ತೀರ್ಥಹಳ್ಳಿ : ಓಮ್ನಿಗೆ ಢಿಕ್ಕಿ ಹೊಡೆದ ಬೈಕ್ ; ಶಾಲಾ ಹೆಡ್ ಮಾಸ್ಟರ್ ಸ್ಥಳದಲ್ಲೇ ಸಾವು
Team Udayavani, Aug 6, 2022, 5:38 PM IST
ತೀರ್ಥಹಳ್ಳಿ : ಓಮ್ಮಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಶಾಲಾ ಹೆಡ್ ಮಾಸ್ಟರ್ ರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕಟ್ಟೆಹಕ್ಲು ಸಮೀಪ ನಡೆದಿದೆ.
ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ವೆಂಕಟೇಶ್ (51) ಮೃತ ವ್ಯಕ್ತಿ. ವೆಂಕಟೇಶ್ ಕೊಪ್ಪ ತಾಲೂಕಿನ ಬೊಮ್ಲಾಪುರದ ಹುಕ್ಕಳಿಕೆಯವರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್: ಐತಿಹಾಸಿಕ ಬೆಳ್ಳಿ ಗೆದ್ದ ಪ್ರಿಯಾಂಕಾ ಗೋಸ್ವಾಮಿ- ಅವಿನಾಶ್ ಸಬ್ಲೆ
ವೆಂಕಟೇಶ್ ಬೈಕ್ನಲ್ಲಿ ಬರುತ್ತಿದ್ದಾಗ, ನಾಗರವಳ್ಳಿ ಸಮೀಪದ ರಸ್ತೆ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಓಮ್ನಿಗೆ ಬೈಕ್ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡ ವೆಂಕಟೇಶ್ರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಾಲೆಯ ಕೆಲಸದ ಸಲುವಾಗಿಯೇ ಹೊರಗಡೆ ಹೊರಟಾಗ ಈ ಅವಘಡ ಸಂಭವಿಸಿದೆ.
ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.