ಶಿರ್ವ: ತೆಂಕು-ಬಡಗು ಯಕ್ಷಗಾನ ಕೂಡಾಟ, ಸಮ್ಮಾನ
Team Udayavani, Sep 18, 2017, 7:55 AM IST
ಶಿರ್ವ: ಇಲ್ಲಿನ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಶಿರ್ವದ ಸಮಾಜ ಸೇವಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ರವಿವಾರ ನಡೆದ-ಭಜನ-ಪೂಜನ- ಭೋಜನ-ಯಕ್ಷಗಾನ-ಸಮ್ಮಾನ ಕಾರ್ಯಕ್ರಮವನ್ನು ಕೊಲ್ಲಬೆಟ್ಟು ಮನೆಯ ಹಿರಿಯರಾದ ರಾಮ ಶೆಟ್ಟಿ ದಂಪತಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರಾದ ಪುಂಡಲೀಕ ಮರಾಠೆ (ಪತ್ರಿಕೋದ್ಯಮ), ಬಂಟಕಲ್ಲು ರಾಮಕೃಷ್ಣ ಶರ್ಮ (ಕೃಷಿ), ಸೂಡ ಹರೀಶ್ ಶೆಟ್ಟಿ (ಯಕ್ಷಗಾನ), ಸಂದೀಪ್ ಶೆಟ್ಟಿ ಮುಂಬಯಿ (ಸ್ಥಳೀಯ ಯುವ ಪ್ರತಿಭೆ), ವೆಂಕಟು ದೇವಾಡಿಗ (ಪಾಕಶಾಸ್ತ್ರಜ್ಞ) ಮತ್ತು ಮಂದಾರ ಮನೋಹರ ಶೆಟ್ಟಿ (ಸಮಾಜ ಸೇವೆ) ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರ ಪರವಾಗಿ ಮನೋಹರ ಶೆಟ್ಟಿ, ಪುಂಡಲೀಕ ಮರಾಠೆ, ಹರೀಶ್ ಶೆಟ್ಟಿ, ರಾಮಕೃಷ್ಣ ಶರ್ಮ, ಸಂದೀಪ್ ಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಅವರನ್ನು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸಮ್ಮಾನಿಸಲಾಯಿತು.
ಯಶಸ್ವಿ ಕಾರ್ಯಕ್ರಮ
ಅತಿಥಿಗಳ ಪರವಾಗಿ ಶಿಕ್ಷಕ ಸಾಯಿನಾಥ ಶೆಟ್ಟಿ ಮುಂಡ್ಕೂರು ಮಾತನಾಡಿ, ಅಕ್ಷರಕ್ಕೆ ಅರ್ಥ ಬರಲು ಪದಪುಂಜವಿರುವಂತೆ ಮನುಷ್ಯನ ವ್ಯಕ್ತಿತ್ವಕRೆ ಬೆಲೆ ಬರಲು ತಾನು ಮಾಡಿದ ಕೆಲಸ ಯಶಸ್ವಿ ಯಾಗಬೇಕಾಗುತ್ತದೆ. ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಅವರು ಆಯೋಜಿಸಿದ ಭಜನ-ಪೂಜನ-ಭೋಜನ-ಯಕ್ಷಗಾನ-ಸಂಮಾನ ಯಶಸ್ವಿಯಾಗಿದೆ ಎಂಬುದಕ್ಕೆ ಇಂದು ಸೇರಿದ ಜನಸ್ತೋಮವೇ ಸಾಕ್ಷಿ ಎಂದು ಹೇಳಿದರು. ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್ ಮಾತನಾಡಿ, ಮನುಷ್ಯ ಜಾತಿ ಮತ ಭೇದವಿಲ್ಲದೆ ಸಮಾಜವನ್ನು ಪ್ರೀತಿಸುತ್ತ ಜೀವಿಸಬೇಕು. ಸಾಧಕರನ್ನು ಸಮ್ಮಾನಿಸುವ ರವೀಂದ್ರ ಶೆಟ್ಟಿ ಅವರಂತಹ ನೂರಾರು ಜನರು ಹುಟ್ಟಿ ಬರಲಿ ಎಂದು ಹೇಳಿದರು.
ಉಡುಪಿಯ ಉದ್ಯಮಿ ಸಾಯಿರಾಧಾ ಗ್ರೂಪ್ನ ಮನೋಹರ ಶೆಟ್ಟಿ, ಬಳ್ಳಾರಿ ಉದ್ಯಮಿ ಮತ್ತು ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ ಶಿರ್ವ ಮಹಾಲಸಾ ನಾರಾಯಣೀ ದೇವಸ್ಥಾನದ ಅರ್ಚಕ ರಘುರಾಮ ಶೆಣೈ, ಉದ್ಯಮಿಗಳಾದ ಉದಯ ಶೆಟ್ಟಿ ಪಂಜಿಮಾರು, ಖಾಂದೇಶ್ ಭಾಸ್ಕರ ಶೆಟ್ಟಿ, ಬೆಂಗಳೂರು ಮದರ್ ಫೌಂಡೇಶನ್ನ ರಾಜೇಶ್ ಶೆಟ್ಟಿ ಕುತ್ಯಾರು, ಉದಯಶೆಟ್ಟಿ ಕಲ್ಲರಬೆಟ್ಟು, ಕುಶ ಶೆಟ್ಟಿ ನ್ಯಾರ್ಮ, ಹಿರಿಯರಾದ ರಾಮ ಶೆಟ್ಟಿ ಕೊಲ್ಲಬೆಟ್ಟು, ಶಿರ್ವ ನಡಿಬೆಟ್ಟು ಸೀತಾರಾಮ ಹೆಗ್ಡೆ, ಶಂಭು ಶೆಟ್ಟಿ ಅಟ್ಟಿಂಜೆ, ಸಮಾಜ ಸೇವಕ ಲೀಲಾಧರ ಶೆಟ್ಟಿ ಕರಂದಾಡಿ, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಅರಸ್, ತಮ್ಮಣ್ಣ ಪೂಜಾರಿ ಜತ್ರಬೆಟ್ಟು ವೇದಿಕೆಯಲ್ಲಿದ್ದರು.
ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಮುಖಂಡರಾದ ಉದಯಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಯಶ್ಪಾಲ್ ಸುವರ್ಣ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್, ಉದ್ಯಮಿ ವಿನೂ ವಿಶ್ವನಾಥ ಶೆಟ್ಟಿ,ಮತ್ತಿತರರು ಭಾಗವಹಿಸಿದ್ದರು.
ಉಪನ್ಯಾಸಕಿ ಲಕ್ಷೀ¾ದೇವಿ ಮತ್ತು ಮಂಜುನಾಥ್ ಸಮ್ಮಾನಿತರ ಪರಿಚಯಿಸಿದರು. ಉಪನ್ಯಾಸಕ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ತೆಂಕು-ಬಡಗು ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ಕರ್ಣಾರ್ಜುನ-ಕಂಸ ಜನನ ಕೂಡಾಟ ನಡೆಯಿತು.