈದ ಕುಟುಂಬ
Team Udayavani, Jan 22, 2022, 1:44 PM IST
ಸಿರವಾರ: ನಿತ್ಯ ಕುಡಿದು ಮನೆಯಲ್ಲಿ ದುಡ್ಡಿಗಾಗಿ ಜಗಳವಾಡುತ್ತಿದ್ದಕ್ಕೆ ಬೇಸತ್ತ ತಾಯಿಯೇ ಕುಟುಂಬಸ್ಥರೊಂದಿಗೆ ಜೊತೆಗೂಡಿ ಮಗನನ್ನು ಕೊಲೆಗೈದ ಘಟನೆ ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಪಟ್ಟಣದ ಜೆ.ಅಮರೇಶ (45) ಎಂಬುವವರು ಕೊಲೆಯಾಗಿದ್ದು, ಕೊಲೆಗೆ ಕಾರಣರಾದವರು ಸ್ವತಃ ತಾಯಿ, ಅಕ್ಕ ಹಾಗೂ ಅಳಿಯ ಎಂಬುವುದು ತಿಳಿದು ಬಂದಿದೆ.
ಪಟ್ಟಣದ ಖಾಸಗಿ ಬ್ಯಾಂಕ್ ನಲ್ಲಿ ಪಿಗ್ಮಿ ಏಜೆಂಟಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮರೇಶನು ನಿತ್ಯದಂತೆ ಹೊರಗಡೆ ಓಡಾಡಿ ಸಾಯಂಕಾಲ ಮನೆಗೆ ವಾಪಸ್ಸಾಗಿದ್ದಾನೆ. ಪತ್ನಿ ಹಬ್ಬಕ್ಕೆ ತವರು ಮನೆಗೆ ತೆರಳಿದ್ದಳು. ರಾತ್ರಿ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ತಾಯಿ ಲಕ್ಷ್ಮೀದೇವಿ, ಅಕ್ಕ ನಿರ್ಮಲಾ ಹಾಗೂ ಅಳಿಯ ಸಂತೋಷ ಸೇರಿ ಕೊಲೆಗೈದಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ವೆಂಕಟಪ್ಪ ನಾಯಕ, ಮಾನ್ವಿ ಸಿಪಿಐ ಮಹಾದೇವ ಪಂಚಮುಖೀ, ಸಿರವಾರ ಪಿಎಸ್ಐ ಗುರುರಾಜ ಕಟ್ಟಿಮನಿ, ಪಿಎಸ್ಐ ಗೀತಾಂಜಲಿ ಶಿಂಧೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಯಿಯಿಂದಲೆ ಕೊಲೆ?
ಮಗನಿಗೆ ಬುದ್ಧಿ ಹೇಳಿ ಬೇಸತ್ತ ತಾಯಿಯೇ ಮಗನ ಕೊಲೆಗೆ ಮುಂದಾಗಿರುವುದು ಅಚ್ಚರಿಯಾಗಿದೆ. ಆದರೆ ಕೊಲೆಗೆ ಮತ್ತೇನಾದರೂ ಕಾರಣಗಳಿರಬಹುದೇ ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…