ತಂದೆ ಬುದ್ದಿವಾದ ಹೇಳಿದಕ್ಕೆ ಮನನೊಂದ ಮಗ ವಿಷ ಸೇವಿಸಿ ಆತ್ಮಹತ್ಯೆ
Team Udayavani, Oct 17, 2022, 10:25 PM IST
ಕುಣಿಗಲ್ : ತಂದೆ ಬುದ್ದಿವಾದ ಹೇಳಿದಕ್ಕೆ ಬೇಸತ್ತ ಮಗನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತಗೆರೆ ಹೋಬಳಿ ಗಂಗೇನಹಳ್ಳಿ ಗ್ರಾಮ ಅಡಿಕೆ ತೋಟದಲ್ಲಿ ಸೋಮವಾರ ನಡೆದಿದೆ,
ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದ ಸುಹೇಲ್ ಖಾನ್ (21 )ಆತ್ಮಹತ್ಯೆ ಗೆ ಶರಣಾದ ಯುವಕ.
ಘಟನೆ ವಿವರ
ಮೃತ ಯುವಕನ ತಂದೆ ಹುಸೇನ್ ಖಾನ್ ಕೊತ್ತಗೆರೆ ಹೋಬಳಿ ಗಂಗೇನಹಳ್ಳಿ ಗ್ರಾಮದಲ್ಲಿ ಅಡಿಕೆ ಚೇಣಿ ಮಾಡಿಕೊಂಡಿರುತ್ತಾರೆ ಎನ್ನಲಾಗಿದ್ದು, ಸೋಮವಾರ ಅಡಿಕೆ ಕೀಳಲು ಗಂಗೇನಹಳ್ಳಿಗೆ ಹೋಗಲು ಹುಸೇನ್ ಖಾನ್ ತನ್ನ ಮಗನಿಗೆ ತಿಳಿಸಿರುತ್ತಾರೆ, ಬೆಳಗ್ಗೆ 8 ಗಂಟೆಯಾದರು ಸುಹೇಲ್ ಖಾನ್ ಅಡಿಕೆ ಕೀಳಲು ಹೋಗದೇ ಮನೆಯಲ್ಲಿ ಮಲಗಿದ್ದನ್ನು ಎನ್ನಲಾಗಿದ್ದು ಈ ಸಂಬಂಧ ಹುಸೇನ್ ಖಾನ್ ಬುದ್ದಿವಾದ ಹೇಳಿದಕ್ಕೆ ಮನನೊಂದ ಸುಹೇಲ್ ಖಾನ್ ಗಂಗೇನಹಳ್ಳಿ ಗ್ರಾಮದ ಗಂಗಣ್ಣ ಅವರ ಅಡಿಕೆ ತೋಟದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ, ವಿಚಾರ ತಿಳಿದ ತಂದೆ ಹುಸೇನ್ ಖಾನ್ ತನ್ನ ಮಗನನ್ನು ಪಟ್ಟ ಣದ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದ್ಯೋಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿ ಮೃತಪಟ್ಟಿದ್ದಾನೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ