ದೇವರಿಗೆ ಭಕ್ತಿ ಭಾವದ ಸಮರ್ಪಣೆಯೇ ಮುಖ್ಯ
Team Udayavani, May 22, 2021, 4:16 PM IST
ರಾಮನಗರ: ಹಬ್ಬ-ಹರಿದಿನಗಳಲ್ಲಿ ದೇವರಿಗೆ ನಾವುಎನನ್ನು ಅರ್ಪಿಸಿದೆವು ಎಂಬುದು ಮುಖ್ಯವಲ್ಲ,ಯಾವ ಭಾವದಿಂದ ಅರ್ಪಿಸಿದ್ದೇವೆ ಎಂಬುದೇಮುಖ್ಯವಾಗಿದೆ ಎಂದು ಶ್ರೀ ವಾಸವಿ ಪೀಠಾದಿಪತಿಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶುಕ್ರವಾರ ವಾಸವಿ ಜಯಂತಿ ಅಂಗವಾಗಿ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆದ ಪೂಜಾಕೈಂಕರ್ಯಗಳ ನೇರ ಪ್ರಸಾರದಲ್ಲಿ ಆಶೀವರ್ಚನನೀಡಿದ ಅವರು, ವಾಸವಿ ಜಯಂತಿ ಹಿಂದಿನ ತತ್ವಗಳನ್ನು ಕಿರಿಯರಿಗೆ ತಿಳಿಸಿಕೊಡಬೇಕು. ದೇವರಿಗೆಭಕ್ತಿಯಿಂದ ಒಂದೇ ಒಂದು ಹೂ ಅಥವಾ ಒಂದುಉದ್ದರಣೆ ನೀರು ಅಥವಾ ಒಂದೇ ಒಂದು ಫಲವನ್ನು ನೀಡಿದರು ದೇವರು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂದು ಹೇಳಿದರು.
ಕೋವಿಡ್ ಮುಕ್ತ ವಿಶ್ವಕ್ಕಾಗಿ ಪ್ರಾರ್ಥಿಸಿ: ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ರಾ.ಪ.ರವಿಶಂಕರ್ ಮಾತನಾಡಿ, ವಾಸವಿ ಜಯಂತಿಯ ಈಸಂದರ್ಭದಲ್ಲಿ ಸಕಲರು ಪ್ರಾರ್ಥಿಸಿ ಇಡೀ ಜಗತ್ತುಕೋವಿಡ್ ಸಾಂಕ್ರಮಿಕ ರೋಗದಿಂದ ಮುಕ್ತಗೊಳಿಸುವಂತೆ ಪ್ರಾರ್ಥನೆ ಮಾಡಿ ಎಂದರು.ಆರ್ಯವೈಶ್ಯ ಸಮುದಾಯ ಪ್ರತಿ ವರ್ಷವಾಸವಿ ಜಯಂತಿಯನ್ನು ವಾಸವಿ ದೇವಾಲಯಗಳ ಜತೆಗೂಡಿ ಆಚರಿಸುವುದು ವಾಡಿಕೆ, ಆದರೆ ಈಬಾರಿ ಕೋವಿಡ್ ಹಿನ್ನೆಲೆ ಇದು ಸಾಧ್ಯವಾಗಿಲ್ಲ.ಆದರೆ ಪ್ರತಿಯೊಂದು ಕುಟುಂಬವೂ ತಮ್ಮ ಮನೆಗಳಲ್ಲೇ ಪೂಜಿಸಿ ಕೃತಾರ್ಥರಾಗಿದ್ದಾರೆ ಎಂದರು.
ಕೋವಿಡ್ ಸೋಂಕು ಆರ್ಯವೈಶ್ಯರನ್ನು ಬಾಧಿಸಿದೆ. ಆದರೆ ಶೇ 90ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಲಾಕ್ಡೌನ್ ಮುಗಿದಾಕ್ಷಣ ಕೋವಿಡ್ ಮುಕ್ತಾವಾಯಿತು ಎಂಬ ಭಾವನೆಬೇಡ ಎಂದು ಎಚ್ಚರಿಸಿದ ಅವರು, ಇದು ಕ್ಲಿಷ್ಟಸಂದರ್ಭ ಹೀಗಾಗಿ ಸಮಾಜದಲ್ಲಿ ಪರಸ್ಪರ ಸಹಕಾರ ಮುಖ್ಯ. ಹಸಿದವರಿಗೆ ಆಹಾರ, ಶಿಕ್ಷಣಾರ್ಥಿಗಳಿಗೆ ಸಹಕಾರ, ಔಷಧೋಪಚಾರಕ್ಕೆ ಸಹಕಾರ ನೀಡುವಂತೆ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನುತಪ್ಪದೆ ಪಾಲಿಸಿ ಎಂದರು. ಸುಮಾರು 2 ಗಂಟೆಗಳಕಾಲ ದೇಗುಲದಲ್ಲಿ ನಡೆದ ಕಾರ್ಯಕ್ರಮಗಳ ಕುರಿತುನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ