‘ಆರೋಗ್ಯಕರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಯೋಗಾಸನದ ಪಾತ್ರ ಮಹತ್ವದ್ದು’

ಚಿನ್ಮಯ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ

Team Udayavani, Jun 22, 2019, 6:09 AM IST

21KSDE11

ಕಾಸರಗೋಡು: ಭಾರತೀಯ ಪರಂಪರೆಯಲ್ಲಿ ಇಂದಿಗೂ ಉಳಿದು ವಿಶ್ವ ವಿಖ್ಯಾತಿ ಹೊಂದಿದ ಅತಿ ಶ್ರೇಷ್ಠ ಸಂಪತ್ತಾಗಿದೆ ಯೋಗ. ಯಮ, ನಿಯಮ, ಆಸನ, ಪ್ರಾಣಾ ಯಾಮ, ಪ್ರತ್ಯಾಸಾರ, ಧಾರಣ ಧ್ಯಾನ, ಸಮಾಧಿಗಳ ಮೂಲಕ ಬಾಹ್ಯ ಹಾಗೂ ಆಂತರ್ಯ ಸಾಧನಗಳಲ್ಲಿ ಶಿಸ್ತನ್ನು ಅಳವಡಿಸಿ ಆರೋಗ್ಯಕರ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಯೋಗಾಸನದ ಪಾತ್ರ ಮಹತ್ವವಾದುದು ಎಂದು ಯೋಗಾಚಾರ್ಯ ಶಿವರಾಮ ಭಟ್ ಅಭಿಪ್ರಾಯಪಟ್ಟರು.

ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 25 ವರ್ಷಗಳ ತನ್ನ ಯೋಗಾಭ್ಯಾಸದ ಅನುಭವವನ್ನು ಹೇಳುತ್ತಾ ಜೀವನದಲ್ಲಿ ಎಲ್ಲ ಸುಖಗಳನ್ನು ಅನುಭವಿಸುತ್ತಾ ಅನಾರೋಗ್ಯಕ್ಕೆ ದಾಸರಾಗುವವರು ಕೊನೆಗೆ ಮೊರೆ ಹೋಗುವುದು ಯೋಗಕ್ಕೆ. ಈಗ ವರ್ಷದಿಂದ ವರ್ಷಕ್ಕೆ ಯೋಗಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿನಿತ್ಯ ಯೋಗವನ್ನು ಅಭ್ಯಸಿಸುವವರಿಗೆ ಮಾತ್ರ ಶಾರೀರಿಕ, ಮಾನಸಿಕ ಆಧ್ಯಾತ್ಮಿಕತೆಗಳ ಸಮ್ಮಿಲನವನ್ನು ಪತಂಜಲಿಯ ಯೋಗ ಸೂತ್ರದಿಂದ ಗಳಿಸಬಹುದು ಎಂಬುದು ಸ್ವತ: ಅನುಭವಕ್ಕೆ ಬರುವುದು ಎಂದರು.

ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್‌ ಸಭೆಯನ್ನುದ್ದೇಶಿಸಿ ಮಾತನಾಡಿ, ಜೂನ್‌ 21ನ್ನೇ ಯೋಗ ದಿನವನ್ನಾಗಿ ನಮ್ಮ ಪ್ರಧಾನ ಮಂತ್ರಿಗಳು ಆಯ್ಕೆ ಮಾಡಿದುದರ ಹಿನ್ನೆಲೆಯ ಬಗ್ಗೆ ತಿಳಿಸಿದರು. ಮೊದಲನೆಯದಾಗಿ ಅಂದು ಮಹರ್ಷಿ ಪತಂಜಲಿಯ ಜನ್ಮದಿನ ಜೂನ್‌ 21 ರಂದು. ಅತ್ಯಂತ ದೀರ್ಘ‌ ದಿನವೂ ಆಗಿದೆ. ಪ್ರಾಚೀನ ಭಾರತೀಯರು ಮನಸ್ಸು ಶರೀರಗಳಿಗೆ ಸಂಬಂಧವಿಲ್ಲ. ಅವು ಪರಸ್ಪರ ಸಂಧಿಸಿದರೆ ಸಂದಿಗ್ಧಗಳಿಗೆ ಎಡೆಯಾಗುವುದೆಂಬುದನ್ನು ನಿರಾಕರಿಸಿದ ಸಂಶೋಧಕರು ಮನಸ್ಸು ಹಾಗೂ ಶರೀರಕ್ಕೆ ನಿಕಟವಾದ ಸಂಬಂಧವಿದೆ. ಅವೆರಡು ಪರಸ್ಪರ ಜೊತೆಯಾಗಿ ಕಾರ್ಯ ಪ್ರವೃತ್ತಗೊಂಡರೆ ಮಾನಸಿಕ ಶಾರೀರಿಕ ಹಾಗೂ ಬೌದ್ಧಿಕ ಸಮೀಕರಣ ಏರ್ಪಡುವುದು ಎಂದು ಸಾಧಿಸಿ ತೋರಿಸಿದರು. ಆದುದರಿಂದಲೇ ಭಾರತೀಯ ಪರಂಪರೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಯೋಗವನ್ನು ಪತಂಜಲಿಯವರು ಶಾಸ್ತ್ರೀಕರಿಸಿ ಜಗತ್ತಿಗೆ ಯೋಗ ಶಾಸ್ತ್ರವನ್ನು ಅದರಿಂದಾಗುವ ಪ್ರಯೋಜನಗಳನ್ನೂ ಪರಿಚಯಿಸಿದರು. ಇದನ್ನು ಮನಗಂಡು ಯೋಗ ಶಿಕ್ಷಣವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿದರು. ಸಿ.ಬಿ.ಎಸ್‌. ಇ. ಪಠ್ಯ ಪದ್ಧತಿಯಲ್ಲಿ ಯೋಗಕ್ಕೆ ಒಂದು ಪ್ರತ್ಯೇಕ ವೇಳೆಯನ್ನೇ ನಿಗದಿ ಪಡಿಸಬೇಕೆಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಶಾರೀರಿಕ ಮಾನಸಿಕ ಬೌದ್ಧಿಕ ಬೆಳವಣಿಗೆಗಾಗಿ ಯೋಗಾಭ್ಯಾಸ ಅನಿವಾರ್ಯ ಎಂದು ಹೇಳಿದರು.

ವಿದ್ಯಾರ್ಥಿಗಳು ಯೋಗಾಸನದ ವಿವಿಧ ಭಂಗಿಗಳನ್ನು ಅಷ್ಟಾಂಗ ಯೋಗದ ಮಹತ್ವವನ್ನು ಸಾರುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಆಯಿಷತ್‌ ಹುದ ನಿರೂಪಿಸಿ. ಆಯಿಷ ಅಫ್ನ ಸ್ವಾಗತಿಸಿದರು. ಸಾಹಿಲ್ ಫರ್ದೀನ್‌ ವಂದಿಸಿದರು.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.