ಪಡಿತರ ಚೀಟಿ: ಇನ್ನಷ್ಟು ಕಾಯಬೇಕು!
Team Udayavani, Aug 2, 2018, 10:51 AM IST
ಕುಂದಾಪುರ: ಆಹಾರ ಶಾಖೆಯ ತಂತ್ರಾಂಶದಲ್ಲಿ ಇನ್ನೂ ಅವಕಾಶ ಕಲ್ಪಿಸಿದ ಹೊಸದಾಗಿ ಪಡಿತರ ಚೀಟಿ ಪಡೆಯಬಯಸುವವರು ಮತ್ತಷ್ಟು ಕಾಲ ಕಾಯುವಂತಾಗಿದೆ.
ಚುನಾವಣೆ ನೀತಿಸಂಹಿತೆ ಹಿನ್ನೆಲೆ ಯಲ್ಲಿ ಮಾ. 27ರಿಂದ ಸ್ಥಗಿತವಾಗಿದ್ದ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆರೋಗ್ಯ ಕಾರ್ಡ್ ನೋಂದಣಿಗೆ ಅಗತ್ಯವಿರುವವರಿಗೆ ಮಾತ್ರ ತುರ್ತಾಗಿ ಪಡಿತರ ಚೀಟಿ ಮಾಡಿಕೊಳ್ಳಬಹುದು.
ಹೊಸದಾಗಿ ಅರ್ಜಿ ಸಲ್ಲಿಸಿದವರು ಆಹಾರ ಮತ್ತು ನಾಗರಿಕ ಪೂರೈಕೆ ಶಾಖೆಗೆ ಅಲೆದಾಡುತ್ತಿದ್ದು, ಸಮರ್ಪಕ ಮಾಹಿತಿ ಇರದ ಅಧಿಕಾರಿಗಳೂ “ಯಾವಾಗ ಆಗುತ್ತದೋ ಗೊತ್ತಿಲ್ಲ’ ಎಂದು ಉತ್ತರಿಸುತ್ತಿದ್ದಾರೆ. ಗ್ರಾ.ಪಂ. ಗಳಲ್ಲಿ ಕಾರ್ಡ್ಗಳಲ್ಲಿ ಹೆಸರು ಸೇರ್ಪಡೆ, ತೆಗೆಯುವುದು, ತಿದ್ದುಪಡಿ ಮಾತ್ರ ನಡೆಯುತ್ತಿದೆ.
ದೃಢೀಕರಣ ಇಲ್ಲ
ಗ್ರಾ.ಪಂ.ಗಳಲ್ಲಿ ತಿದ್ದುಪಡಿ ಮಾಡಿದ ಮೇಲೆ ಮುದ್ರಿತ ಪಡಿತರ ಚೀಟಿ ಫಲಾನುಭವಿಯ ಮನೆಗೇ ಬರುತ್ತದೆ. ಆದರೆ ತಿದ್ದುಪಡಿಯ ದೃಢೀಕೃತ ಪ್ರತಿ ಪಡೆ ಯಲು ಪುನಃ ತಾಲೂಕು ಕಚೇರಿಯ ಆಹಾರ ಶಾಖೆಗೇ ಬರಬೇಕು. ಪಂಚಾಯತ್ನಲ್ಲಿ ಪ್ರಿಂಟ್ ತೆಗೆಯಲು ಸಾಫ್ಟ್ ವೇರ್ನಲ್ಲಿ ಅವಕಾಶ ಇಲ್ಲ. ಇದರ ಬದಲು ಪಂಚಾಯತ್ ನಲ್ಲೇ ಮುದ್ರಣಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆಯೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಆದಾಯ ಪ್ರಮಾಣ ಪತ್ರ
ಪಡಿತರ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿಗೆ ಸಾಫ್ಟ್ ವೇರ್ನಲ್ಲಿ 5 ವರ್ಷದಿಂದ 18 ವರ್ಷದ ವರೆಗಿನ ಎಲ್ಲರ ಹೆಸರು ಸೇರ್ಪಡೆಗೂ ಆದಾಯ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಆದಾಯವಿಲ್ಲದ ಮಕ್ಕಳಿಗೆ ಕುಟುಂಬದ ಯಜಮಾನನ ಆದಾಯವೇ ಅಂತಿಮ. ಯಜಮಾನ ಮಹಿಳೆಯೇ ಆಗಬೇಕು ಎಂದಿದೆ. ವಿಳಾಸದಲ್ಲಿ ಅದಕ್ಕೆ ಬೇಕಾದ ಪೂರಕ ಅವಕಾಶ ಕಲ್ಪಿಸಿಲ್ಲ. ಆದ್ದರಿಂದ ಹೊಸ ಪಡಿತರ ಚೀಟಿ, ಸೇರ್ಪಡೆ, ತಿದ್ದುಪಡಿ ಸಂದರ್ಭ 18 ವರ್ಷ ಪ್ರಾಯ ದೊಳಗಿನವರಿಗೆ ಆದಾಯ ಪ್ರಮಾಣ ಪತ್ರ ಹಾಜರುಪಡಿಸುವಿಕೆ ಕೈಬಿಟ್ಟು ಒಂದೇ ಆದಾಯ ಪ್ರಮಾಣ ಪತ್ರದಲ್ಲಿ ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕೆಂಬುದು ಸಾರ್ವಜನಿಕರ ಆಗ್ರಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ