ಕುಟುಂಬವೇ ಖುಷಿಯ ಇಮ್ಮಡಿಸುವ ಪಟಾಕಿ…

ಮುಂದೆ ಮಕ್ಕಳಿಗೆ ಕುಟುಂಬವೆಂದರೆ ನಾನು, ಅಮ್ಮ, ಅಪ್ಪ ಎಂದಾಗಿ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Team Udayavani, Nov 14, 2020, 11:49 AM IST

ಕುಟುಂಬವೇ ಖುಷಿಯ ಇಮ್ಮಡಿಸುವ ಪಟಾಕಿ

ಹಬ್ಬ ಬಂತೆಂದರೆ ಮನೆಯವರೆಲ್ಲ ಒಟ್ಟು ಸೇರಿ ಹಬ್ಬ ಆಚರಿಸುವುದರಲ್ಲಿ ಇರುವ ಖುಷಿ ಬೇರಾವುದರಲ್ಲಿಯೂ ಸಿಗಲಾರದು. ಇತ್ತೀಚೆಗೆ ಒತ್ತಡದ ಜೀವನದಿಂದ
ಕುಟುಂಬದ ಜತೆ ಸರಿಯಾಗಿ ದಿನಗಳನ್ನು ಕಳೆಯಲು ಕಷ್ಟವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಹಬ್ಬಗಳ ಸಂದರ್ಭ ಇವು ಸಮಸ್ಯೆಯಾಗುತ್ತದೆ.

ಈ ವರ್ಷವಂತೂ ದೂರದ ಊರುಗಳಿಗೆ ಹೋಗುವವರಿಗೆ ಕಷ್ಟವೇ. ಚಿಕ್ಕವರಿದ್ದಾಗ ಸಣ್ಣ ವಿಷಯಗಳಿಗೆ ಹೆಚ್ಚೆಚ್ಚು ಖುಷಿ ಪಡುತ್ತಿದ್ದ ನಾವು ಆ ಖುಷಿ ಗಳನ್ನು ಮರಳಿ ಪಡೆಯುವಲ್ಲಿ ವಿಫ‌ಲರಾಗಿದ್ದೇವೆ. ಬರಬರುತ್ತಾ ನಾವೆಲ್ಲರೂ ನಮ್ಮದೇ ಕುಟುಂಬವನ್ನು ಚಿಕ್ಕದಾಗಿ ಕಟ್ಟಿಕೊಂಡು ಅದೇ ನಮ್ಮ ಕುಟುಂಬವೆಂದು ಭಾವಿಸಿ ಅದೇ ಚೌಕಟ್ಟಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದೇವೆ. ಮುಂದೆ ಮಕ್ಕಳಿಗೆ ಕುಟುಂಬವೆಂದರೆ ನಾನು, ಅಮ್ಮ, ಅಪ್ಪ ಎಂದಾಗಿ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸಂತೋಷಗಳು ಹಂಚಿಕೊಂಡಾಗ ಮಾತ್ರ ಇಮ್ಮಡಿಗೊಳ್ಳುತ್ತದೆ ಎಂಬುದನ್ನು ಮಕ್ಕಳಿಗೂ ಹೇಳಿಕೊಡಬೇಕು.

ಹಿಂದೆ ನಾವು ಪಟ್ಟ ಖುಷಿಯನ್ನು ನಮ್ಮ ಮುಂದಿನ ತಲೆಮಾರಿನವರು ಅನುಭವಿಸಲು ಬಿಡುವುದು ನಮ್ಮ ಕೈಯಲ್ಲಿಯೇ ಇದೆ. ಅದನ್ನು ನಾವು ಆನಂದಿಸಲು ಬಿಡದೆ ಮಕ್ಕಳ ಮೇಲೆ ಗೂಬೆ ಕೂರಿಸುವುದು ತಪ್ಪಾಗುತ್ತದೆ. ಏಕೆಂದರೆ ನಾವು ಹೇಳಿಕೊಟ್ಟ ಸಂಸ್ಕಾರವನ್ನೇ ಮಕ್ಕಳು ಕಲಿಯುವುದು. ಹಾಗಾಗಿ ಯಾವುದನ್ನು ಹೇಳಿಕೋಡಬೇಕು, ಯಾವುದನ್ನು ಹೇಳಿಕೊಡಬಾರದು ಎಂಬುದನ್ನು ನೀವೇ ಅಳೆದು ತೂಗಿ ನೋಡಿಕೊಳ್ಳಬೇಕು.

ನಿಮ್ಮ ತಂದೆ – ತಾಯಿ ನಿಮಗೆ ಕೊಟ್ಟ ಖುಷಿಯ ದುಪ್ಪಟ್ಟನ್ನು ನಿಮ್ಮ ಮಕ್ಕಳಿಗೆ ನೀಡಿದಾಗ ಮಾತ್ರ ಬದುಕಿನ ದೊಡ್ಡ ಸಾರ್ಥಕತೆಯ ಅರಿವಾಗುವುದು. ನಗರ ಪ್ರದೇಶದಲ್ಲಿ ವಾಸಿಸುವವರು ಹಳ್ಳಿಗಳಲ್ಲಿ ಮನೆಯಿದ್ದರೆ ಒಂದೆರಡು ದಿನದ ಮಟ್ಟಿಗಾದರೂ ಮಕ್ಕಳನ್ನು ಕರೆದುಕೊಂಡು ಹೋಗಿ ಎಲ್ಲರೊಂದಿಗೆ ಹಬ್ಬ ಆಚರಿಸಿ. ಆಗ ಮಕ್ಕಳು ಎಲ್ಲರೊಂದಿಗೆ ಬೆರೆಯುವುದನ್ನು ಕಲಿಯುವುದಲ್ಲದೇ, ಅಲ್ಲಿಯ ಆಚಾರ- ವಿಚಾರ ಪದ್ಧತಿಗಳನ್ನು ನೋಡುತ್ತಾರೆ.

ಮುಂದೆ ಹೆಚ್ಚಾಗಲಾರದಿದ್ದರೂ ಸ್ವಲ್ಪ ಮಟ್ಟಿಗಾದರೂ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಬದಲಾವಣೆ ಅನಿವಾರ್ಯವಾದರೆ ಆ ಬದಲಾವಣೆಯೊಂದಿಗೆ
ಹಳೆತನದ ಸೊಬಗನ್ನು ಸೇರಿಸಿ ಸಾಗಿದಾಗ ಮಾತ್ರ ಅದಕ್ಕೊಂದು ಕಳೆ. ಆ ಹೊಸತನ ಕ್ಕೊಂದು ಮೆರುಗು. ಹಾಗಾಗಿ ದೀಪಾವಳಿ ಎಂದಲ್ಲ; ಹಬ್ಬಗಳೆಲ್ಲವನ್ನು
ಕುಟುಂಬದ ಜತೆ ಆಚರಿಸಿ ಖುಷಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.