ವಕ್ಫ್ ಆಸ್ತಿ ಕಬಳಿಕೆ ತಡೆಯಲು ಮನವಿ
ವಕ್ಫ್ ಆಸ್ತಿ ಯನ್ನು ಕೊಳ್ಳೆ ಹೊಡೆಯಲು ನೋಂದಣಾಕಾರಿಗಳ ಹುನ್ನಾರ
Team Udayavani, Sep 30, 2021, 4:12 PM IST
ರಾಯಚೂರು: ಬಹುಮೌಲ್ಯದ ವಕ್ಫ್ ಆಸ್ತಿ ಯನ್ನು ಕೊಳ್ಳೆ ಹೊಡೆಯಲು ನೋಂದಣಾಕಾರಿಗಳೇ ಹುನ್ನಾರ ನಡೆಸಿದ್ದು, ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಆಸ್ತಿ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ದಿ ಲಿಜೆಂಡ್ ಟಿಪ್ಪು ಸುಲ್ತಾನ್ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂಘದ ಸದಸ್ಯರು, ಜಿಲ್ಲಾ ನೋಂದಣಾಧಿಕಾರಿ ಹಾಗೂ ಉಪ ನೋಂದಣಾಧಿಕಾರಿ ಸೇರಿ ವಕ್ಫ್ ಆಸ್ತಿ ಮಾರಲು ಹುನ್ನಾರ ನಡೆಸಿದ್ದಾರೆ. ತಾಲೂಕಿನ ಹುಣಸಿಹಾಳ ಹುಡಾ ಗ್ರಾಮದ ಸರ್ವೇ ನಂ.68/*/1, 2 ಎಕರೆ 2 ಗುಂಟೆ ವಕ್ಫ್ ಆಸ್ತಿ ಇದೆ. ಅದನ್ನು ಮಹ್ಮದ ಇಲಿಯಾಸ್ ಪಾಷಾ ತಂದೆ ಮಹ್ಮದ್ ಖಾಸರ್ ಪಾಷಾ ಎನ್ನುವವರ ಹೆಸರಿಗೆ ನೋಂದಣಿ ಮಾಡಲು ಮುಮ್ರಾಜ್ ಬೇಗಂ ಗಂಡ ಶೇಖ್ ಅಲಿ ಇವರು ಅರ್ಜಿ ಸಲ್ಲಿಸಿದ್ದಾರೆ. ಈ ಆಸ್ತಿಯು ಅಗ್ರಿಮೆಂಟ್ ಆಫ್ ಸೇಲ್ ಆಗಿದ್ದು, ಇನ್ನೂ ಸೇಲ್ ಡೀಡ್ ಆಗಿಲ್ಲ ಎಂದು ವಿವರಿಸಿದರು.
ಈ ಆಸ್ತಿಯು ಪಹಣಿಯಲ್ಲಿ ವಕ್ಫ್ ಬೋರ್ಡ್ ಸರ್ಕಾರಿ ಜಮೀನು ಎಂದೇ ತೋರಿಸುತ್ತದೆ. ಈ ಕುರಿತು ಉಪ ನೋಂದಣಾ ಧಿಕಾರಿಗಳು ಸೇಲ್ ಆಫ್ ಅಗ್ರಿ ಮೆಂಟ್ ಮಾಡಿದ್ದು, ಜಿಲ್ಲಾ ನೋಂದಣಾಧಿಕಾರಿಗಳು ರಾಯಚೂರು ಇವರಿಗೆ ದೂರು ಸಲ್ಲಿಸಲಾಗಿದೆ. ಆದರೆ, ವಕ್ಫ್ ಆಸ್ತಿ ಎಂದು ಗೊತ್ತಾದರೂ ಉಪ ನೋಂದಣಾ ಧಿಕಾರಿಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಈ ಅಕ್ರಮದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದರು.
ಈ ಕುರಿತು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸರ್ಕಾರಿ ಜಮೀನನ್ನು ವರ್ಗಾವಣೆ ಮಾಡಿದ್ದಾರೆಯೇ ಇಲ್ಲವೇ ಎಂದು ತನಿಖೆ ನಡೆಸಿ ಕಾನೂನು ಕ್ರಮ ವಹಿಸಿಬೇಕು. ಇಲ್ಲದಿದ್ದಲ್ಲಿ ಈ ಕುರಿತು ನ್ಯಾಯಾಂಗ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ರಾಜ್ಯಾಧ್ಯಕ್ಷ ಸೈಯದ್ ರಶೀದ್, ರಾಜ್ಯ ಕಾರ್ಯದರ್ಶಿ ಇಮ್ರಾನ್ ಬಡೇಸಯ, ಮಹ್ಮದ್ ಅನ್ಸಾರ್, ಶೇಖ್ ಇಸ್ಮಾಯಿಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ