ಮಾರಿಕಾಂಬೆ ದರ್ಶನಕ್ಕೆ ಭಕ್ತರ ದಂಡು
Team Udayavani, Mar 6, 2020, 5:13 PM IST
ಶಿರಸಿ: ಗದ್ದುಗೆ ಏರಿದ ಮಾರಿಕಾಂಬೆ ದರ್ಶನಕ್ಕೆ ಪ್ರಥಮ ದಿನವೇ ನಾಡಿನ ಮೂಲ ಮೂಲೆಗಳಿಂದ ಭಕ್ತ ಸಾಗರ ಹರಿದು ಬಂದಿದ್ದು ಜಾತ್ರೆಗೆ ಇನ್ನಷ್ಟು ಕಳೆ ಕಟ್ಟಿತ್ತು. ಜಾತ್ರೆಯ ವಿಧ್ಯುಕ್ತ ಆರಂಭವಾಗಿ ಮೂರನೇ ದಿನವಾಗಿದ್ದರೂ ಮಂಗಳವಾರ ರಾತ್ರಿ ಕಲ್ಯಾಣ ಪ್ರತಿಷ್ಠೆ, ಬುಧವಾರ ಶೋಭಾಯಾತ್ರೆ ಹಾಗೂ ಗುರುವಾರದಿಂದ ವಿವಿಧ ಸೇವೆಗಳು ಆರಂಭವಾಗುವುದು ಸಂಪ್ರದಾಯವಾಗಿದೆ.
ಮುಂಜಾನೆ ಐದು ಗಂಟೆಯಿಂದಲೇ ದೇವರ ಸೇವೆಗಳು ಆರಂಭವಾಗ ಬೇಕಿದ್ದರೂ ಭಕ್ತರು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ತಾಯಿಯ ದರ್ಶನ ಹಾಗೂ ಉಡಿ, ಹರಕೆ ಸಲ್ಲಿಕೆಗೆ ಸರತಿಯಲ್ಲಿ ನಿಂತಿದ್ದು ವಿಶೇಷವೇ ಆಗಿತ್ತು. ಮುಂಜಾನೆಯಿಂದಲೇ ಉಡಿ, ಸೀರೆಯ ಅರ್ಪಣೆ, ಹಾರುಗೋಳಿ ಸೇವೆ, ಅಕ್ಕಿ, ಕಾಯಿಗಳ ತುಲಾಭಾರ ಸೇವೆ ಕೊಟ್ಟವರು ಹೆಚ್ಚಿದ್ದರು. ಇಪ್ಪತ್ತು ಸಾವಿರಕ್ಕೂ ಅಧಿಕ ಉಡಿಗಳು ಒಂದೇ ದಿನ ದೇವಿಯ ಪಾದ ಸೇರಿದವು. ಮನು ಪೂಜಾರಿ ಕುಟುಂಬ ಒದಗಿಸಿದ ತುಪ್ಪದ ನೆಣೆಯಿಂದ ದೇವಿಗೆ ಆರತಿ ಮಾಡಲಾಯಿತು. ದೇವಿಯ ದರ್ಶನ ಪಡೆದು ಆರತಿ ಪಡೆಯುವದು ಜಾತ್ರೆಯ ವಿಶೇಷವಾಗಿತ್ತು.
ಹಣ್ಣು ಕಾಯಿ ಒಡೆಸುವ ಭಕ್ತರೂ ಕುಂದಾಪುರ, ಮಂಗಳೂರು, ಉಡುಪಿ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳಿಂದಲೂ ಭಕ್ತರು ಆಗಮಿಸಿದ್ದರು. ಹಣ್ಣುಕಾಯಿ ಒಡೆಯುವ ಸ್ಥಳ ಈ ಬಾರಿ ವಿಸ್ತಾರ ಮಾಡಿದ್ದರಿಂದ ಅಷ್ಟು ರಶ್ ಆಗಿರಲಿಲ್ಲ. ಮರ್ಕಿ ದುರ್ಗಿ ದೇವಸ್ಥಾನದಿಂದ ಬೇವಿನ ಉಡಿ ಸೇವೆಯನ್ನು ಮಕ್ಕಳು, ಮಹಿಳೆಯರು ಕೂಡ ಸಲ್ಲಿಸಿದರು. ಕೆಲವರು ದೀಡ ನಮಸ್ಕಾರ ಹಾಕಿದರು.
ದೇವಿ ದರ್ಶನಕ್ಕೆ ಕೋಟೆಕೆರೆಯ ತನಕ ಸರತಿ ಹೋಗಿತ್ತು. ದೇವಸ್ಥಾನದಿಂದ ಕಿಮೀ ಉದ್ದದ ತನಕ ನೆರಳಿನ ವ್ಯವಸ್ಥೆ ಮಾಡಿತ್ತು. ತಂಪು ಪಾನೀಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಶಿವಾಜಿ ಚೌಕದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ದೇವಸ್ಥಾನದಿಂದ ಮಾರಿಗುಡಿ ಶಾಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಮಾಡಿದ್ದರು. ಸಾಂಬಾರ, ಪಾಯಸದ ಊಟ ರುಚಿಕರವಾಗಿತ್ತು. ಒಂಬತ್ತು ಸಾವಿರಕ್ಕೂ ಅಧಿಕ ಜನರು ಪ್ರಸಾದ ಭೋಜನ ಮಾಡಿದ್ದರು. ಅಡಕೆ ಹಾಳೆ ಪೇಟ್ ಬಳಸಿ ಪರಿಸರ ಪೂರಕ ವ್ಯವಸ್ಥೆ ಮಾಡಿದ್ದು ವಿಶೇಷವೇ ಆಗಿತ್ತು. ಹಳೆ ಬಿಇಓ ಕಚೇರಿಯಲ್ಲಿ ಖಾಸಗಿಯಾಗಿ ಕೂಟ ಊಟದ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್