ವಾಹನ ನೋಂದಣಿ “ಸಾರಥಿ ಯೋಜನೆ’ ಅನುಷ್ಠಾನ


Team Udayavani, May 6, 2019, 6:10 AM IST

vahana-nondavani

ಕಾಸರಗೋಡು: ಕೇರಳದ ಜನರು ಇನ್ನು ಮುಂದೆ ವಾಹನ ನೋಂದಾವಣೆಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ಎಲ್ಲ ವಾಹನಗಳ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ಒಂದೇ ಸೂರಿನಡಿಗೆ ತಲುಪಿಸುವುದರ ಅಂಗವಾಗಿ ನೂತನ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ವಾಹನ ನೋಂದಣಿ ಸೇವೆಗಳು (ವಾಹನ್‌) ಮತ್ತು ಚಾಲನಾ ಪರವಾನಗಿ ವ್ಯವಹಾರಗಳನ್ನು ಏಕೀಕರಿಸಿ ರಾಷ್ಟ್ರದಾದ್ಯಂತ ಕೇಂದ್ರ ಸರಕಾರವು “ಸಾರಥಿ ಯೋಜನೆ’ಯನ್ನು ಕಾರ್ಯಗತಗೊಳಿಸಿದೆ. ವಾಹನ್‌ ಸಾರಥಿ ಯೋಜನೆಯು ಪೂರ್ಣರೂಪದಲ್ಲಿ ಅನುಷ್ಠಾನಕ್ಕೆ ಬರುವುದರೊಂದಿಗೆ ಏಜೆಂಟ್‌ಗಳ ಸಹಾಯವಿಲ್ಲದೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿಯ ಸ್ಥಿತಿಯನ್ನು ಸಮಯೋಚಿತವಾಗಿ ತಿಳಿಯಲೂ ಅವಕಾಶವಿದೆ. ವಾಹನ್‌ ಸಾರಥಿ ಯೋಜನೆಯು ಜಾರಿಗೆ ಬಂದರೆ ಪರ್ಮಿಟ್‌ಗಳು ಇತ್ಯಾದಿಗಳಿಗಾಗಿ ಜನರು ಆರ್‌ಟಿಒ ಕಚೇರಿಗೆ ತೆರಳಬೇಕಾಗಿಲ್ಲ. ಇವುಗಳನ್ನೆಲ್ಲ ಸ್ವಂತ ಕಂಪ್ಯೂಟರ್‌ನಿಂದಲೇ ಡೌನ್‌ಲೋಡ್‌ ಮಾಡಲು ಸಾಧ್ಯವಿದೆ.
ನಿರ್ದಿಷ್ಟ ಸಮಯದೊಳಗೆ ವಹಿಸಿಕೊಡಲಾದ ಕೆಲಸವನ್ನು ಮಾಡಲು ಅಧಿಕಾರಿಗಳು ಹೊಣೆಗಾರ ರಾಗಿರುವರು. ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್‌ ಆಗಿ ಸಂರಕ್ಷಿಸಿಡಲು ಸಾಧ್ಯವಾಗುವ ಡಿಜಿಟಲ್‌ ಲಾಕರ್‌ ವ್ಯವಸ್ಥೆಯ ಪ್ರಯೋಜನವೂ ಸಂಪೂರ್ಣವಾಗಿ ದೊರಕಲಿದೆ.

ಈ ಯೋಜನೆಯನ್ನು ರಾಜ್ಯದ 14 ಜಿಲ್ಲೆಗಳಲ್ಲೂ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದ್ದು, ವಾಹನ ಮಾರಾಟ ಮಾಡುವಾಗ ಮಾಲಕರ ಹಕ್ಕನ್ನು ಬದಲಾಯಿಸುವುದರ ಜವಾಬ್ದಾರಿ ಕೂಡ ಇನ್ನು ಮುಂದೆ ಮಾರಾಟ ಮಾಡುವ ವ್ಯಕ್ತಿಯದ್ದಾಗಿರಲಿದೆ.

ಈ ಹಿಂದೆ ವಾಹನಗಳ ನೋಂದಣಿ ಹಾಗೂ ಲೈಸನ್ಸ್‌ ಗಾಗಿರುವ ಸ್ಮಾರ್ಟ್‌ ಮೂವ್‌ ಎಂಬ ಸಾಫ್ಟ್‌ವೇರ್‌ನ ಬದಲಿಗೆ ವಾಹನ್‌ ಸಾರಥಿಗೆ ಮೋಟಾರು ವಾಹನ ಇಲಾಖೆಯು ಮಾರ್ಪಾಡುಗೊಳ್ಳುತ್ತಿದೆ. ಇದರ ಮೂಲಕ ಪ್ರಧಾನವಾಗಿ ಆರು ಬದಲಾವಣೆಗಳೊಂದಿಗೆ ಡ್ರೈವಿಂಗ್‌ ಲೈಸನ್ಸ್‌ ಪ್ರಸ್ತುತಪಡಿಸಲಾಗುವುದು.

ಕ್ಯೂಆರ್‌ ಕೋಡ್‌, ಸರಕಾರಿ ಹಾಲೋಗ್ರಾಂ, ಮೈಕ್ರೋಲೈನ್‌, ಮೈಕ್ರೋಟೆಕ್ಸ್‌r, ಯುವಿ ಎಂಬ್ಲಿಂ, ಗೈಲ್ಲೋಚ್‌ಪ್ಯಾಟರ್ನ್ ಹೀಗೆ ಆರು ಸುರûಾ ವ್ಯವಸ್ಥೆಗಳು ನೂತನ ಕಾರ್ಡ್‌ನಲ್ಲಿ ಇರಲಿವೆ.

ಇವಲ್ಲದೆ ವ್ಯಕ್ತಿಯ ಕುರಿತಾದ ಮೂಲ ಮಾಹಿತಿಗಳನ್ನು ದಾಖಲಿಸಲು ಕೂಡ ನಿರ್ಧರಿಸಲಾಗಿದೆ.

ಕೇಂದ್ರೀಕೃತ ಸಾಫ್ಟ್‌ವೇರ್‌ ವ್ಯವಸ್ಥೆ
ವಾಹನ್‌ ಸಾರಥಿ ಸಾಫ್ಟ್‌ವೇರ್‌ಗೆ ಮಾರ್ಪಾಡುಗೊಳ್ಳುವಾಗ ಹಲವಾರು ಕ್ಲರಿಕಲ್‌, ಆಫೀಸ್‌ ಸೂಪರ್‌ವೈಸರ್‌ ಹಂತದಲ್ಲಿರುವ ಅಧಿಕಾರಿಗಳಿಗೆ ಕೆಲಸವಿಲ್ಲ ದಂತಾಗಲಿದೆ. ಇವರನ್ನು ಬೇರೆ ವಲಯಕ್ಕೆ ನಿಯೋಜಿಸಲು ತೀರ್ಮಾನಿಸಲಾಗಿದ್ದು, ಇದರೊಂದಿಗೆ ಇಲಾಖೆಯ ಕಾರ್ಯದಕ್ಷತೆ ಯನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.

ಮೋಟಾರು ವಾಹನ ಇಲಾಖೆಯು ಇನ್ನು ಮುಂದೆ ಕೇಂದ್ರೀಕೃತ ಸಾಫ್ಟ್‌ ವೇರ್‌ ಆದ ವಾಹನ್‌ ಸಾರಥಿಗೆ ಮಾರ್ಪಾಡುಗೊಳ್ಳುತ್ತಿದೆ. ಮೇ 1ರಿಂದ ಈ ಯೋಜನೆಯನ್ನು ಕೇರಳದಲ್ಲಿ ಜಾರಿಗೆ ತರಲಾಗಿದೆ. ಇನ್ನು ಮುಂದೆ ಎಲ್ಲ ಲೈಸನ್ಸ್‌ ಈ ಸಾಫ್ಟ್‌ವೇರ್‌ ಮೂಲಕ ಲಭಿಸಲಿದೆ. ಇದರಿಂದ ಕೇರಳದಲ್ಲಿ ಸಂಪೂರ್ಣವಾಗಿ ಸಾರಥಿ ಮಾದರಿಯ ಡ್ರೈವಿಂಗ್‌ ಲೈಸನ್ಸ್‌ಗಳು ದೊರಕಲಿವೆ.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.