ಉಪ ಚುನಾವಣೆ: ಸಿದ್ಧತೆ ಪೂರ್ಣ
Team Udayavani, Oct 20, 2019, 5:24 AM IST
ಕಾಸರಗೋಡು : ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅ.21ರಂದು ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.
ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚುನಾವಣೆ ಸಾಮಾಗ್ರಿಗಳ ಸಂಗ್ರಹ ಮತ್ತು ವಿತರಣೆ ನಡೆಯಲಿದ್ದು, ಮತಗಣನೆಯೂ ಇದೇ ಶಾಲೆಯಲ್ಲಿ ಜರಗಲಿದೆ. ಮತಗಣನೆಯ ದಿನ ಮೀಡಿಯಾ ಸೆಂಟರ್ ಕೂಡ ಇಲ್ಲಿ ಚಟುವಟಿಕೆ ನಡೆಸಲಿದೆ. ಜಿಲ್ಲಾ ಧಿಕಾರಿ, ಚುನಾವಣೆ ನಿರೀಕ್ಷಕರು, ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಚುನಾವಣೆ ಅ ಧಿಕಾರಿ, ಉಪಚುನಾವಣೆ ಅ ಧಿಕಾರಿಗಳು ಇಲ್ಲಿರುವರು. ಈ ಶಾಲೆಯಲ್ಲಿ 4 ಸ್ಟಾಂಪಿಂಗ್ ರೂಂಗಳಲ್ಲಿ 258 ವಿದ್ಯುನ್ಮಾನ ಮತಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ. ಅ.20ರಂದು ಬೆಳಗ್ಗೆ 9.30ರಿಂದ 18 ವಿತರಣೆ ಕೇಂದ್ರಗಳಿಂದ ಪೋಲಿಂಗ್ ಸಿಬ್ಬಂದಿಗೆ ಮತದಾನ ಸಾಮಾಗ್ರಿಗಳನ್ನು ವಿತರಿಸಲಾಗುವುದು. ಕರ್ತವ್ಯದಲಿರುವ ಸಿಬ್ಬಂದಿಗೆ ಈ ಕೇಂದ್ರಕ್ಕೆ ತಲಪುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕೈಕಂಬದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸರ್ವೀಸ್ ನಡೆಸಲಾಗುವುದು. ಕರ್ತವ್ಯದ ಸಿಬ್ಬಂದಿಗೆ ಕುಟುಂಬಶ್ರೀ ವತಿಯಿಂದ ಆಹಾರ ಪೂರೈಕೆ ನಡೆಯಲಿದೆ.
ಸಮಸ್ಯಾತ್ಮಕ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗುವುದು. 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಇರುವುದು. 53 ಬೂತ್ಗಳಲ್ಲಿ ಮೈಕ್ರೋ ಒಬ್ಸರ್ವರ್ಗಳನ್ನು ನೇಮಿಸಲಾಗಿದೆ. ಈ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ (198) ಬುರ್ಖಾಧಾರಿ ಮಹಿಳೆಯರ ಗುರುತು ಪತ್ತೆಗೆ ಮಹಿಳಾ ಸಿಬ್ಬಂದಿ ಇದ್ದು, ಅವರಿಗೆ ಬೇಕಾದ ಚುನಾವಣೆ ಕರ್ತವ್ಯ ಸರ್ಟಿಫಿಕೆಟ್ ವಿತರಿಸಲಾಗಿದೆ.
33 ಅಂಚೆ ಮತದಾನ ಹೊಂದಿರುವ ಈ ಕ್ಷೇತ್ರದಲ್ಲಿ ಈಗ ಕೇವಲ ಒಂದು ಅರ್ಜಿ ಲಭಿಸಿದೆ ಎಂದು ಚುನಾವಣೆ ಅ ಧಿಕಾರಿ ಎನ್.ಪ್ರೇಮಚಂದ್ರನ್ ತಿಳಿಸಿದರು.
ಅ.21ರಂದು ಮತದಾನ ನಡೆಯಲಿದ್ದು, ಬೆಳಗ್ಗೆ 5.30ಕ್ಕೆ ಪ್ರಹಸನ ಮತದಾನ(ಮೋಕ್ ಪೋಲಿಂಗ್) ಆರಂಭಗೊಳ್ಳಲಿದೆ. (ಮತದಾನಕ್ಕಿಂತ 90 ನಿಮಿಷ ಮುಂಚೆ) 5.30ಕ್ಕೆ ಪೋಲಿಂಗ್ ಏಜೆಂಟರೂ ಹಾಜರಾಗುವಂತೆ ಚುನಾವಣೆ ಅ ಧಿಕಾರಿ ತಿಳಿಸಿದ್ದಾರೆ.
ಪ್ರಥಮ ಬಾರಿಗೆ
ಚುನಾವಣೆಗೆ ನೇಮಕಗೊಂಡಿ ರುವ ಸಿಬ್ಬಂದಿಗೆ ಬೇಕಾದ ತರಬೇತಿಯೂ ಈಗಾಗಲೇ ಪೂರ್ಣಗೊಂಡಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಅಕ್ರಮ ಮತದಾನ ತಡೆಯುವ ನಿಟ್ಟಿನಲ್ಲಿ ಎಲ್ಲ ಪೋಲಿಂಗ್ ಏಜೆಂಟರಿಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ