Udupi ಶ್ರೀಕೃಷ್ಣ ಮಠದಲ್ಲಿ ತುಳಸೀ ಪೂಜೆ, ಕುಕ್ಕೆಯಲ್ಲಿ ಗಜಲಕ್ಷ್ಮೀ ಪೂಜೆ
Team Udayavani, Nov 15, 2023, 11:36 PM IST
ಉಡುಪಿ/ ಸುಬ್ರಹ್ಮಣ್ಯ: ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬುಧವಾರ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದಲ್ಲಿ ತುಳಸೀ ಪೂಜೆ ನೆರವೇರಿಸಿದರು. ಅನಂತರ ತುಳಸೀ ಸಂಕೀರ್ತನೆ ನಡೆಯಿತು.
ಸಂಕೀರ್ತನೆಯು ನ. 24ರ ಉತ್ಥಾನದ್ವಾದಶಿ ವರೆಗೆ ನಿತ್ಯ ಸಂಜೆ ನಡೆಯಲಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗಜರಾಣಿ ಯಶಸ್ವಿಗೆ ಮಂಗಳವಾರ ಬಲಿಪಾಡ್ಯಮಿ ಪ್ರಯುಕ್ತ ಗಜಲಕ್ಷ್ಮೀ ಪೂಜೆಯನ್ನು ಕ್ಷೇತ್ರದ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ನೆರವೇರಿಸಿದರು.
ಆನೆಗೆ ಹಣ್ಣುಹಂಪಲು ತೆಂಗಿನಕಾಯಿ, ಅವಲಕ್ಕಿ, ಹೊದ್ಲು , ಬೆಲ್ಲ, ಹಣ್ಣು ಹಂಪಲು, ತೆಂಗಿನ ಕಾಯಿ ಇತ್ಯಾದಿ ತಿನಿಸುಗಳನ್ನು ನೀಡಿದರು.