‘ಕುಂಟಂಗೇರಡ್ಕ ಸಾಧನೆ ಸಾರ್ಥಕ’
Team Udayavani, Jul 10, 2019, 5:23 AM IST
ಕುಂಬಳೆ: ಹಸಿರು ಇಂದು ನಮ್ಮ ಪರಿಸರದಿಂದ ಮಾಯವಾಗುತ್ತಿದೆ. ಕಾಂಕ್ರೀಟೀಕರಣಕ್ಕೆ ನಾವು ಮಾರುಹೋಗುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹರಿತ ಕೇರಳ ಮಿಶನ್ ಹಸಿರು ತಾಣ ಎಂಬ ಹಸಿರು ಬೆಳೆಸಿ ಉಳಿಸುವ ಯೋಜನೆಯೊಂದಕ್ಕೆ ರೂಪು ನೀಡಿದೆ. ಇಂದು ಅದು ಕುಂಬಳೆ ಗ್ರಾಮ ಪಂಚಾಯತ್ನ ಕಿದೂರು ಕುಂಟಂಗೇರಡ್ಕದಲ್ಲಿ ಸಾರ್ಥಕವಾಗಿದೆ ಎಂದು ಹಸಿರು ತಾಣವನ್ನು ಉದ್ಘಾಟಿಸಿ ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಂಡರೀಕಾಕ್ಷ ಹೇಳಿದರು.
ಕಿದೂರು ಪಕ್ಷಿಪ್ರೇಮಿ ತಂಡವು ಪಾಳು ಬಿದ್ದ ಸರಕಾರಿ ಭೂಮಿಯನ್ನು ಕಳೆದ ಮೂರು ವರ್ಷಗಳಿಂದ ಜೈವ ಬೇಲಿ ನಿರ್ಮಿಸಿ ಅಲ್ಲಿ ಸ್ಥಳೀಯ ಸಸ್ಯ ಸಂಪತ್ತನ್ನು ಸಂರಕ್ಷಿಸಿ ಬರುತ್ತಿತ್ತು. ಇದೀಗ ಅದೇ ಜಾಗವನ್ನೇ ಹಸಿರು ತಾಣವನ್ನಾಗಿ ಘೋಷಿಸಲಾಯಿತು. ಅಲ್ಲದೆ ಹೆಚ್ಚಿನ ಸಸ್ಯ ಪ್ರಭೇದಗಳನ್ನು ನೆಟ್ಟು ಬೆಳೆಸುವಲ್ಲಿ ಗ್ರಾಮೀಣ ಉದ್ಯೋಗ ಖಾತರಿಯ ಸದಸ್ಯರಿಗೆ ಜವಾಬ್ದಾರಿ ನೀಡಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಅರಣಾ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದರು.
ಹರಿತ ಕೇರಳ ಮಿಶನಿನ ಜಿಲ್ಲಾ ಸಂಯೋಜಕ ಅಭಿರಾಜ್, ಕುಂಬಳೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯನ್, ಸಾಮಾಜಿಕ ಮುಂದಾಳು ಚಂದ್ರ ಕಾಜೂರು, ಚಂದ್ರಾವತಿ ಮಡ್ವ, ಕಿದೂರು ಪಕ್ಷಿ ಪ್ರೇಮಿ ತಂಡದ ಸದಸ್ಯರಾದ ರಾಜು ಕಿದೂರು, ಪ್ರದೀಪ್ ಕಿದೂರು, ರವಿಚಂದ್ರ ಕುಂಟಂಗೇರಡ್ಕ, ಸುಂದರ ಕೊಲ್ಲೂರು, ಜೋಯೆಲ್ ಕಿದೂರು ಮೊದಲಾದವರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ