4 ವರ್ಷಗಳ ಹಿಂದೆ ಶಿಲಾನ್ಯಾಸ; ಮೊದಲ ಹಂತವಷ್ಟೇ ಪೂರ್ಣ
ಕೊಂಕಣ ರೈಲ್ವೇ ಕೌಶಲ ಕೇಂದ್ರ ಶೀಘ್ರ ಉದ್ಘಾಟನೆ
Team Udayavani, Mar 3, 2020, 5:16 AM IST
ಉಡುಪಿ: ಕೊಂಕಣ ರೈಲ್ವೇಯ ಸಾಕಾರಕ್ಕೆ ಯೋಗದಾನ ನೀಡಿದವರಲ್ಲಿ ಒಬ್ಬರಾದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹೆಸರಿನಲ್ಲಿ ರೈಲ್ವೇ ಗೋಡೌನ್ ರಸ್ತೆ ಪಕ್ಕದಲ್ಲಿ ನಿರ್ಮಿಸಲಾದ ಕೌಶಲ ಅಭಿವೃದ್ಧಿ ಕೇಂದ್ರ ಶೀಘ್ರವೇ ಉದ್ಘಾಟನೆಗೊಳ್ಳಲಿದೆ.
2015ರ ನವೆಂಬರ್ 16ರಂದು ಆಗಿನ ಕೇಂದ್ರ ಸಚಿವ ಸುರೇಶ ಪ್ರಭು ಅವರು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ತಳ ಅಂತಸ್ತು ಮತ್ತು ಎರಡು ಮಹಡಿಗಳ ಮೂಲ ಯೋಜನೆಯಲ್ಲಿ ಈಗ ತಳ ಅಂತಸ್ತು ಮಾತ್ರ ನಿರ್ಮಾಣಗೊಂಡಿದೆ. ಪೀಠೊಪಕರಣ ಸೇರಿ ಒಟ್ಟು 2.96 ಕೋ.ರೂ. ಮೊತ್ತದ ಯೋಜನೆ ಇದು.
ಈಗಾಗಲೇ ಎರಡು ವರ್ಷ ಗಳಲ್ಲಿ ಉಡುಪಿ ಆಸುಪಾಸಿನ ಕಾಲೇಜುಗಳಿಗೆ ಹೋಗಿ ಕೊಂಕಣ ರೈಲ್ವೇ ತರಬೇತಿ ಸಂಸ್ಥೆಯಿಂದ 1,400 ಮಂದಿಗೆ ಮೃದು ಕೌಶಲ ತರಬೇತಿ ಒದಗಿಸಲಾಗಿದೆ.
ಕಟ್ಟಡ ರಚನೆಯಾಗದ ಕಾರಣ ಮಡಗಾಂವ್ನಲ್ಲಿರುವ ಕೊಂಕಣ ರೈಲ್ವೇ ಸಿಬಂದಿಗೆ ತರಬೇತಿ ನೀಡುವ ಸಂಸ್ಥೆಯೇ ಇದನ್ನು ನಿರ್ವಹಿಸುತ್ತಿತ್ತು. ಇನ್ನು ಮುಂದೆ ಕೊಂಕಣ ರೈಲ್ವೇ ಸಿಬಂದಿ ವಿಭಾಗ ತರಬೇತಿಯನ್ನು ಮುನ್ನಡೆಸಲಿದೆ.
ವಿವಿಧ ಬಗೆಯ ತರಬೇತಿ
ನಾಯಕತ್ವ, ಸಂದರ್ಶನ ಎದುರಿ ಸುವ ಬಗೆ, ಸಮೂಹ (ತಂಡ) ಕಾರ್ಯ, ಸಂವಹನ ಕಲೆ ಮೊದಲಾದ ತರಬೇತಿಗಳಿರುತ್ತವೆ. ಮುಂದೆ ಮೆಕಟ್ರಾನಿಕ್ಸ್ (ಮೆಕ್ಯಾನಿಕಲ್ ಮತ್ತು ಮಾಹಿತಿ ತಂತ್ರಜ್ಞಾನ ಸಮ್ಮಿ ಳಿತ) ತರಬೇತಿಯನ್ನು ನೀಡುವ ಯೋಜನೆ ಇದೆ. ಅದಕ್ಕೆ ಕೆಲವೊಂದು ಯಂತ್ರೋಪಕರಣಗಳು ಅಗತ್ಯ ವಾಗಿರುವುದರಿಂದ ಆರಂಭಕ್ಕೆ ಸ್ವಲ್ಪ ಕಾಲಾವಕಾಶ ಹಿಡಿಯಬಹುದು.ಮೊದಲ ಮತ್ತು ಎರಡನೇ ಮಹಡಿ ಯನ್ನು ತಲಾ 1.28 ಕೋ.ರೂ. ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವವಿದೆ.
ಕೊಂಕಣ ರೈಲ್ವೇ ಸಾಕಾರಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದ ಜಾರ್ಜ್ ಫೆರ್ನಾಂಡಿಸ್ ಹೆಸರಿನಲ್ಲಿ ಮಡಗಾಂವ್ನಲ್ಲಿ ಸುರಂಗ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸ ಲಾಗಿದ್ದು, ಅಲ್ಲಿ ಎಂಜಿನಿಯರುಗಳಿಗೆ ಸುರಂಗ ತಂತ್ರಜ್ಞಾನ ತರಬೇತಿ ನೀಡಲಾಗುತ್ತಿದೆ. ಮಧು ದಂಡವತೆ ಸ್ಮರಣಾರ್ಥ ಮಹಾರಾಷ್ಟ್ರದಲ್ಲಿ ಒಂದು ಸಂಸ್ಥೆಯನ್ನು ಆರಂಭಿಸುವುದಾಗಿ ಹೇಳಲಾಗಿದ್ದರೂ ಅದಿನ್ನೂ ಆರಂಭ ವಾಗಿಲ್ಲ.
ರಾಮಕೃಷ್ಣ ಹೆಗಡೆ ಕೌಶಲ ಅಭಿವೃದ್ಧಿ ಕೇಂದ್ರದ ಕಟ್ಟಡ ಮಾರ್ಚ್ ಅಂತ್ಯದೊಳಗೆ ಉದ್ಘಾಟನೆಯಾಗಲಿದೆ. ಸದ್ಯ ಲಘು ಕೌಶಲ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ. ಮುಂದಿನ ಹಂತದ ಕಟ್ಟಡ ಪೂರ್ಣಗೊಂಡ ಬಳಿಕ ವಸತಿ ಸೌಲಭ್ಯ ಸಹಿತ ತರಬೇತಿಯನ್ನು ನೀಡುವ ಇರಾದೆ ಇದೆ.
– ಬಿ.ಬಿ. ನಿಕಮ್, ಪ್ರಾದೇಶಿಕ ವ್ಯವಸ್ಥಾಪಕರು, ಕೊಂಕಣ ರೈಲ್ವೇ, ಕಾರವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ