ಪೊಂಗಲ್-ತಮಿಳು ಸಾಂಸ್ಕೃತಿಕ ಹಬ್ಬ ಆಚರಣೆ
Team Udayavani, Jan 28, 2019, 7:59 AM IST
ಸುಳ್ಯ: ತೆನ್ ಕನ್ನಡ ತಮಿಳ್ಚೇವೈ ಸಂಘಂ ಆಶ್ರಯದಲ್ಲಿ ಪೊಂಗಲ್ ಮತ್ತು ತಮಿಳು ಸಾಂಸ್ಕೃತಿಕ ಹಬ್ಬದ ಆಚರಣೆ ರವಿವಾರ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ನಡೆಯಿತು.
ಶಾಸಕ ಎಸ್. ಅಂಗಾರ ಉದ್ಘಾಟಿಸಿ ದರು. ದ.ಕ. ತಮಿಳು ಸೇವಾ ಸಂಘದ ಅಧ್ಯಕ್ಷ ವಿ. ಕನಕರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಪಿ.ಪಿ. ವರ್ಗಿಸ್, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶಕುಂತಳಾ ನಾಗರಾಜ್, ಪುತ್ತೂರು ಎಪಿಎಂಸಿ ಸದಸ್ಯೆ ಪುಲಸ್ಯಾ ರೈ, ಲಯನ್ಸ್ ಮಾಜಿ ಗರ್ವನರ್ ಎಂ.ಬಿ. ಸದಾಶಿವ, ಹಾಸನದ ಆಲೂರು ಮಹಿಳಾ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಗಣಪತಿ ಎ., ರೈಲ್ವೇ ಜೂನಿಯರ್ ಎಂಜಿನಿಯರ್ ವಿಜಯ ಕುಮಾರ್ ಸಿಂಗ್, ಉದ್ಯಮಿ ರಾಮನ್ ಪಿ.ವಿ. ಉಪಸ್ಥಿತರಿದ್ದರು.
ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆ ತೋರಿದವರನ್ನು ಸಮ್ಮಾನಿಸಲಾಯಿತು. ಪೆರುಮಾಳ್ ಸ್ವಾಗತಿಸಿ, ದಯಾಳನ್ ವಂದಿಸಿದರು. ಯೋಗನಾಥ ರಮೇಶ್ ನಿರೂಪಿಸಿದರು.