ರಕ್ಷಣೆ ಕೋರಿ ಎಸ್ಪಿಗೆ ಕುಂವೀ ಮನವಿ
Team Udayavani, Apr 12, 2022, 5:05 PM IST
ಹೊಸಪೇಟೆ: ಕೊಲೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ಕೋರಿದ ಸಾಹಿತಿ ಕುಂ. ವೀರಭದ್ರಪ್ಪನವರು ಈ ಪ್ರಕರಣ ಕುರಿತಂತೆ ದೂರು ದಾಖಲಿಸಿಕೊಳ್ಳಬೇಕು ಎಂದು ವಿಜಯನಗರ ಎಸ್ಪಿ ಡಾ| ಅರುಣ್ ಕೆ. ಅವರಿಗೆ ಸೋಮವಾರ ಎಸ್ಪಿ ಕಚೇರಿಯಲ್ಲಿ ಮನವಿಪತ್ರ ಸಲ್ಲಿಸಿದರು.
ಭದ್ರಾವತಿಯಿಂದ ಅಂಚೆ ಮಾಡಿರುವ ಲಕೋಟೆ ಏಪ್ರಿಲ್ 4ರಂದು ಬಂದಿದೆ. ಈ ಪತ್ರದಲ್ಲಿ ನನ್ನನ್ನು ದೇಶದ್ರೋಹಿ ಎಂದು ಸಂಬೋಧಿಸಿದ್ದು, ಹಿಜಾಬ್ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ನೀವು ಮಾತನಾಡಿದ್ದೀರಿ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಇವರುಗಳು ಹಿಂದೂ ಧರ್ಮದ ವಿರೋಧಿಗಳಾಗಿದ್ದು, ಇವರನ್ನು ಕೊಲೆ ಮಾಡುತ್ತೇವೆಂದು, ಜತೆಗೆ ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿರುತ್ತದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕುಂ.ವೀ. ಅವರು ಎಸ್ಪಿ ಅವರಿಗೆ ಮನವಿ ಮಾಡಿಕೊಂಡರು.
ಸದರಿ ಪತ್ರದಲ್ಲಿ ನಿರ್ದಿಷ್ಟ ವ್ಯಕ್ತಿ ಸಹಿ ಹೆಸರು, ವಿಳಾಸ ಇರುವುದಿಲ್ಲ. “ಸಹಿಷ್ಣು ಹಿಂದೂ” ಎಂದು ಮಾತ್ರ ಕೈಬರಹದಲ್ಲಿನ ಬೆದರಿಕೆ ಪತ್ರವಾಗಿರುತ್ತದೆ. ಈ ಪತ್ರದ ವಿಷಯವು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ನನ್ನ ಬರಹಕ್ಕೆ ಧಕ್ಕೆ ತರುವಂತಿದ್ದು, ನನ್ನನ್ನು ಕೊಲ್ಲುವುದಾಗಿ ಸದರಿ ಪತ್ರದಲ್ಲಿ ಒಕ್ಕಣೆ ಇರುವುದರಿಂದ ಸಮಾಜ ವಿದ್ರೋಹದ ಸಂಘಟನೆಯ ಮತ್ತು ವ್ಯಕ್ತಿಯ, ಸಮಾಜದ ಶಾಂತಿ ಕದಡುವ ಸಮಾಜಘಾತಕ ವ್ಯಕ್ತಿಯ ಕೃತ್ಯವಾಗಿರುತ್ತದೆ ಎಂದು ಕುಂ. ವೀ. ದೂರಿದರು.
ನನ್ನ ಜೀವಿಸುವ ಹಕ್ಕಿಗೆ ದೈಹಿಕ ಸ್ವಾತಂತ್ರ್ಯಕ್ಕೆ ಅಪಾಯ ತರುವ ಸಂಭವವಿರುವುದರಿಂದ ನನಗೆ ಪೊಲೀಸ್ ರಕ್ಷಣೆ ಒದಗಿಸಿಕೊಡಬೇಕು. ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕುಂ.ವೀ. ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Ayodhya Ram Mandir ದೇಶದಲ್ಲಿ ಧರ್ಮ ಜಾಗೃತಿ ಪರ್ವ: ಪೇಜಾವರ ಶ್ರೀ
BJP ರೈತಮೋರ್ಚಾ ರಾಜ್ಯಾಧ್ಯಕ್ಷ ಭವಿಷ್ಯವಾಣಿ;ಎಂಪಿ ಚುನಾವಣೆ ನಂತರ ಕಾಂಗ್ರೆಸ್ ದೇಶದಲ್ಲಿರೊಲ್ಲ
Hosapete: ಮಕರ ಸಂಕ್ರಾತಿ: ದಕ್ಷಿಣಕಾಶಿ ಹಂಪಿಗೆ ಪ್ರವಾಸಿಗರ ದಂಡು!
Hospet: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ… ಲಾಡ್ಜ್ ಮಾಲೀಕ ಸೇರಿ ಇಬ್ಬರು ವಶಕ್ಕೆ
MUST WATCH
ಹೊಸ ಸೇರ್ಪಡೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್